ಪ್ರಚೋದನಾತ್ಮಕ: ಮಮತಾ ದಾಳಿ ಕುರಿತು ಟಿಎಂಸಿ ಹೇಳಿಕೆ ಖಂಡಿಸಿದ ಚುನಾವಣಾ ಆಯೋಗ!
ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ನಡೆದ ದಾಳಿಯ ಕುರಿತು, ಟಿಎಂಸಿ ನೀಡಿರುವ ಹೇಳಿಕೆಯನ್ನು ಚುನಾವಣಾ ಆಯೋಗ ಖಂಡಿಸಿದೆ. ಅಲ್ಲದೇ ಆಯೋಗದ ವಿರುದ್ಧ ಕೇಳಿ ಬಂದಿರುವ ಆರೋಪಗಳು ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದೆ.
Vijaya Karnataka Web 12 Mar 2021, 11:31 am
ಹೈಲೈಟ್ಸ್:
- ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಮೇಲೆ ಭೀಕರ ದಾಳಿ.
- ಮಮತಾ ಮೇಲಿನ ದಾಳಿಗೆ ಚುನಾವಣಾ ಆಯೋಗದ ವಿವಾದಾತ್ಮಕ ತೀರ್ಮಾನಗಳೇ ಕಾರಣ ಎಂದ ಟಿಎಂಸಿ.
- ಟಿಎಂಸಿ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಕೇಂದ್ರ ಚುನಾವಣಾ ಆಯೋಗ.
- ಟಿಎಂಸಿ ಆರೋಪಗಳನ್ನು ಪ್ರಚೋದನಾತ್ಮಕ ಎಂದು ಬಣ್ಣಿಸಿದ ಕೇಂದ್ರ ಚುನಾವಣಾ ಆಯೋಗ.
ಹೊಸದಿಲ್ಲಿ: ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ನಡೆದ ದಾಳಿಯ ಕುರಿತು, ಟಿಎಂಸಿ ನೀಡಿರುವ ಹೇಳಿಕೆಯನ್ನು ಚುನಾವಣಾ ಆಯೋಗ ಖಂಡಿಸಿದೆ. ರಾಜ್ಯದ ಪೊಲಿಸ್ ಮಹಾ ನಿರ್ದೇಶಕರನ್ನು ಬದಲಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿ 24 ಗಂಟೆಯೊಳಗೆ, ಮಮತಾ ಬ್ಯಾನರ್ಜಿ ಮೇಲೆ ದಾಳಿಯಾಗಿದೆ ಎಂದು ಟಿಎಂಸಿ ಗಂಭೀರ ಆರೋಪ ಮಾಡಿದೆ.
ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಟಿಎಂಸಿ, ಮಮತಾ ಬ್ಯಾನರ್ಜಿ ಮೇಲೆ ದಾಳಿಯಾಗಬಹುದು ಎಂಬ ಅನುಮಾನವಿದ್ದರೂ ಆಯೋಗ ಮುಖ್ಯಮಂತ್ರಿಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದೆ.
ಅನುಮಾನವಿದ್ದವರು ವೈದ್ಯರೊಂದಿಗೆ ಮಾತನಾಡಿ: ಮಮತಾ ಸ್ಥಿತಿ ವಿವರಿಸಿದ ಡೆರೆಕ್ ಒ'ಬ್ರಿಯೆನ್!
ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದ ಕಾನೂನು ಸಂರಕ್ಷಣೆ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿರುವುದರಿಂದ, ಆಯೋಗ ತನ್ನ ಜವಾಬ್ದಾರಿಯಿಂದ ವಿಮುಖವಾಗಲಾರದು ಎಂದು ಟಿಎಂಸಿ ಹೇಳಿದೆ.
ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಚುನಾವಣಾ ಆಯೋಗ, ಟಿಎಂಸಿ ಪತ್ರ ಪ್ರಚೋದನಾತ್ಮಕವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ ಕೇಂದ್ರ ಸರ್ಕಾರದ ಅಣತಿಯಂತೆ ಪಶ್ಚಿಮ ಬಂಗಾಳದ ಪೊಲೀಸ್ ಮುಖ್ಯಸ್ಥರನ್ನು ಬದಲಸಿರುವ ಆರೋಪ ಸತ್ಯಕ್ಕೆ ದೂರ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ನಂದಿಗ್ರಾಮ್ದಲ್ಲಿ ನಡೆದ ಘಟನೆಯಲ್ಲಿ ಚುನಾವಣಾ ಆಯೋಗದಿಂದ ಯಾವುದೇ ಕರ್ತವ್ಯಲೋಪವಾಗಿಲ್ಲ. ಘಟನೆಗೆ ಆಯೋಗದ ತೀರ್ಮಾನಗಳೇ ಕಾರಣ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಚುನಾವಣಾ ಆಯೋಗ ಪುನರುಚ್ಚಿಸಿದೆ.
ಪಶ್ಚಿಮ ಬಂಗಾಳವೂ ಸೇರಿದಂತೆ ಚುನಾವಣೆ ಎದುರಿಸುತ್ತಿರುವ ಎಲ್ಲಾ ರಾಜ್ಯಗಳಲ್ಲಿ ಚುನಾವಣಾ ಆಯೋಗ ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸುತ್ತಿದೆ. ಆದರೆ ಆಯೋಗದ ಮೇಲೆ ಹೇರಲಾಗುವಿಂತಹ ಆರೋಪಗಳು ಸಿಬ್ಬಂದಿಯ ಮನೋಬಲವನ್ನು ಕಡಿಮೆ ಮಾಡುತ್ತವೆ ಎಂದು ಆಯೋಗ ಬೇಸರ ವ್ಯಕ್ತಪಡಿಸಿದೆ.
ಚುನಾವಣೆಗೂ ಮೊದಲೇ ದಾಳಿಯ 'ನಾಟಕ'ದ ಸ್ಕ್ರಿಪ್ಟ್ ರೆಡಿ: ದೀದಿ ಮೇಲಿನ ದಾಳಿಗೆ ಭಿನ್ನ ಅಭಿಪ್ರಾಯಗಳು!
ಮಮತಾ ಬ್ಯಾನರ್ಜಿ ಮೇಲಿನ ದಾಳಿಯ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಟಿಎಂಸಿ, ದಾಅಳಿಗೆ ಆಯೋಗದ ಕೆಲವು ವಿವಾದಾತ್ಮಕ ತೀರ್ಮಾನಗಳೂ ಕಾರಣ ಎಂದು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಟಿಎಂಸಿ, ಮಮತಾ ಬ್ಯಾನರ್ಜಿ ಮೇಲೆ ದಾಳಿಯಾಗಬಹುದು ಎಂಬ ಅನುಮಾನವಿದ್ದರೂ ಆಯೋಗ ಮುಖ್ಯಮಂತ್ರಿಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದೆ.
ಅನುಮಾನವಿದ್ದವರು ವೈದ್ಯರೊಂದಿಗೆ ಮಾತನಾಡಿ: ಮಮತಾ ಸ್ಥಿತಿ ವಿವರಿಸಿದ ಡೆರೆಕ್ ಒ'ಬ್ರಿಯೆನ್!
ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದ ಕಾನೂನು ಸಂರಕ್ಷಣೆ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿರುವುದರಿಂದ, ಆಯೋಗ ತನ್ನ ಜವಾಬ್ದಾರಿಯಿಂದ ವಿಮುಖವಾಗಲಾರದು ಎಂದು ಟಿಎಂಸಿ ಹೇಳಿದೆ.
ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಚುನಾವಣಾ ಆಯೋಗ, ಟಿಎಂಸಿ ಪತ್ರ ಪ್ರಚೋದನಾತ್ಮಕವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ ಕೇಂದ್ರ ಸರ್ಕಾರದ ಅಣತಿಯಂತೆ ಪಶ್ಚಿಮ ಬಂಗಾಳದ ಪೊಲೀಸ್ ಮುಖ್ಯಸ್ಥರನ್ನು ಬದಲಸಿರುವ ಆರೋಪ ಸತ್ಯಕ್ಕೆ ದೂರ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ನಂದಿಗ್ರಾಮ್ದಲ್ಲಿ ನಡೆದ ಘಟನೆಯಲ್ಲಿ ಚುನಾವಣಾ ಆಯೋಗದಿಂದ ಯಾವುದೇ ಕರ್ತವ್ಯಲೋಪವಾಗಿಲ್ಲ. ಘಟನೆಗೆ ಆಯೋಗದ ತೀರ್ಮಾನಗಳೇ ಕಾರಣ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಚುನಾವಣಾ ಆಯೋಗ ಪುನರುಚ್ಚಿಸಿದೆ.
ಪಶ್ಚಿಮ ಬಂಗಾಳವೂ ಸೇರಿದಂತೆ ಚುನಾವಣೆ ಎದುರಿಸುತ್ತಿರುವ ಎಲ್ಲಾ ರಾಜ್ಯಗಳಲ್ಲಿ ಚುನಾವಣಾ ಆಯೋಗ ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸುತ್ತಿದೆ. ಆದರೆ ಆಯೋಗದ ಮೇಲೆ ಹೇರಲಾಗುವಿಂತಹ ಆರೋಪಗಳು ಸಿಬ್ಬಂದಿಯ ಮನೋಬಲವನ್ನು ಕಡಿಮೆ ಮಾಡುತ್ತವೆ ಎಂದು ಆಯೋಗ ಬೇಸರ ವ್ಯಕ್ತಪಡಿಸಿದೆ.
ಚುನಾವಣೆಗೂ ಮೊದಲೇ ದಾಳಿಯ 'ನಾಟಕ'ದ ಸ್ಕ್ರಿಪ್ಟ್ ರೆಡಿ: ದೀದಿ ಮೇಲಿನ ದಾಳಿಗೆ ಭಿನ್ನ ಅಭಿಪ್ರಾಯಗಳು!
ಮಮತಾ ಬ್ಯಾನರ್ಜಿ ಮೇಲಿನ ದಾಳಿಯ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಟಿಎಂಸಿ, ದಾಅಳಿಗೆ ಆಯೋಗದ ಕೆಲವು ವಿವಾದಾತ್ಮಕ ತೀರ್ಮಾನಗಳೂ ಕಾರಣ ಎಂದು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.