ಆ್ಯಪ್ನಗರ

ಮೋದಿ ಫೋಟೋ ತೋರಿಸಿ ಮತ ಕೇಳುವವರಿಗೆ ಸಿಲ್ಕ್‌ ಬುರ್ಖಾ ಕೊಡಿಸುತ್ತೇನೆ: ಜಮೀರ್‌ ಅಹಮದ್‌

ಅಧಿಕಾರದ ಅಮಲಿನಲ್ಲಿ ಮೋದಿ ಅವರಿಗೆ ರಾಮ ಮಂದಿರ ನಿರ್ಮಾಣ ಜತೆಗೆ ಹಿರಿಯ ನಾಯಕ ಅಡ್ವಾಣಿ ಅಂಥವರನ್ನು ಮರೆತಿದ್ದಾರೆ. ರಾಮ ಮಂದಿರವನ್ನು ನಾವು ಮುಸ್ಲಿಮರು ಕಟ್ಟುತ್ತೇವೆ. ದಯಮಾಡಿ ಮತಕ್ಕಾಗಿ ಕೋಮು ಸಾಮರಸ್ಯ, ಕೋಮು ಭಾವನೆ ಬಿತ್ತಿ ಹಿಂದೂ ಮುಸ್ಲಿಮ್‌ ಸಹೋದರತ್ವ ಕೆಡಿಸಬೇಡಿ

Vijaya Karnataka Web 20 Apr 2019, 5:41 pm
ಹಾವೇರಿ: ಗಂಡ ಮತ್ತು ಹೆಂಡತಿ ನಡುವೆ ಕಷ್ಟ, ಸುಖ ಹೇಳಿಕೊಳ್ಳುವುದೇ ಮನ್ ಕಿ ಬಾತ್. ಹೆಂಡತಿ ಬಿಟ್ಟಿರುವ ಮೋದಿ ಐದು ವರ್ಷಗಳ ತಮ್ಮ ಸಾಧನೆ ಕುರಿತು ಕಾಮ್ ಕಿ ಬಾತ್ ಹೇಳಿಕೊಳ್ಳುತ್ತಿಲ್ಲ ಏಕೆ? ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ ಅಹ್ಮದ್ ಖಾನ್‌ ಲೇವಡಿ ಮಾಡಿದ್ದಾರೆ.
Vijaya Karnataka Web ಜಮೀರ್‌ ಅಹಮದ್‌
ಜಮೀರ್‌ ಅಹಮದ್‌


ಹಾವೇರಿಯಲ್ಲಿ ಅಲ್ಪಸಂಖ್ಯಾತ ಸಮಾಜದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಹಾವೇರಿ ಕ್ಷೇತ್ರದ ಎಂಪಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಸಹ ತಮ್ಮ ಹತ್ತು ವರ್ಷಗಳ ಸಾಧನೆ ಹೇಳಿ ಮತ ಕೇಳುವ ಬದಲು ಮೋದಿ ಫೋಟೋ ತೋರಿಸಿ ಮತ ಕೇಳುವುದಾದಲ್ಲಿ ಅವರಿಗೆ ನಾನೇ ಸಿಲ್ಕ್ ಬುರ್ಕಾ ಕೊಡಿಸುತ್ತೇನೆ ಮುಖಕ್ಕೆ ಹಾಕಿಕೊಂಡು ಮೋದಿ ಪೋಟೋ ತೋರಿಸಿ ಮತ ಕೇಳಲಿ ಎಂದು ಕುಟುಕಿದರು.

ಅಧಿಕಾರದ ಅಮಲಿನಲ್ಲಿ ಮೋದಿ ಅವರಿಗೆ ರಾಮ ಮಂದಿರ ನಿರ್ಮಾಣ ಜತೆಗೆ ಹಿರಿಯ ನಾಯಕ ಅಡ್ವಾಣಿ ಅಂಥವರನ್ನು ಮರೆತಿದ್ದಾರೆ. ರಾಮ ಮಂದಿರವನ್ನು ನಾವು ಮುಸ್ಲಿಮರು ಕಟ್ಟುತ್ತೇವೆ. ದಯಮಾಡಿ ಮತಕ್ಕಾಗಿ ಕೋಮು ಸಾಮರಸ್ಯ, ಕೋಮು ಭಾವನೆ ಬಿತ್ತಿ ಹಿಂದೂ ಮುಸ್ಲಿಮ್‌ ಸಹೋದರತ್ವ ಕೆಡಿಸಬೇಡಿ ಎಂದು ಮನವಿ ಮಾಡಿದರು.

ಮೋದಿ ನೇತೃತ್ವದ ಸರಕಾರ ಪುನಃ ಅಧಿಕಾರಕ್ಕೆ ಬಂದಲ್ಲಿ ಪ್ರಜಾಪ್ರಭುತ್ವ ನಿರ್ನಾಮ ಖಂಡಿತ. ಈ ಬಾರಿಯ ಚುನಾವಣೆ ದೇಶ ಉಳಿಸುವ ಹೋರಾಟವಾಗಿದೆ. ಅಲ್ಪಸಂಖ್ಯಾತರಿಗೆ ಅನ್ಯಾಯ ಆಗಿದೆ ಎಂದು ಮನೆಯಲ್ಲಿ ಕುಳಿತುಕೊಳ್ಳದೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಜಮೀರ್‌ ಅಹಮದ್‌ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌