ಆ್ಯಪ್ನಗರ

ಉಚಿತ ವಾಷಿಂಗ್‌ ಮಶೀನ್‌, 2ಜಿಬಿ ಡೇಟಾ, ಮನೆಗೊಂದು ಸರ್ಕಾರಿ ನೌಕರಿ: ಇದು ಎಐಎಡಿಎಂಕೆ ಪ್ರಣಾಳಿಕೆ!

ಈ ಹಿಂದೆಯೂ ಕೂಡ, ಜಯಲಲಿತ ಅವರ ಕಾಲದಿಂದಲೂ ಜನಪ್ರಿಯ ಘೋಷಣೆಗಳ ಮೂಲಕ ಅಧಿಕಾರ ಪಡೆದಿದ್ದ ಐಎಐಡಿಎಂಕೆ ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಆ ಮೂಲಕ ಸತತ ಮೂರನೇ ಬಾರಿ ತಮಿಳು ಮತದಾರರ ಮನಗೆಲ್ಲಲು ಹೊರಟಿದೆ.

Vijaya Karnataka Web 15 Mar 2021, 11:20 am
ಚೆನ್ನೈ: ಮನೆ ಮನೆಗೆ ಉಚಿತ ವಾಷಿಂಗ್‌ ಮಶೀನ್, ಸೋಲಾರ್‌ ಸ್ಟವ್‌, ವಿದ್ಯಾರ್ಥಿಗಳಿಗೆ ಎರಡು ಜಿಬಿ ಇಂಟರ್ನೆಟ್‌, ಉಚಿತ ಕೇಬಲ್‌ ಕನೆಕ್ಷನ್‌, ಮನೆ ಬಾಗಿಲಿಗೆ ರೇಶನ್‌ ಡೆಲಿವರಿ, ಮನೆಯ ಒಬ್ಬ ಸದಸ್ಯನಿಗೆ ಸರ್ಕಾರಿ ಕೆಲಸ... ಇದು ತಮಿಳುನಾಡಿನ ಆಡಳಿತರೂಢ ಎಐಎಡಿಎಂಕೆ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯ ಹೈಲೈಟ್ಸ್‌.
Vijaya Karnataka Web aiadmk_mani


ಈ ಹಿಂದೆಯೂ ಕೂಡ, ಜಯಲಲಿತ ಅವರ ಕಾಲದಿಂದಲೂ ಜನಪ್ರಿಯ ಘೋಷಣೆಗಳ ಮೂಲಕ ಅಧಿಕಾರ ಪಡೆದಿದ್ದ ಐಎಐಡಿಎಂಕೆ ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಆ ಮೂಲಕ ಸತತ ಮೂರನೇ ಬಾರಿ ತಮಿಳು ಮತದಾರರ ಮನಗೆಲ್ಲಲು ಹೊರಟಿದೆ.

ಭಾನುವಾರ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರು ಭಾನುವಾರ ಎಐಎಡಿಎಂಕೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌, ಪೆಟ್ರೋಲ್‌ ದರ ಕಡಿತ - ಡಿಎಂಕೆಯಿಂದ ಆಶ್ವಾಸನೆಗಳ ಮಹಾಪೂರ
ಅಲ್ಲದೇ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ರದ್ದು ಮಾಡಲು ಆಗ್ರಹಿಸುವುದಾಗಿ ಹೇಳಿದೆ. ಆ ಮೂಲಕ ಮುಸ್ಲಿಂ ಮತದಾರರ ಜೋಳಿಗೆಗೆ ಎಐಎಡಿಎಂಕೆ ಕೈ ಹಾಕಿದೆ. ಚುನಾವಣೆ ಘೋಷಣೆಯಾಗುವುದಕ್ಕಿಂತ ಮುಂಚೆ ಸಿಎಎ ಹೋರಾಟಗಾರರ ಮೇಲಿನ ಕೇಸುಗಳನ್ನು ತಮಿಳುನಾಡು ಸರ್ಕಾರ ಹಿಂಪಡೆದಿತ್ತು.

ಇದೇ ವೇಳೆ ಮಹಿಳೆಯರು ಹಾಗೂ ಯುವಕರ ಮತಗಳ ಮೇಲೆ ಎಐಎಡಿಎಂಕೆ ಕಣ್ಣಿಟ್ಟಿದ್ದು, ಶಾಲಾ ಮಕ್ಕಳಿಗೆ 200 ಮಿಲಿ ಲೀಟರ್ ಹಾಲು ನೀಡುವುದಾಗಿ ಹೇಳಿದೆ. ಮಧ್ಯಾಹ್ನದ ಬಿಸಿಯೂಟವನ್ನು 9-12ನೇ ತರಗತಿ ವಿದ್ಯಾರ್ಥಿಗಳಿಗೆ ವಿಸ್ತರಿಸುವುದು, ಶಿಕ್ಷಣ ಸಾಲ ಮನ್ನಾ, ವಿದ್ಯಾರ್ಥಿಗಳಿಗೆ ನಿತ್ಯ 2GB ಇಂಟರ್ನೆಟ್‌ ಹೀಗೆ ಹಲವು ಜನಪ್ರಿಯ ಘೋಷಣೆಗಳನ್ನು ಮಾಡಿದೆ.

ತಮಿಳುನಾಡು ವಿಧಾನಸಭೆ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟ ಸ್ಟಾಲಿನ್‌ ಪುತ್ರ
ಮಹಿಳೆಯರಿಗೆ ಒಂದು ವರ್ಷದ ಹೆರಿಗೆ ರಜೆ, ವರ್ಷಕ್ಕೆ ಆರು ಗ್ಯಾಸ್‌ ಸಿಲಿಂಡರ್‌, ತೈಲ ದರ ಇಳಿಕೆ, ಮಹಿಳೆಯರು ಸಾರಥ್ಯ ವಹಿಸಿದ ಕುಟುಂಬಕ್ಕೆ ಮಾಸಿಕ 1500 ರು., ಉಚಿತ ವಾಷಿಂಗ್‌ ಮಶೀನ್‌, ಉಚಿತ ಕೇಬಲ್‌ ಟಿವಿ ಕನೆಕ್ಷನ್‌, ವೃದ್ಧಾಪ್ಯ ಮಾಶಾಸನ 1000 ದಿಂದ 2000ಕ್ಕೇರಿಕೆ ಮುಂತಾದ ಉಚಿತ ಘೋಷಣೆಗಳ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಲು ಪ್ರಯತ್ನಿಸುತ್ತಿದೆ.

ಇದಲ್ಲದೇ ರಾಜೀವ್‌ ಗಾಂಧಿ ಹಂತಕರ ಬಿಡುಗಡೆ, ರೈತರಿಗೆ ವಾರ್ಷಿಕ 7,500 ಸಬ್ಸಿಡಿ, ಕೇಂಬ್ರಿಡ್ಜ್‌ ಆಕ್ಸ್‌ಫರ್ಡ್‌, ಏಲ್‌ ಹಾಗೂ ಹಾರ್ವಡ್‌ ಮುಂತಾದ ಅಗ್ರಗಣ್ಯ ವಿವಿಗಳ ಸಹಯೋಗದೊಂದಿಗೆ ರಾಜ್ಯದಲ್ಲಿ 10 ವಿವಿಗಳ ನಿರ್ಮಾಣ ಮುಂತಾದ ಘೋಷಣೆಗಳು ಎಐಎಡಿಎಂಕೆಯ ಪ್ರಣಾಳಿಕೆಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌