ಆ್ಯಪ್ನಗರ

ಮಂಡ್ಯದಲ್ಲಿ ದರ್ಶನ್ ಪ್ರಚಾರ: ಕಹಳೆ ಹಿಡಿದು ಸುಮಲತಾ ಗೆಲ್ಲಿಸಿ ಎಂದ ಚಾಲೆಂಜಿಂಗ್ ಸ್ಟಾರ್

ದರ್ಶನ್ ಆಗಮಿಸುತ್ತಿದ್ದಂತೆ 'ಡಿ ಬಾಸ್ ಡಿ ಬಾಸ್' ಎಂದು ಅಭಿಮಾನಿಗಳು ಜೈಕಾರ ಕೂಗಿದರು. ದಿವಂಗತ ಅಂಬರೀಷ್ ಅವರ ಭಾವ ಚಿತ್ರಕ್ಕೆ ದರ್ಶನ್ ಪುಷ್ಪಾರ್ಚನೆ ಸಲ್ಲಿಸಿದರು. 'ಇಲ್ಲಿ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಅವರು (ವಿರೋಧಿಗಳು) ಮಾತನಾಡಿಕೊಳ್ಳಲಿ; ಆದರೆ ಏಪ್ರಿಲ್ 18ರಂದು ನಡೆಯುವ ಚುನಾವಣೆ ಅವರ ಮಾತಿಗೆ ಉತ್ತರವಾಗಲಿ ಎಂದು ಅಭಿಮಾನಿಗಳೆದುರು ದರ್ಶನ್ ನುಡಿದರು.

Vijaya Karnataka Web 1 Apr 2019, 12:02 pm
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರ ಪ್ರಚಾರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಕೆ.ಆರ್‌.ಎಸ್‌ಗೆ ಆಗಮಿಸಿದರು.
Vijaya Karnataka Web Suamatha-Darshan


ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ದರ್ಶನ್ ಪ್ರಚಾರ ನಡೆಸಿದರು.

ದರ್ಶನ್ ಆಗಮಿಸುತ್ತಿದ್ದಂತೆ 'ಡಿ ಬಾಸ್ ಡಿ ಬಾಸ್' ಎಂದು ಅಭಿಮಾನಿಗಳು ಜೈಕಾರ ಕೂಗಿದರು. ದಿವಂಗತ ಅಂಬರೀಷ್ ಅವರ ಭಾವ ಚಿತ್ರಕ್ಕೆ ದರ್ಶನ್ ಪುಷ್ಪಾರ್ಚನೆ ಸಲ್ಲಿಸಿದರು.

ದರ್ಶನ್ ನೋಡಲು ಸಾವಿರಾರು ಜನ ಭಾಗಿಯಾಗಿದ್ದರು. ನೂಕು ನುಗ್ಗಲು ಉಂಟಾಗುತ್ತಿದ್ದಂತೆ ಜನರನ್ನು ಚದುರಿಸಲು ಪೊಲೀಸರ ಲಾಠಿ ಪ್ರಹಾರ ನಡೆಸಿದರು.

'ಇಲ್ಲಿ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಅವರು (ವಿರೋಧಿಗಳು) ಮಾತನಾಡಿಕೊಳ್ಳಲಿ; ಆದರೆ ಏಪ್ರಿಲ್ 18ರಂದು ನಡೆಯುವ ಚುನಾವಣೆ ಅವರ ಮಾತಿಗೆ ಉತ್ತರವಾಗಲಿ ಎಂದು ಅಭಿಮಾನಿಗಳೆದುರು ದರ್ಶನ್ ನುಡಿದರು.

'ಅಂಬರೀಷ್‌ಗೆ ಅಧಿಕಾರದ ದಾಹ ಇಲ್ಲ. ಕಾವೇರಿ ವಿಚಾರಕ್ಕೆ ಅಧಿಕಾರ ತ್ಯಾಗ ಮಾಡಿದರು. ಸುಮಲತಾ ಅವರನ್ನು ಬಹುಮತದಿಂದ ಗೆಲ್ಲಿಸಿ ಅಂಬರೀಷ್‌ಗೆ ಗೌರವ ಸಲ್ಲಿಸಿ' ಎಂದು ದರ್ಶನ್ ಕರೆ ನೀಡಿದರು.

ಕಹಳೆ ಹಿಡಿದು ಸುಮಲತಾಗೆ ಮತ ಹಾಕಿ ಎಂದು ದರ್ಶನ್ ಮನವಿ ಮಾಡಿದರು. ಕಹಳೆ ಊದುತ್ತಿರುವ ರೈತ ಸುಮಲತಾ ಅವರ ಚುನಾವಣೆ ಚಿಹ್ನೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ