ಆ್ಯಪ್ನಗರ

ಶಿವಮೊಗ್ಗ: ಮಾಜಿ ಸಿಎಂ ಪುತ್ರರ ಗೆಲುವಿಗೆ ಭದ್ರಾವತಿ ಮತಗಳೇ ಭದ್ರ

ಶಿವಮೊಗ್ಗದಲ್ಲಿ ಈಗಾಗಲೇ ಉತ್ತಮ ಮತದಾನ ಕೂಡ ಆಗಿದೆ. ಆದರೆ ಇಲ್ಲಿ ಗೆಲುವಿಗೆ ಅತ್ಯಂತ ಪ್ರಮುಖ ಪಾತ್ರ ವಹಿಸುವುದು ಭದ್ರಾವತಿಯ ಮತಗಳು.

Vijaya Karnataka Web 23 Apr 2019, 5:19 pm
ಭದ್ರಾವತಿ: ಶಿವಮೊಗ್ಗ ಲೋಕಸಭಾ ಚುನಾವಣೆ ದೇಶದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.
Vijaya Karnataka Web ಯಡಿಯೂರಪ್ಪ, ರಾಘವೇಂದ್ರ
ಯಡಿಯೂರಪ್ಪ, ರಾಘವೇಂದ್ರ


ಏಕೆಂದರೆ ಇಲ್ಲಿ ಕಣಕ್ಕಿಳಿದಿರುವುದು ಮಾಜಿ ಮುಖ್ಯಮಂತ್ರಿಗಳ ಪುತ್ರರು.

ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಪುತ್ರ ಮಧು ಮುಖಾಮುಖಿಯಾಗಿದ್ದಾರೆ.

ಶಿವಮೊಗ್ಗದಲ್ಲಿ ಈಗಾಗಲೇ ಉತ್ತಮ ಮತದಾನ ಕೂಡ ಆಗಿದೆ. ಆದರೆ ಇಲ್ಲಿ ಗೆಲುವಿಗೆ ಅತ್ಯಂತ ಪ್ರಮುಖ ಪಾತ್ರ ವಹಿಸುವುದು ಭದ್ರಾವತಿಯ ಮತಗಳು.

ಈ ಹಿಂದಿನಿಂದಲೂ ಭದ್ರಾವತಿಯ ಮತದಾರರು ಕೈ ಹಿಡಿಯುವ ಅಭ್ಯರ್ಥಿಗೆ ವಿಜಯಮಾಲೆ ದಕ್ಕಿದೆ.

ಭದ್ರಾವತಿಯಲ್ಲಿ ಅಂದಾಜು ಎರಡು ಲಕ್ಷಕ್ಕಿಂತಲೂ ಹೆಚ್ಚು ಮತದಾರರಿದ್ದಾರೆ.

ಭದ್ರಾವತಿಯಲ್ಲಿ ಬಿಜೆಪಿ ಅಸ್ತಿತ್ವ ಅಷ್ಟೇನೂ ಇಲ್ಲ. ಇದಕ್ಕಾಗಿಯೇ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಭದ್ರಾವತಿಯ ಹೆಚ್ಚು ಮುಖ ಮಾಡಿದೆ. ಕಾಂಗ್ರೆಸ್‌ನ ಟ್ರಬಲ್‌ಶೂಟರ್ ಡಿಕೆ ಶಿವಕುಮಾರ್‌ ಭದ್ರಾವತಿಯಲ್ಲಿ ಪ್ರಮುಖ ಎದುರಾಳಿಗಳಾಗಿದ್ದ ಬಿ.ಕೆ. ಸಂಗಮೇಶ್ವರ ಮತ್ತು ಮಾಜಿ ಶಾಸಕ ಅಪ್ಪಾಜಿಗೌಡ ಅವರ ಜತೆ ಯಶಸ್ವಿಯಾಗಿ ಸಂಧಾನ ನಡೆಸಿದ್ದರು.

ಒಂದು ಹಂತದಲ್ಲಿ ಲಿಂಗಾಯತ ಸಮುದಾಯದ ಬಿ.ಕೆ. ಸಂಗಮೇಶ್ವರ್‌ ಬಿಜೆಪಿ ಸೇರುತ್ತಾರಾ ಎಂಬ ಊಹಾಪೋಹ ಇತ್ತು. ಅದು ಈಗ ತಣ್ಣಗಾಗಿದೆ.

ಇದರು ಬಿಜೆಪಿಯ ಪಾಲಿಗೆ ನುಂಗಲಾರದ ಬಿಸ ತುಪ್ಪವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿವೈ ರಾಘವೇಂದ್ರಗೆ ಭದ್ರಾವತಿಯಲ್ಲಿ 52 ಸಾವಿರ ಮತ ದಕ್ಕಿತು.

ಈ ಬಾರಿಯೂ ಬಿಜೆಪಿ ಈ ಮತಗಳತ್ತ ಕಣ್ಣು ಹಾಕಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಕೂಡ ಭದ್ರಾವತಿಗೆ ಆಗಮಿಸಿ ಮತ ಯಾಚಿಸಿದ್ದರು.

ಭದ್ರಾವತಿಯ ಮತದಾರ ಯಾರಿಗೆ ಜಯ ಭದ್ರ ಮಾಡುತ್ತಾನೆ ಎಂಬುದು ಕಾಲವೇ ನಿರ್ಣಯಸಲಿದೆ.

ಮತದಾರರು: 14.49 ಲಕ್ಷ
ಪುರುಷರು: 7.20 ಲಕ್ಷ
ಮಹಿಳೆಯರು: 7.28 ಲಕ್ಷ
ಇತರೆ: 42

ವಿಧಾನಸಭಾ ಕ್ಷೇತ್ರ
ಶಿವಮೊಗ್ಗ ಗ್ರಾಮೀಣ: ಬಿಜೆಪಿ
ಭದ್ರಾವತಿ: ಕಾಂಗ್ರೆಸ್‌
ಶಿವಮೊಗ್ಗ: ಬಿಜೆಪಿ
ತೀರ್ಥಹಳ್ಳಿ: ಬಿಜೆಪಿ
ಶಿಕಾರಿಪುರ: ಬಿಜೆಪಿ
ಸೊರಬ: ಬಿಜೆಪಿ (ಕುಮಾರ್‌ ಬಂಗಾರಪ್ಪ)
ಸಾಗರ: ಬಿಜೆಪಿ
ಬೈಂದೂರು: ಬಿಜೆಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌