ಆ್ಯಪ್ನಗರ

ಮೈತ್ರಿ ಸರಕಾರಕ್ಕೆ ಬಂಡಾಯ ಶಮನ ಮಾಡುವುದೇ ಆಡಳಿತ: ಪ್ರಹ್ಲಾದ್‌ ಜೋಶಿ

ರಾಜ್ಯ ಸರಕಾರವನ್ನು ಬಿಜೆಪಿ ಅತಂತ್ರ ಮಾಡುತ್ತಿಲ್ಲ, ಆ ಸರಕಾರ ಪತನಗೊಳ್ಳುತ್ತದೆ. ಹೊಸ ಸರಕಾರದಲ್ಲಿ ಸಚಿವ ಸ್ಥಾನಕ್ಕೆ ಯಾವುದೇ ಬೇಡಿಕೆ ಕೇಳಿಲ್ಲ, ಪಕ್ಷ ಕೊಡುವ ಜವಾಬ್ದಾರಿ‌ ನಿರ್ವಹಿಸುತ್ತೇನೆ ಎಂದು ಪ್ರಹ್ಲಾದ್ ಜೋಷಿ ಸ್ಪಷ್ಟಪಡಿಸಿದರು.

Vijaya Karnataka Web 28 May 2019, 3:21 pm
ಧಾರವಾಡ: ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಬರ ಪರಿಹಾರ ಕಾಮಗಾರಿಗಳು ನಡೆಯುತ್ತಿಲ್ಲ, ಕುಡಿಯುವ ನೀರಿನ ಹಾಹಾಕಾರ ನಿರ್ಮಾಣವಾಗಿದೆ. ಮಲೆನಾಡಿನ ಪ್ರದೇಶಗಳಲ್ಲಿಯೂ ನೀರಿನ ಹಾಹಾಕಾರ ನಿರ್ಮಾಣವಾಗಿದೆ ಧಾರವಾಡದಲ್ಲಿ ಸಂಸದ ಪ್ರಹ್ಲಾದ್‌ ‌ಜೋಶಿ ಹೇಳಿದ್ದಾರೆ.
Vijaya Karnataka Web ಪ್ರಹ್ಲಾದ್‌ ಜೋಶಿ
ಪ್ರಹ್ಲಾದ್‌ ಜೋಶಿ


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾರೆ ಕಾಂಗ್ರೆಸ್‌, ಜೆಡಿಎಸ್ ನಾಯಕರು ಪರಿಸ್ಥಿತಿ ರಾಜ್ಯ ಸರಕಾರ ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಬಂಡಾಯ ಶಮನ ಮಾಡೋದ್ರಲ್ಲೇ ಬ್ಯುಸಿಯಾಗಿದ್ದಾರೆ. ಕಾಲು ಜಗ್ಗುವುದಕ್ಕೆ ಪರ್ಯಾಯ ಕ್ರಮ ಕೈಗೊಳ್ಳುವಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ವಿರುದ್ದ ಹರಿಹಾಯ್ದರು.

ಸರ್ಕಾರವೇ ಕುಸಿದು ಹೋಗುತ್ತೇ. ಜಿಂದಾಲ್.ಗೆ ಭೂಮಿ ನೀಡುವ ವಿಚಾರ ಈ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಬೇಕು. ಜಿಂದಾಲ್‌ದವರು ಇಷ್ಟು ಭೂಮಿ ತಗೊಂಡ ಏನ ಮಾಡ್ತಾರೆ.‌ ಕಮೀಷನ್ ಪಡೆದು ಟೆಂಡರ್‌ಗಳನ್ನು ನೀಡುತ್ತಿದ್ದಾರೆ. ಟೆಂಡರ್ ಕರೆದು ಕಮಿಷನ್ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೋದಿ ಬಗ್ಗೆ ರಾಹುಲ್‌ಗಾಂಧಿ ಬಾಯಿಗೆ ಬಂದಂತೆ ಮಾತನಾಡಿದ್ದರು. ಇಲ್ಲಿ ಇಷ್ಟು ಪ್ರಮಾಣದಲ್ಲಿ ನಿಮ್ಮದೇ ಮೈತ್ರಿ ಸರಕಾರ ಲೂಟಿ ಮಾಡುತ್ತಿದೆ. ಈ ಬಗ್ಗೆ ರಾಹುಲ್ ಗಾಂಧಿ ಬಾಯಿ ತೆರೆಯಬೇಕು. ಈ ಬಗ್ಗೆ ನಾನು ರಾಹುಲ್‌ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಪತ್ರ ಬರೆದು ಅವರಿಂದ ಪ್ರತಿಕ್ರಿಯೆ ಕೇಳುವೆ‌ ಎಂದರು.

ರಾಜ್ಯ ಸರಕಾರವನ್ನು ಬಿಜೆಪಿ ಅತಂತ್ರ ಮಾಡುತ್ತಿಲ್ಲ, ಆ ಸರಕಾರ ಪತನಗೊಳ್ಳುತ್ತದೆ. ಹೊಸ ಸರಕಾರದಲ್ಲಿ ಸಚಿವ ಸ್ಥಾನಕ್ಕೆ ಯಾವುದೇ ಬೇಡಿಕೆ ಕೇಳಿಲ್ಲ, ಪಕ್ಷ ಕೊಡುವ ಜವಾಬ್ದಾರಿ‌ ನಿರ್ವಹಿಸುತ್ತೇನೆ ಎಂದು ಪ್ರಹ್ಲಾದ್ ಜೋಷಿ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌