ಆ್ಯಪ್ನಗರ

ಸಿನಿಮಾ ನಟರು ರಾಜಕೀಯದಲ್ಲಿ ಯಶಸ್ಸು ಕಾಣಲ್ಲ: ಸುಮಲತಾಗೆ ಸಚಿವ ನಾಡಗೌಡ ಟಾಂಗ್‌

ಚಲನಚಿತ್ರದವರು ರಾಜಕಾರಣದಲ್ಲಿಯೂ ಯಶಸ್ಸು ಸಾಧಿಸಿದ್ದು ಆಂಧ್ರಪ್ರದೇಶದಲ್ಲಿ, ತಮಿಳುನಾಡಿನಲ್ಲಿ. ಎನ್ ಟಿ ರಾಮರಾವ್‌ ಹಿಂದೊಮ್ಮೆ ರಾಯಚೂರು, ಸಿಂಧನೂರಿಗೆ ಪ್ರಚಾರಕ್ಕೆ ಬಂದಿದ್ದರು ಆಗ ಲಕ್ಷಾಂತರ ಜನ ಸೇರಿದ್ದರು. ಆದರೆ ಯಾರೂ ವೋಟು ಹಾಕಲಿಲ್ಲ

Vijaya Karnataka Web 26 Mar 2019, 3:21 pm
ರಾಯಚೂರು: ಮಂಡ್ಯದಲ್ಲಿ ಸುಮಲತಾ ಪರವಾಗಿ ದುಡಿಯುತ್ತಿರುವುದು ಬಾಡಿಗೆ ಎತ್ತುಗಳು. ಸಿನಿಮಾ ನಟರು ರಾಜಕೀಯದಲ್ಲಿ ಯಶಸ್ಸು ಕಂಡ ಉದಾಹರಣೆ ಕರ್ನಾಟಕದಲ್ಲಿ ಕಂಡಿಲ್ಲ ಎಂದು ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
Vijaya Karnataka Web ವೆಂಕಟರಾವ್‌ ನಾಡಗೌಡ
ವೆಂಕಟರಾವ್‌ ನಾಡಗೌಡ


ಸಚಿವ ರಾಯಚೂರಿನಲ್ಲಿ ಸಚಿವ ವೆಂಕಟರಾವ್ ನಾಡಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.

ಚಲನಚಿತ್ರದವರು ರಾಜಕಾರಣದಲ್ಲಿಯೂ ಯಶಸ್ಸು ಸಾಧಿಸಿದ್ದು ಆಂಧ್ರಪ್ರದೇಶದಲ್ಲಿ, ತಮಿಳುನಾಡಿನಲ್ಲಿ ಬೆರಳೆಣಿಕೆ ಮಂದಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದರು ಎಂದರು.

ಎನ್ ಟಿ ರಾಮರಾವ್‌ ಹಿಂದೊಮ್ಮೆ ರಾಯಚೂರು, ಸಿಂಧನೂರಿಗೆ ಪ್ರಚಾರಕ್ಕೆ ಬಂದಿದ್ದರು ಆಗ ಲಕ್ಷಾಂತರ ಜನ ಸೇರಿದ್ದರು. ಆದರೆ ಎನ್‌ಟಿಆರ್ ಅವರನ್ನು ನೋಡಿ ಯಾರೂ ವೋಟು ಹಾಕಲಿಲ್ಲ ಎಂದು ಸಚಿವರು ನೆನಪಿಸಿದರು.

ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ ಕುಮಾರ ಕಣಕ್ಕಿಳಿದಾಗ ಚಿತ್ರರಂಗದವರು ಪ್ರಚಾರಕ್ಕೆ ಬಂದಿದ್ದರೂ ಅವರು ಗೆಲ್ಲಲಿಲ್ಲ

ಪೂಜಾ ಗಾಂಧಿ ರಾಯಚೂರಿನಲ್ಲಿ ಸ್ಪರ್ಧಿಸಿದ್ದರು ಅವರಿಗೆ ಬಿದ್ದ ಮತ ಎಷ್ಟು ನೀವೇ ಲೆಕ್ಕ ಹಾಕಿ? ಎಂದು ಸಚಿವರು ಉದಾಹರಣೆ ಸಹಿತ ಟಾಂಗ್‌ ನೀಡಿದರು.

ಸಿನೆಮಾ ನಟರನ್ನು ನೋಡಲು ಬಂದವರು ಮತ ಹಾಕುವುದಿಲ್ಲ. ಸುಮಲತಾ ಸಿನೆಮಾ ರಂಗ ಬಿಟ್ಟು ರಾಜಕೀಯ ರಂಗದಲ್ಲಿ ಹೆಸರು ಮಾಡಿಕೊಳ್ಳಲಿ ನೋಡೋಣ ಎಂದು ಸವಾಲು ಎಸೆದರು.

ಸುಮಲತಾರ ಕಾರ್ಯಕ್ರಮದ ದಿನ ಕೇಬಲ್ ಮತ್ತು ವಿದ್ಯುತ್ ಸಂಪರ್ಕ ಕಟ್ ಮಾಡಿಸಿದ್ದರು, ದರ್ಶನ್‌ ಮನೆಯ ಮೇಲೆ ಕಲ್ಲು ಹೊಡೆಸಿದರು ಎನ್ನುವ ಹೇಳಿಕೆಯಲ್ಲಿ ಅರ್ಥವಿಲ್ಲ ಎಂದು ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌