ಆ್ಯಪ್ನಗರ

ಯಡಿಯೂರಪ್ಪ ಡೈರಿ ಸತ್ಯಾಸತ್ಯತೆ ಎಷ್ಟು ಎಂದು ನೀವೇ ನೋಡಿ: ಕೈಬರಹ, ಹಸ್ತಾಕ್ಷರ ಟ್ವೀಟ್‌ ಮಾಡಿದ ಬಿಜೆಪಿ

ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್ ಸುರ್ಜೆವಾಲಾ ಮಾಧ್ಯಮ ಪ್ರತಿನಿಧಿಗಳ ಸಮಯವನ್ನು ವೃಥಾ ಹಾಳು ಮಾಡಿದರು. ಇಂಥ ಅಪ್ರಸ್ತುತ ಹಾಗೂ ಸುಳ್ಳು ಕಥೆಗಳನ್ನು ಹೇಳುವುದಕ್ಕೆ ಸಮಯ ಹಾಳು ಮಾಡಿದರು ಎಂದರು ಬಿಜೆಪಿ ಟೀಕಿಸಿದೆ.

Vijaya Karnataka Web 22 Mar 2019, 9:36 pm
Vijaya Karnataka Web ಬಿಜೆಪಿ
ಬಿಜೆಪಿ
ಬೆಂಗಳೂರು: ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಡೈರಿಯ ಮಾಹಿತಿಗಳು ಎಲ್ಲವೂ ಸಂಪೂರ್ಣ ಸುಳ್ಳು ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಕಾಂಗ್ರೆಸ್‌ನ ರಣದೀಪ್‌ ಸಿಂಗ್ ಸುರ್ಜೆವಾಲಾ ಬಿಡುಗಡೆ ಮಾಡಿದ ಡೈರಿ ಮಾಹಿತಿಯ ಬಗ್ಗೆ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಹಸ್ತಾಕ್ಷದ ಪತ್ರವನ್ನೂ ಹಾಕಿದೆ.

ಡೈರಿಯಲ್ಲಿರುವ ಕೈ ಬರಹಕ್ಕೂ ಡೈರಿಯಲ್ಲಿರುವ ಕೈ ಬರಹಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಬಿಜೆಪಿ ತಿಳಿಸಿದೆ.


ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್ ಸುರ್ಜೆವಾಲಾ ಮಾಧ್ಯಮ ಪ್ರತಿನಿಧಿಗಳ ಸಮಯವನ್ನು ವೃಥಾ ಹಾಳು ಮಾಡಿದರು. ಇಂಥ ಅಪ್ರಸ್ತುತ ಹಾಗೂ ಸುಳ್ಳು ಕಥೆಗಳನ್ನು ಹೇಳುವುದಕ್ಕೆ ಸಮಯ ಹಾಳು ಮಾಡಿದರು ಎಂದು ಬಿಜೆಪಿ ಟೀಕಿಸಿದೆ.

ಯಡಿಯೂರಪ್ಪ ಕೈಬರಹ, ಹಸ್ತಾಕ್ಷರ ಶುದ್ಧ ಸುಳ್ಳು, ಡೈರಿಯೇ ಸುಳ್ಳಿನ ಕಂತೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ