ಆ್ಯಪ್ನಗರ

'ನೀನು ನಿಯತ್ತಿನ ಪುಟ್ಟರಾಜು' ಎಂದು ಅಂಬಿ ಹೇಳಿದ್ದರು: ಸಚಿವ ಸಿಎಸ್‌ಪಿ

ಚಲುವರಾಯಸ್ವಾಮಿ ಲೋಕಸಭಾ ಚುನಾವಣೆಗೆ ನಿಂತಿದ್ದಾಗಲೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 22 ಸಾವಿರ ಲೀಡ್ ಕೊಡಿಸಿದ್ದೆ. ಆಗಲೂ ಚಲುವರಾಯಸ್ವಾಮಿ ಶ್ಲಾಘಿಸಿದ್ದರು ಎಂದು ಸ್ಮರಿಸಿದರು.

Vijaya Karnataka Web 29 Mar 2019, 7:20 pm
ಮಂಡ್ಯ: ಸುಮಕ್ಕನ ಬಗ್ಗೆ ನನಗೆ ಗೌರವವಿದೆ. ಅಂಬರೀಷ್ ಅವರ ಸಮಾಧಿ ಮುಂದೆ ನಿಂತು ಕಣ್ಣುಮುಚ್ಚಿ ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲಿ. ರಾಮನಗರದಲ್ಲಿ ಸೋತಿದ್ದ ಅಂಬರೀಷ್ ಅವರನ್ನು ಮಂಡ್ಯಕ್ಕೆ ಕರೆತಂದು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದ್ದು ಯಾರೆಂದು ಅರಿಯಲಿ. ನನ್ನ ಆತ್ಮಾಭಿಮಾನ, ಗೌರವದ ಬಗ್ಗೆ ಅವರು ಮಾತನಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
Vijaya Karnataka Web ಸಿಎಸ್‌ ಪುಟ್ಟರಾಜು
ಸಿಎಸ್‌ ಪುಟ್ಟರಾಜು


ಮಂಡ್ಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮನೆಯ ದುಡ್ಡನ್ನು ಹಾಕಿ ಅಂಬರೀಷ್ ಅವರ ಪರವಾಗಿ ಚುನಾವಣೆ ಮಾಡಿದ್ದು ನಾನು. ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಹೋದಾಗ ನನ್ನನ್ನು ಕರೆದರು. ನಾನು ಹೋಗದಿದ್ದಾಗ ‘ನೀನು ನಿಯತ್ತಿನ ಪುಟ್ಟರಾಜು’ ಎಂದು ಅಂಬರೀಷ್ ಹೇಳಿದ್ದರು. ಹಾಗೆಯೇ ಚಲುವರಾಯಸ್ವಾಮಿ ಲೋಕಸಭಾ ಚುನಾವಣೆಗೆ ನಿಂತಿದ್ದಾಗಲೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 22 ಸಾವಿರ ಲೀಡ್ ಕೊಡಿಸಿದ್ದೆ. ಆಗಲೂ ಚಲುವರಾಯಸ್ವಾಮಿ ಶ್ಲಾಘಿಸಿದ್ದರು ಎಂದು ಸ್ಮರಿಸಿದರು.

ದುಡ್ಡಿನ ಹೊಳೆ ಹರಿಸುವ ಖ್ಯಾತಿ ವಿರೋಗಳಿಗೆ ಸಲ್ಲುತ್ತದೆ. ಇದರ ಸಂಪೂರ್ಣ ಮಾಹಿತಿ ನಾವೇ ನೀಡುತ್ತೇವೆ. ಮೈಸೂರಿನ ಯಾವ ಹೋಟೆಲ್‌ನಲ್ಲಿ ಯಾರು ಯಾರಿಗೆ ಹಣ ಕೊಡಲಾಗಿದೆ. ಯಾವ ಖಾತೆಗೆ ಜಮೆ ಆಗಿದೆ. ಅದು ಎಲ್ಲಿಂದ ಬಂತು ಎಂಬಿತ್ಯಾದಿ ಮಾಹಿತಿ ನಮ್ಮ ಬಳಿಯಿದೆ. ಇದಕ್ಕಾಗಿ ನಾವೇನು ಸುಮಲತಾರ ಹಿಂದೆ ಗುಪ್ತದಳವನ್ನು ಬಿಟ್ಟು ಮಾಹಿತಿ ಸಂಗ್ರಹಿಸಬೇಕಿಲ್ಲ. ಮೈಸೂರಿನ ಗಲ್ಲಿಗಲ್ಲಿಯಲ್ಲಿ ನಮ್ಮ ಕಡೆಯವರಿದ್ದಾರೆ. ಅವರೇ ನಮಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

ಪ್ರಚಂಡ ಗೆಲುವು ನಮ್ಮದಾಗಲಿದೆ

ಜೆಡಿಎಸ್ ಅಭ್ಯರ್ಥಿ ನಿಖಿಲ್ ಅವರು ಪ್ರಚಂಡ ಬಹುಮತದಿಂದ ಗೆಲ್ಲಲಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಜನರು ಕೈ ಬಿಡುವುದಿಲ್ಲವೆಂಬ ವಿಶ್ವಾಸವಿದೆ. ನಾನು ಸಂಸದನಾಗಿದ್ದಾಗ ಪ್ರತಿಯೊಂದಕ್ಕೂ ಮಾಜಿ ಪ್ರಧಾನಿ ದೇವೇಗೌಡರ ಮೂಲಕವೇ ಸರಕಾರದ ಮಟ್ಟದಲ್ಲಿ ವ್ಯವಹರಿಸಬೇಕಿತ್ತು. ಪ್ರಧಾನಿ ಮೋದಿ, ಗಡ್ಕರಿ, ವೆಂಕಯ್ಯನಾಯ್ಡು, ಸ್ಮೃತಿ ಇರಾನಿ ಅವರನ್ನು ಸಂಪರ್ಕಿಸಿ ಕುಡಿಯುವ ನೀರು, ಹೆದ್ದಾರಿ ನಿರ್ಮಾಣ ಕಾಮಗಾರಿ, ಆಯುರ್ವೇದ ಆಸ್ಪತ್ರೆ ಹಾಗೂ ಕೇಂದ್ರೀಯ ವಿದ್ಯಾಲಯಕ್ಕೆ ಮಂಜೂರಾಗಿ ದೊರಕಿಸಿಕೊಳ್ಳಲಾಗಿದೆ ಎಂದು ಪುಟ್ಟರಾಜು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌