ಆ್ಯಪ್ನಗರ

ರಾಹುಲ್‌ ವಯನಾಡಲ್ಲೇ ಸ್ಪರ್ಧೆ ಏಕೆ?: ಸಚಿವ ಹೆಗಡೆ

ಕಾಂಗ್ರೆಸ್‌ ಪ್ರಣಾಳಿಕೆ ನೋಡಿದರೆ ದೇಶ ದಿವಾಳಿ ಮಾಡುವ ಹಾಗಿದೆ. 72 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ರಚನಾತ್ಮಕ ಪ್ರಣಾಳಿಕೆಯೇ ಅಲ್ಲ. ದೇಶ ಬದುಕಿದರೆ ಮಾತ್ರ ನಾವೂ ಬದುಕುತ್ತೇವೆ.

Vijaya Karnataka Web 8 Apr 2019, 10:59 am
ಶಿರಸಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಧಿ ವಯನಾಡ್‌ ಕ್ಷೇತ್ರ ಬಿಟ್ಟು ಕಾಂಗ್ರೆಸ್‌ನ ಬಲಿಷ್ಠ ರಾಜ್ಯವೆಂದು ಹೇಳಿಕೊಳ್ಳುವ ಕರ್ನಾಟಕದ ಉತ್ತರ ಕನ್ನಡ ಇಲ್ಲವೆ ಬೇರೆ ಯಾವ ಕ್ಷೇತ್ರದಲ್ಲಿ ಏಕೆ ಸ್ಪರ್ಧಿಸುತ್ತಿಲ್ಲ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಪ್ರಶ್ನಿಸಿದರು.
Vijaya Karnataka Web ananth


ಅವರು ಶಿರಸಿ ತಾಲೂಕಿನ ಭೈರುಂಬೆ ಸಮೀಪದ ಹುಳಗೋಳದಲ್ಲಿ ಭಾನುವಾರ ನಡೆದ ಕಾರ್ಯಕರ್ತರ, ಪ್ರಮುಖರ ಸಭೆಯಲ್ಲಿ ಮಾತನಾಡಿದರು.

''ವಯನಾಡನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಿದೆ. ಆ ಕ್ಷೇತ್ರದಲ್ಲಿ ಶೇ. 52ರಷ್ಟು ಮುಸ್ಲೀಮರು, ಶೇ. 24ರಷ್ಟು ಕ್ರಿಶ್ಚಿಯನ್ನರೂ ಇದ್ದಾರೆ. ಕಾಂಗ್ರೆಸ್‌ ಪ್ರಣಾಳಿಕೆ ನೋಡಿದರೆ ದೇಶ ದಿವಾಳಿ ಮಾಡುವ ಹಾಗಿದೆ. 72 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ರಚನಾತ್ಮಕ ಪ್ರಣಾಳಿಕೆಯೇ ಅಲ್ಲ. ದೇಶ ಬದುಕಿದರೆ ಮಾತ್ರ ನಾವೂ ಬದುಕುತ್ತೇವೆ'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌