ಆ್ಯಪ್ನಗರ

ಅಂಬರೀಶ್ ನಂಬಿದ್ದಕ್ಕೆ 20 ವರ್ಷ ಅಧಿಕಾರ ಸಿಗ್ಲಿಲ್ಲ ಎಂದ ಶಿವರಾಮೇಗೌಡ

ಅಂಬರೀಶ್ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಬಡವರಿಗೇಕೆ ಮನೆ ಕೊಡಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.

Vijaya Karnataka Web 2 Apr 2019, 1:05 pm
ಮಂಡ್ಯ: ಅಂಬರೀಷ್ ಅವರನ್ನು ನಂಬಿಕೊಂಡೆ 20 ವರ್ಷ ಹಾಳು ಮಾಡಿಕೊಂಡೆ. 20 ವರ್ಷ ಅಧಿಕಾರ ವಂಚಿತರಾಗಿ ಕೂರಲು ಈ ಪುಣ್ಯಾತ್ಮನನ್ನು ಪಕ್ಷಕ್ಕೆ ಕರೆತಂದದ್ದೇ ಕಾರಣವಾಯ್ತು ಎಂದು ಸಂಸದ ಶಿವರಾಮೇಗೌಡ ಹೇಳಿದರು.
Vijaya Karnataka Web shivaramegowda


ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಂಬರೀಶ್ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಬಡವರಿಗೇಕೆ ಮನೆ ಕೊಡಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.

ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಏಕ ವಚನದಲ್ಲಿ ಟೀಕಿಸಿದ ಶಿವರಾಮೇಗೌಡ, ಅವನಾರೋ ರಾಕ್ಲೈನ್ ಅಂತೆ. ಚುನಾವಣೆ ಬಳಿಕ ಅವರನ್ನು ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತೆ. ಹುಡುಕಲು ನೀವೆಲ್ಲಾ ಅಲ್ಲಿಗೆ ಹೋಗ್ತಿರಾ ಹೇಳಿ ಎಂದು ಪ್ರಶ್ನಿಸಿದರು. ಈ ಟೂರಿಂಗ್ ಟಾಕೀಸ್ ಅವರನ್ನು 18ನೇ ತಾರೀಖು ಪ್ಯಾಕ್ ಮಾಡಿಸಿ ಕಳಿಸಬೇಕು. ಶೂಟಿಂಗ್ ಮಾಡಿದ ಎಲ್ಲ ಸಿನಿಮಾಗಳು ಬಿಡುಗಡೆ ಆಗಲ್ಲ. ಹಾಗೆಯೇ ಇದು ಎಂದು ಲೇವಡಿ ನಡೆಸಿದರು.

ಗೌರಮ್ಮನ ಹಾಗಿದ್ದವರು ಈಗ ಬಂದೌವ್ಳೆ ಎಂದು ಏಕವಚನದಲ್ಲಿ ಸುಮಲತಾ ಅವರನ್ನು ಟೀಕಿಸಿದ ಸಂಸದ, ದರ್ಶನ್ ಬಂದವನಲ್ಲ ಅವನೂ ನಾಯ್ಡು, ಸುಮಲತಾ ನಾಯ್ಡು, ರಾಕ್ ಲೈನ್ ವೆಂಕಟೇಶ್ ಕೂಡ ನಾಯ್ಡು. ಮಂಡ್ಯವನ್ನು ನಾಯ್ಡುಗಳ ಮಯವಾಗಿ ಮಾಡಲು ಬಿಡಬಾರದು ಎಂದು ಜಾತಿ ಕೆಣಕಿ ರಾಜಕೀಯಕ್ಕೆ ಮುಂದಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ