ಆ್ಯಪ್ನಗರ

'ಡೀಕೆ' ಅಲ್ಲ ‘ಕೇಡಿ’ ಶಿವಕುಮಾರ್: ಈಶ್ವರಪ್ಪ ಕೆಂಡ

ನಗರದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಅವರನ್ನು ರಾಜ್ಯದ ಜನರೇ ‘ಕೆಡಿ’ ಶಿವಕುಮಾರ್ ಎಂದು ಒಪ್ಪಿಕೊಂಡಾಗಿದೆ. ಕಳ್ಳನೋಟುಗಳನ್ನು ಇಟ್ಟುಕೊಂಡಿರುವುದಾಗಿ ಜನರೇ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು. ನನ್ನ ಬಗ್ಗೆ ಶಿವಕುಮಾರ್ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ‘ನೀವು ಶಿವಮೊಗ್ಗಕ್ಕೆ ಬಂದಿದ್ದೀರಿ ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಒಂದುವೇಳೆ, ಮುಂದೆಯೂ ಇದೇ ರೀತಿ ಮಾತುಗಳನ್ನಾಡಿದರೆ, ನನಗೆ ಗೊತ್ತಿದೆ ಯಾವ ರೀತಿಯ ಪದಪ್ರಯೋಗ ಮಾಡಬೇಕೆಂದು ಎಚ್ಚರಿಸಿದರು.

Vijaya Karnataka Web 21 Apr 2019, 8:27 pm
ಶಿವಮೊಗ್ಗ: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಶಿವಮೊಗ್ಗಕ್ಕೆ ಬಂದು ಹಗುರವಾಗಿ ಮಾತಾನಾಡಿದ್ದಾರೆ. ಅವರು ಕಳ್ಳ ನೋಟುಗಳನ್ನು ಇಟ್ಟುಕೊಂಡಿರುವ ‘ಕೆಡಿ’ ಶಿವಕುಮಾರ್ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಕೆಂಡಕಾರಿದರು.
Vijaya Karnataka Web DK Shivakumar- -KS Eshwarappa


ನಗರದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಅವರನ್ನು ರಾಜ್ಯದ ಜನರೇ ‘ಕೆಡಿ’ ಶಿವಕುಮಾರ್ ಎಂದು ಒಪ್ಪಿಕೊಂಡಾಗಿದೆ. ಕಳ್ಳನೋಟುಗಳನ್ನು ಇಟ್ಟುಕೊಂಡಿರುವುದಾಗಿ ಜನರೇ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

ನನ್ನ ಬಗ್ಗೆ ಶಿವಕುಮಾರ್ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ‘ನೀವು ಶಿವಮೊಗ್ಗಕ್ಕೆ ಬಂದಿದ್ದೀರಿ ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಒಂದುವೇಳೆ, ಮುಂದೆಯೂ ಇದೇ ರೀತಿ ಮಾತುಗಳನ್ನಾಡಿದರೆ, ನನಗೆ ಗೊತ್ತಿದೆ ಯಾವ ರೀತಿಯ ಪದಪ್ರಯೋಗ ಮಾಡಬೇಕೆಂದು ಎಚ್ಚರಿಸಿದರು.

ಈಶ್ವರಪ್ಪನವರೇ ರಾಘವೇಂದ್ರನ ಸೋಲಿಸ್ತಾರೆ: ಎಚ್‌ಡಿ ರೇವಣ್ಣ

ರೇವಣ್ಣಗೆ ತಾಯಿ ಬೆಲೆ ಗೊತ್ತಿಲ್ಲ:
ಬಿಜೆಪಿ ಕಾರ್ಯಕರ್ತ ನಾನು. ಪಕ್ಷವನ್ನು ತಾಯಿ ಎಂದು ಭಾವಿಸಿದವನು. ಹೀಗಾಗಿ, ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಮಾತೃದ್ರೋಹ ಮಾಡುವುದಿಲ್ಲ. ಅದೇನಿದ್ದರೂ ತಾಯಿಯ ಬೆಲೆ ಗೊತ್ತಿರದ ರೇವಣ್ಣನಿಗೆ ಬಿಟ್ಟಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಸುಭದ್ರತೆ ದೃಷ್ಟಿಯಿಂದ ಮೋದಿ ಅವರ ಕೈಬಲ ಪಡಿಸಬೇಕು. ಅದಕ್ಕಾಗಿ ಶಿವಮೊಗ್ಗದಲ್ಲಿ ರಾಘಣ್ಣನಿಗೆ ಎಂಪಿ ಮಾಡಿಯೇ ಮಾಡುತ್ತೇವೆ. ಪಕ್ಷದಲ್ಲಿರುವವರನ್ನು ಸೋಲಿಸುವುದೇನಿದ್ದರೂ ಪರಸ್ಪರರನ್ನು ಸೋಲಿಸುವ ಮೈತ್ರಿಕೂಟದ ಡಿ.ಕೆ. ಶಿವಕುಮಾರ್, ಕುಮಾರಣ್ಣ ಹಾಗೂ ಹಾಗೂ ರೇವಣ್ಣನಿಗೆ ಬಿಟ್ಟದ್ದು. ಸೋಲಿಸುವ ಆಲೋಚನೆ ಇರೋದರಿಂದ ಆ ರೀತಿ ಮಾತನಾಡಿದ್ದಾರೆ ಎಂದು ಟಾಂಗ್ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ