ಆ್ಯಪ್ನಗರ

ಮಹಾಘಟಬಂಧನದಿಂದ ದೇಶದ ಸಂಸ್ಕೃತಿ ಹಾಳಾಗುತ್ತಿದೆ: ಪ್ರಧಾನಿ ಮೋದಿ

ಕಾಂಗ್ರೆಸ್ - ಜೆಡಿಎಸ್‌ ಸಮ್ಮಿಶ್ರ ಸರಕಾರವನ್ನು ಟೀಕಿಸಿದ ಪ್ರಧಾನಿ ಮೋದಿ ಭ್ರಷ್ಟಾಚಾರ ಮಹಾಘಟಬಂಧನದ ಪರಂಪರೆ. ಮಹಾಘಟಬಂಧನದಿಂದ ದೇಶದ ಸಂಸ್ಕೃತಿ ಹಾಳಾಗುತ್ತಿದೆ. ಕಾಂಗ್ರೆಸ್ - ಜೆಡಿಎಸ್‌ಗೆ ವೋಟ್‌ ಬ್ಯಾಂಕ್, ವಂಶವಾಹಿ ರಾಜಕಾರಣ ಮಾತ್ರ ಮುಖ್ಯ ಎಂದು ವಾಗ್ದಾಳಿ ನಡೆಸಿದರು.

Vijaya Karnataka Web 18 Apr 2019, 5:28 pm
ಚಿಕ್ಕೋಡಿ: ಕರ್ನಾಟಕದಲ್ಲಿ ಒಂದೆಡೆ ಮೊದಲನೇ ಹಂತದ ಚುನಾವಣೆಯ ಮತದಾನ ನಡೆಯುತ್ತಿದ್ದರೆ, ಎರಡನೇ ಹಂತದ ಚುನಾವಣೆಗೆ ಪ್ರಚಾರ ಇನ್ನೊಂದೆಡೆ ನಡೆಯುತ್ತಿದೆ. ಗುರುವಾರ ( ಏಪ್ರಿಲ್ 18, 2019)ರಂದು ಪ್ರಧಾನಿ ಮೋದಿ ಉತ್ತರ ಕರ್ನಾಟಕದಲ್ಲಿ ಪ್ರಚಾರ ಮಾಡುತ್ತಿದ್ದು, ಚಿಕ್ಕೋಡಿಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ರ‍್ಯಾಲಿ ನಡೆಸುತ್ತಿದ್ದಾರೆ.
Vijaya Karnataka Web modi


ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ''ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರದ ನಾಗರಿಕ ಬಂಧು ಭಗಿನಿಯರೇ ನಿಮಗೆಲ್ಲ ಚೌಕೀದಾರ್ ನರೇಂದ್ರ ಮೋದಿ ಮಾಡುವ ನಮಸ್ಕಾರಗಳು'' ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.

ಅಲ್ಲದೆ, ''ಜಗಜ್ಯೋತಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಾಡಿ ಮಲ್ಲಮ್ಮ ಸೇರಿದಂತೆ ಹಲವು ಹುತಾತ್ಮರಿಗೆ ನನ್ನ ನಮನಗಳು'' ಎಂದೂ ಕನ್ನಡದಲ್ಲೇ ಭಾಷಣ ಮಾಡಿದರು.

ಈ ವೇಳೆ ಕಾಂಗ್ರೆಸ್ - ಜೆಡಿಎಸ್‌ ಸಮ್ಮಿಶ್ರ ಸರಕಾರವನ್ನು ಟೀಕಿಸಿದ ಪ್ರಧಾನಿ ಮೋದಿ ಭ್ರಷ್ಟಾಚಾರ ಮಹಾಘಟಬಂಧನದ ಪರಂಪರೆ. ಮಹಾಘಟಬಂಧನದಿಂದ ದೇಶದ ಸಂಸ್ಕೃತಿ ಹಾಳಾಗುತ್ತಿದೆ. ಕಾಂಗ್ರೆಸ್ - ಜೆಡಿಎಸ್‌ಗೆ ವೋಟ್‌ ಬ್ಯಾಂಕ್, ವಂಶವಾಹಿ ರಾಜಕಾರಣ ಮಾತ್ರ ಮುಖ್ಯ ಎಂದು ವಾಗ್ದಾಳಿ ನಡೆಸಿದರು.

ಅಲ್ಲದೆ, ಸಿಎಂ ಕುಮಾರಸ್ವಾಮಿಯನ್ನು ಟೀಕಿಸಿದ ಮೋದಿ, ''ಊಟಕ್ಕೆ ಗತ್ತಿಯಿಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಕುಮಾರಸ್ವಾಮಿ ಸೈನಿಕರಿಗೆ ಅಪಮಾನ ಮಾಡಿದ್ದಾರೆ'' ಎಂದು ಹೇಳಿದರು. ಅಲ್ಲದೆ, ಇದು ಸೈನಿಕರಿಗೆ ಅಪಮಾನವಲ್ಲವೇ, ಇಂಥವರಿಗೆ ಬುದ್ಧಿ ಕಲಿಸುತ್ತೀರಲ್ಲವೇ'' ಎಂದು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು, ಬಿಜೆಪಿ ಕಾರ್ಯಕರ್ತರನ್ನು ಹಾಗೂ ಮೋದಿ ಬೆಂಬಲಿಗರನ್ನು ಪ್ರಧಾನಿ ಪ್ರಶ್ನೆ ಮಾಡಿದರು.

ಅಲ್ಲದೆ, ಎಸಿ ರೂಂನಲ್ಲಿ ಕುಳಿತುಕೊಂಡಿರುವವರಿಗೆ ಮೋದಿಯ ಹವಾ ಗೊತ್ತಾಗಲ್ಲ ಎಂದು ವಿಪಕ್ಷದ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ ಮೋದಿ. ಜತೆಗೆ, ಸೈನಿಕರ ವಿಶೇಷಾಧಿಕಾರ (ಎಎಫ್‌ಎಸ್‌ಪಿಎ) ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿ ಕಾಂಗ್ರೆಸ್ ಅನ್ನು ಟೀಕಿಸಿದರು.

ನೀವು ಕಮಲಕ್ಕೆ ಒತ್ತುವ ಎಲ್ಲ ವೋಟು ಮೋದಿ ಖಾತೆಗೆ ಜಮೆಯಾಗುತ್ತೆ. ಮೇ 23ರಂದು ಮೋದಿ ಸರಕಾರ ರಚನೆಯಾಗುತ್ತದೆ. ರೈತರ ಅಕೌಂಟ್‌ಗೆ ಹಣ ಜಮಾವಣೆಯಾಗುತ್ತದೆ ಎಂದೂ ಕಿಸಾನ್‌ ಸಮ್ಮಾನ್‌ ಬಗ್ಗೆ ಮೋದಿ ಹೇಳಿದರು. ಅಲ್ಲದೆ, ಕೇಂದ್ರ ಸರಕಾರದ ರೈತರ ಯೋಜನೆಗಳ ಬಗ್ಗೆ ಮೋದಿ ಒತ್ತಿ ಹೇಳಿದರು.

ಭಾಷಣದ ಕೊನೆಯಲ್ಲಿ ನಾನೂ ಚೌಕೀದಾರ್ ಎಂದು ಎಲ್ಲರ ಬಾಯಲ್ಲಿ ಮೋದಿ ಹೇಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ