ಮಂಡ್ಯ: ಅಂಬರೀಷ್ ಅವರನ್ನು ನಂಬಿಕೊಂಡೆ 20 ವರ್ಷ ಹಾಳು ಮಾಡಿಕೊಂಡೆ. 20 ವರ್ಷ ಅಧಿಕಾರ ವಂಚಿತರಾಗಿ ಕೂರಲು ಈ ಪುಣ್ಯಾತ್ಮನನ್ನು ಪಕ್ಷಕ್ಕೆ ಕರೆತಂದದ್ದೇ ಕಾರಣವಾಯ್ತು ಎಂದು ಸಂಸದ ಶಿವರಾಮೇಗೌಡ ಹೇಳಿದರು.
ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಂಬರೀಶ್ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಬಡವರಿಗೇಕೆ ಮನೆ ಕೊಡಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.
ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಏಕ ವಚನದಲ್ಲಿ ಟೀಕಿಸಿದ ಶಿವರಾಮೇಗೌಡ, ಅವನಾರೋ ರಾಕ್ಲೈನ್ ಅಂತೆ. ಚುನಾವಣೆ ಬಳಿಕ ಅವರನ್ನು ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತೆ. ಹುಡುಕಲು ನೀವೆಲ್ಲಾ ಅಲ್ಲಿಗೆ ಹೋಗ್ತಿರಾ ಹೇಳಿ ಎಂದು ಪ್ರಶ್ನಿಸಿದರು. ಈ ಟೂರಿಂಗ್ ಟಾಕೀಸ್ ಅವರನ್ನು 18ನೇ ತಾರೀಖು ಪ್ಯಾಕ್ ಮಾಡಿಸಿ ಕಳಿಸಬೇಕು. ಶೂಟಿಂಗ್ ಮಾಡಿದ ಎಲ್ಲ ಸಿನಿಮಾಗಳು ಬಿಡುಗಡೆ ಆಗಲ್ಲ. ಹಾಗೆಯೇ ಇದು ಎಂದು ಲೇವಡಿ ನಡೆಸಿದರು.
ಗೌರಮ್ಮನ ಹಾಗಿದ್ದವರು ಈಗ ಬಂದೌವ್ಳೆ ಎಂದು ಏಕವಚನದಲ್ಲಿ ಸುಮಲತಾ ಅವರನ್ನು ಟೀಕಿಸಿದ ಸಂಸದ, ದರ್ಶನ್ ಬಂದವನಲ್ಲ ಅವನೂ ನಾಯ್ಡು, ಸುಮಲತಾ ನಾಯ್ಡು, ರಾಕ್ ಲೈನ್ ವೆಂಕಟೇಶ್ ಕೂಡ ನಾಯ್ಡು. ಮಂಡ್ಯವನ್ನು ನಾಯ್ಡುಗಳ ಮಯವಾಗಿ ಮಾಡಲು ಬಿಡಬಾರದು ಎಂದು ಜಾತಿ ಕೆಣಕಿ ರಾಜಕೀಯಕ್ಕೆ ಮುಂದಾದರು.
ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಂಬರೀಶ್ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಬಡವರಿಗೇಕೆ ಮನೆ ಕೊಡಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.
ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಏಕ ವಚನದಲ್ಲಿ ಟೀಕಿಸಿದ ಶಿವರಾಮೇಗೌಡ, ಅವನಾರೋ ರಾಕ್ಲೈನ್ ಅಂತೆ. ಚುನಾವಣೆ ಬಳಿಕ ಅವರನ್ನು ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತೆ. ಹುಡುಕಲು ನೀವೆಲ್ಲಾ ಅಲ್ಲಿಗೆ ಹೋಗ್ತಿರಾ ಹೇಳಿ ಎಂದು ಪ್ರಶ್ನಿಸಿದರು. ಈ ಟೂರಿಂಗ್ ಟಾಕೀಸ್ ಅವರನ್ನು 18ನೇ ತಾರೀಖು ಪ್ಯಾಕ್ ಮಾಡಿಸಿ ಕಳಿಸಬೇಕು. ಶೂಟಿಂಗ್ ಮಾಡಿದ ಎಲ್ಲ ಸಿನಿಮಾಗಳು ಬಿಡುಗಡೆ ಆಗಲ್ಲ. ಹಾಗೆಯೇ ಇದು ಎಂದು ಲೇವಡಿ ನಡೆಸಿದರು.
ಗೌರಮ್ಮನ ಹಾಗಿದ್ದವರು ಈಗ ಬಂದೌವ್ಳೆ ಎಂದು ಏಕವಚನದಲ್ಲಿ ಸುಮಲತಾ ಅವರನ್ನು ಟೀಕಿಸಿದ ಸಂಸದ, ದರ್ಶನ್ ಬಂದವನಲ್ಲ ಅವನೂ ನಾಯ್ಡು, ಸುಮಲತಾ ನಾಯ್ಡು, ರಾಕ್ ಲೈನ್ ವೆಂಕಟೇಶ್ ಕೂಡ ನಾಯ್ಡು. ಮಂಡ್ಯವನ್ನು ನಾಯ್ಡುಗಳ ಮಯವಾಗಿ ಮಾಡಲು ಬಿಡಬಾರದು ಎಂದು ಜಾತಿ ಕೆಣಕಿ ರಾಜಕೀಯಕ್ಕೆ ಮುಂದಾದರು.