ಆ್ಯಪ್ನಗರ

ಮೈಕ್‌ ಮುಂದೆ ಟವಲ್‌ ಹಿಡಿದುಕೊಂಡು ಅಳಬೇಕಾ: ಕುಮಾರಸ್ವಾಮಿಗೆ ಟಾಂಗ್‌ ಕೊಟ್ಟ ರೆಬೆಲ್‌ ಪುತ್ರ ಅಭಿಷೇಕ್‌

ಅವರೆಲ್ಲರೂ ನಾಟಕ ಮಾಡಿ ಮೈಕ್‌ ಮುಂದೆ ಕಣ್ಣೀರು ಸುರಿಸುತ್ತಾರೆ. ಈ ರೀತಿಯ ಆಟ ನಮಗೆ ಬರುವುದಿಲ್ಲ. ಈ ರೀತಿಯ ಡವ್‌ಗಳು ನಮಗೆ ಬರೋದಿಲ್ಲ ಎಂದು ರೆಬೆಲ್‌ಸ್ಟಾರ್‌ ಶೈಲಿಯಲ್ಲಿಯೇ ಅಭಿಷೇಕ್‌ ತಿರುಗೇಟು ನೀಡಿದರು.

Vijaya Karnataka Web 29 Mar 2019, 5:12 pm
ಮಂಡ್ಯ: ಮೈಕ್‌ ಮುಂದೆ ಟವಲ್‌ ಹಿಡಿದುಕೊಂಡು ಅಳುವಂಥ ಜನರು ನಾವಲ್ಲ. ಈ ರೀತಿ ಮಾಡುವ ಅಗತ್ಯವೂ ನಮಗಿಲ್ಲ ಎಂದು ರೆಬೆಲ್‌ ಸ್ಟಾರ್‌ ಅಂಬರೀಷ್‌ ಪುತ್ರ ಅಭಿಷೇಕ್‌ ಟಾಂಗ್ ಕೊಟ್ಟಿದ್ದಾರೆ.
Vijaya Karnataka Web ಅಭಿ ಅಂಬರೀಷ್‌
ಅಭಿ ಅಂಬರೀಷ್‌


ಸುಮಲತಾ ಮುಖದಲ್ಲಿ ಅಂಬಿ ಸಾವಿನ ನೋವಿನ ಛಾಯೆ ಕಾಣುತ್ತಿಲ್ಲ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಕ್ಕೆ ಅಭಿಷೇಕ್‌ ಅಂಬರೀಷ್‌ ನೇರವಾಗಿ ಟಾಂಗ್‌ ಕೊಟ್ಟರು.

ಅವರೆಲ್ಲರೂ ನಾಟಕ ಮಾಡಿ ಮೈಕ್‌ ಮುಂದೆ ಕಣ್ಣೀರು ಸುರಿಸುತ್ತಾರೆ. ಈ ರೀತಿಯ ಆಟ ನಮಗೆ ಬರುವುದಿಲ್ಲ. ಈ ರೀತಿಯ ಡವ್‌ಗಳು ನಮಗೆ ಬರೋದಿಲ್ಲ ಎಂದು ರೆಬೆಲ್‌ಸ್ಟಾರ್‌ ಶೈಲಿಯಲ್ಲಿಯೇ ಅಭಿಷೇಕ್‌ ತಿರುಗೇಟು ನೀಡಿದರು.

ಮೈಕ್‌ ಹಿಡಿದು ಟವಲ್‌ ಹಿಡಿದು ಕಣ್ಣೀರು ಹಾಕುವುದು ಕೆಲವು ಕುಟುಂಬದವರ ಸಂಸ್ಕೃತಿಯಾಗಿದೆ. ಅದು ನಮಗೆ ಬರೋದಿಲ್ಲ. ಸುಮ್ಮನೆ ನಾಟಕ ಆಡುವುದು ನಮ್ಮ ಕುಟುಂಬದ ಯಾರಿಗೂ ಬಂದಿಲ್ಲ, ಬರೋದು ಇಲ್ಲ ಎಂದು ಅಭಿಷೇಕ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ