ಆ್ಯಪ್ನಗರ

ಮತಯಂತ್ರದ ಕಂಟ್ರೋಲ್ ಜಖಂಗೊಳಿಸಿದ ಕಾಂಗ್ರೆಸ್ ಏಜೆಂಟ್

ಕಾಂಗ್ರೆಸ್ ಎಜೇಂಟ್ ಗುರುನಾಥನಿಂದ ಮತಗಟ್ಟೆ ಕೇಂದ್ರದಲ್ಲಿಯೇ Evm ಯಂತ್ರದ ಕಂಟ್ರೋಲ್ ಯುನಿಟ್ ಜಖಂಗೊಂಡಿದೆ. ಇದರಿಂದ ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು.

Vijaya Karnataka Web 23 Apr 2019, 6:38 pm
ಯಾದಗಿರಿ: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ದೇಶದೆಲ್ಲೆಡೆ ನಡೆದಿದ್ದು, ಹಲವೆಡೆ ಸಣ್ಣಪುಟ್ಟ ಘಟನೆ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದೆ.
Vijaya Karnataka Web agent.


ಆದರೆ ಯಾದಗಿರಿಯಲ್ಲಿ ಮತದಾನ ಕೇಂದ್ರದೊಳಗಿದ್ದ ಕಾಂಗ್ರೆಸ್ ಏಜೆಂಟ್ ಎಲೆಕ್ಟ್ರಾನಿಕ್ ಮತಯಂತ್ರದ ಕಂಟ್ರೋಲ್ ಯುನಿಟ್ ಅನ್ನೇ ಜಖಂಗೊಳಿಸಿದ್ದಾನೆ.

ಕಾಂಗ್ರೆಸ್ ಎಜೇಂಟ್ ಗುರುನಾಥನಿಂದ ಮತಗಟ್ಟೆ ಕೇಂದ್ರದಲ್ಲಿಯೇ Evm ಯಂತ್ರದ ಕಂಟ್ರೋಲ್ ಯುನಿಟ್ ಜಖಂಗೊಂಡಿದೆ. ಇದರಿಂದ ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು.


ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕರಿಬಾವಿ ಗ್ರಾಮದ ಮತಗಟ್ಟೆ ಕೇಂದ್ರ 31 ರಲ್ಲಿ ಘಟನೆ ನಡೆದಿದ್ದು ಮತಗಟ್ಟೆ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪರ ಮತ ಹಾಕು ಎಂದು ಹೇಳುತ್ತಿದ್ದಕ್ಕೆ ಕೋಪಗೊಂಡು ಕಾಂಗ್ರೆಸ್ ಏಜೆಂಟ್ ಗುರುನಾಥ್ ಈ ಕೃತ್ಯ ಎಸಗಿದ್ದಾನೆ.

ಕೆಲ ಗಂಟೆ ನಂತರ ಹೊಸ ಕಂಟ್ರೋಲ್ ಯುನಿಟ್ ಅಳವಡಿಸಿದ್ದು, ನಂತರ ಮತದಾನ ಮುಂದುವರಿದಿದೆ. ಸ್ಥಳಕ್ಕೆ ಸುರಪುರ ಪೊಲೀಸರ ಭೇಟಿ,
ಪರಿಶೀಲನೆ ನಡೆಸಿದ್ದು, ಏಜೆಂಟ್‌ನನ್ನು ವಶಕ್ಕೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ