ಆ್ಯಪ್ನಗರ

ಸ್ವರಕ್ಷಣೆಗಾಗಿ ಶಿವಮೊಗ್ಗಕ್ಕೆ ಬಂದ ಬಿಳಿ-ಕರಿ ಎತ್ತುಗಳು: ಎ. ಮಂಜು

ಜೆಡಿಎಸ್ ಮೋಸ ಮಾಡುವುದರಲ್ಲಿ ಎತ್ತಿದ ಕೈ. ಇವರಿಗೆ ಚುನಾವಣೆ ಬಂದಾಗ ಮಾತ್ರ ತಾವು ಜಾತ್ಯತೀತರೆಂಬ ಅಂಶ ನೆನಪಿಗೆ ಬರುತ್ತದೆ. ಅಧಿಕಾರ ಮತ್ತು ಆಡಳಿತ ಬಂದಾಗ ಮಾತ್ರ ಮಾತ್ರ ಹಿಂದುಳಿದವರು ನೆನಪಾಗುತ್ತಾರೆಂದು ಆರೋಪಿಸಿದರು.

Vijaya Karnataka Web 21 Apr 2019, 10:03 pm
ಶಿವಮೊಗ್ಗ: ತಮ್ಮ ರಕ್ಷಣೆಗೋಸ್ಕರ ಬಿಳಿ ಎತ್ತು, ಕರಿ ಎತ್ತು ಶಿವಮೊಗ್ಗಕ್ಕೆ ಬಂದಿವೆ ಮಾಜಿ ಸಚಿವ ಎ. ಮಂಜು ಲೇವಡಿ ಮಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು, ಕುಟುಂಬದ ಆಸ್ತಿ ರಕ್ಷಣೆ ಹಾಗೂ ರಾಜಕೀಯವಾಗಿ ಉಳಿದುಕೊಳ್ಳಲು ಚುನಾವಣೆ ಪ್ರಚಾರಕ್ಕಾಗಿ ಬಂದಿದ್ದಾರೆಂದು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
Vijaya Karnataka Web HD Kumaraswamy and DK Shivakumar


ಜೆಡಿಎಸ್ ಮೋಸ ಮಾಡುವುದರಲ್ಲಿ ಎತ್ತಿದ ಕೈ. ಇವರಿಗೆ ಚುನಾವಣೆ ಬಂದಾಗ ಮಾತ್ರ ತಾವು ಜಾತ್ಯತೀತರೆಂಬ ಅಂಶ ನೆನಪಿಗೆ ಬರುತ್ತದೆ. ಅಧಿಕಾರ ಮತ್ತು ಆಡಳಿತ ಬಂದಾಗ ಮಾತ್ರ ಮಾತ್ರ ಹಿಂದುಳಿದವರು ನೆನಪಾಗುತ್ತಾರೆಂದು ಆರೋಪಿಸಿದರು.

ಆಡಳಿತ ಮಾಡುವಾಗ ಅಪ್ಪ ಮಕ್ಕಳು ಸೊಸೆಯಂದಿರೇ ಬೇಕು. ಆಗ ಇವರಿಗೆ ಹಿಂದುಳಿದವರು ಕಣ್ಣಿಗೆ ಕಾಣುವುದಿಲ್ಲ. ಇವರ ಕಮಿಷನ್ ವ್ಯವಹಾರ, ಭ್ರಷ್ಟಾಚಾರ, ಅಧಿಕಾರಿಗಳಿಗೆ ಕೊಟ್ಟ ಕಿರುಕುಳ ಇಡೀ ದೇಶಕ್ಕೆ ಗೊತ್ತಿದೆ. ಹಾಸನದಲ್ಲಿ ರೇವಣ್ಣನವರ ಮಗ ಪ್ರಜ್ವಲ್, ಮಂಡ್ಯದಲ್ಲಿ ಕುಮಾರಸ್ವಾಮಿ ಮಗ ನಿಖಿಲ್, ತುಮಕೂರಿನಲ್ಲಿ ಎಚ್.ಡಿ. ದೇವೇಗೌಡ ಸೋಲುವುದು ಎಂದು ಹೇಳಿದರು. ಬಿಜೆಪಿ ಪ್ರಮುಖರಾದ ರತ್ನಾಕರ್ ಶೆಣೈ, ಬಳ್ಳೆಕೆರೆ ಸಂತೋಷ್ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌