ಆ್ಯಪ್ನಗರ

ದೋಸ್ತಿಯಲ್ಲಿ ಭಿನ್ನಾಭಿಪ್ರಾಯ ಇತ್ತು, ಮೋದಿ ಹೊಡೆತದಿಂದ ಒಂದಾಗಿದ್ದೇವೆ: ಸತೀಶ್‌ ಜಾರಕಿಹೊಳಿ

ಕರಿಮಾಯೇ ಎಂಬ ಸಿನಿಮಾವನ್ನು ಚಂದ್ರಶೇಖರ ಕಂಬಾರ್ ಮಾಡಿದ್ದರು. ಆದರೆ ಆ ಸಿನಿಮಾ ರಿಲೀಸ್ ಆಗಲೇ ಇಲ್ಲ. ಅದೇ ರೀತಿ ರಮೇಶ್ ಜಾರಕಿಹೊಳಿ ಚಿತ್ರವೂ ರಿಲೀಸ್ ಆಗಲ್ಲ. ಪತ್ರಕರ್ತರು ಎಲ್ಲಾ ಸೇರಿ ಸಿನಿಮಾ ರಿಲೀಸ್ ಮಾಡಬೇಕು ಎಂದು ಸತೀಶ್‌ ಜಾರಕಿಹೊಳಿ ವ್ಯಂಗ್ಯವಾಡಿದರು.

Vijaya Karnataka Web 25 May 2019, 2:21 pm
ಬೆಳಗಾವಿ: ಜೆಡಿಎಸ್- ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇತ್ತು. ಆದರೆ ಮೋದಿ ಹೊಡೆತದಿಂದ ನಾವೆಲ್ಲ ಒಂದಾಗಿದ್ದೇವೆ. ಕಾಂಗ್ರೆಸ್- ಜೆಡಿಎಸ್ ಒಂದಾಗಲು ಯಾವುದೇ ಔಷಧಿ ನಾಟಿರಲಿಲ್ಲ. ಸದ್ಯ ಮೋದಿ ನೀಡಿರೋ ಔಷಧಿ ಫಲ ನೀಡಿದೆ ಎಂದು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.
Vijaya Karnataka Web ಸತೀಶ್‌ ಜಾರಕಿಹೊಳಿ
ಸತೀಶ್‌ ಜಾರಕಿಹೊಳಿ


ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಸತೀಶ್‌ ಜಾರಕಿಹೊಳಿ ಮಾತನಾಡಿದರು.

ಮೇ 29ರಂದು ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯಲಿದೆ. ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ -ಜೆಡಿಎಸ್ ಸಿದ್ಧತೆ ನಡೆಸಿದೆ. ಕಾಂಗ್ರೆಸ್- ಜೆಡಿಎಸ್ ರಿವರ್ಸ್ ಆಪರೇಷನ್‌ ಮಾಡಲು ಸಿದ್ಧತೆ ನಡೆದಿದೆ ಎಂದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮೋದಿ ಅಲೆ ವರ್ಕ್ ಆಗಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋ ವಿಚಾರ ಸದ್ಯ ಬಂದ್ ಆಗಿದೆ. ಇನ್ನು ನಾಲ್ಕು ವರ್ಷ ಲೆಫ್ಟ್, ರೈಟ್ ಅಂತ ಒಂದೇ ಲೈನ್ ನಲ್ಲಿ ಹೋಗಬೇಕು. ಕಮಾಂಡರ್ ಹೇಳಿದ ಹಾಗೇ ಪರೇಡ್ ಮಾಡೋದು ಅಷ್ಟೇ. ದೇಶದಲ್ಲಿ ಮೋದಿ ಅಲೇ ಇದೆ ಎಂದು ಒಪ್ಪಿಕೊಳ್ಳಬೇಕು ಎಂದು ಸಚಿವರು ಸ್ಪಷ್ಟಪಡಿಸಿದರು.

ಕರಿಮಾಯೇ ಎಂಬ ಸಿನಿಮಾವನ್ನು ಚಂದ್ರಶೇಖರ ಕಂಬಾರ್ ಮಾಡಿದ್ದರು. ಆದರೆ ಆ ಸಿನಿಮಾ ರಿಲೀಸ್ ಆಗಲೇ ಇಲ್ಲ. ಅದೇ ರೀತಿ ರಮೇಶ್ ಜಾರಕಿಹೊಳಿ ಚಿತ್ರವೂ ರಿಲೀಸ್ ಆಗಲ್ಲ. ಪತ್ರಕರ್ತರು ಎಲ್ಲಾ ಸೇರಿ ಸಿನಿಮಾ ರಿಲೀಸ್ ಮಾಡಬೇಕು ಎಂದು ಸಚಿವ ಸತೀಶ್‌ ಜಾರಕಿಹೊಳಿ ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ