ಆ್ಯಪ್ನಗರ

ವಾಜಪೇಯಿ ಹೊಗಳಿದ ಕಾಂಗ್ರೆಸ್‌ ಮಾಜಿ ಸಚಿವ!

ನಮ್ಮ ಪ್ರಧಾನಿ ಮೋದಿ ಸ್ವಯಂ ಘೋಷಿತ ಚೌಕಿದಾರ ಆಗಿದ್ದಾರೆ. ವಾಸ್ತವದಲ್ಲಿ ಅವರು ಚೌಕಿದಾರ ಅಲ್ಲ ಬದಲಾಗಿ ಕ್ಷಣಕ್ಕೊಂದು ಉಡುಪು ಧರಿಸುವ ಶೋಕಿದಾರ ಎಂದು ಲೇವಡಿ ಮಾಡಿದರು.

Vijaya Karnataka Web 19 Apr 2019, 8:34 pm
ಹಾವೇರಿ: ದಲಿತ ನೌಕರರ ಬಡ್ತಿ ಮೀಸಲು ವಿಚಾರದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅಭಿನಂದನಾರ್ಹರು ಎಂದು ಕಾಂಗ್ರೆಸ್ ನ ಮಾಜಿ ಸಚಿವ ಎಚ್. ಆಂಜನೇಯ ಗುಣಗಾನ ಮಾಡಿದರು.
Vijaya Karnataka Web ಅಟಲ್‌ ಬಿಹಾರಿ ವಾಜಪೇಯಿ
ಅಟಲ್‌ ಬಿಹಾರಿ ವಾಜಪೇಯಿ


ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತ ನೌಕರರ ಬಡ್ತಿ ವಿಷಯದಲ್ಲಿ ಸುಪ್ರೀಂ ಆದೇಶದ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಿ ಬಡ್ತಿ ನೀಡಲಾಯಿತು . ಇದಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದರೆ, ಅವರು ಶೇ.10 ರಷ್ಟು ಮೇಲ್ವರ್ಗದ ನೌಕರರಿಗೆ ಮೀಸಲು ನೀಡಿದರೆ. ದಲಿತರಿಗೆ ನಿರಾಕರಿಸುವ ಮೂಲಕ ದಲಿತ ವಿರೋಧಿ ಪ್ರಧಾನಿಯಾಗಿದ್ದಾರೆ ಎಂದು ಆರೋಪಿಸಿದರು.

ನಮ್ಮ ಪ್ರಧಾನಿ ಮೋದಿ ಸ್ವಯಂ ಘೋಷಿತ ಚೌಕಿದಾರ ಆಗಿದ್ದಾರೆ. ವಾಸ್ತವದಲ್ಲಿ ಅವರು ಚೌಕಿದಾರ ಅಲ್ಲ ಬದಲಾಗಿ ಕ್ಷಣಕ್ಕೊಂದು ಉಡುಪು ಧರಿಸುವ ಶೋಕಿದಾರ ಎಂದು ಲೇವಡಿ ಮಾಡಿದರು.

ಬಿಜೆಪಿಯಲ್ಲಿ ಪ್ರಾಕ್ಸ್ ಬೋಟಿಂಗ್ ಗ್ಯಾಂಗ್ ಇದೆ. ಮೊದಲ ಹಂತದ ಚುನಾವಣೆಯಲ್ಲಿ ಕೆಲವೆಡೆ ಸಿಕ್ಕಿಬಿದ್ದಿದ್ದಾರೆ. ಎರಡನೆಯ ಹಂತದಲ್ಲಿ ಈ ಗ್ಯಾಂಗ್ ಬರಬಹುದು ಎಚ್ಚರವಹಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಈ ಬಾರಿ ಮಿತ್ರ ಪಕ್ಷ 22 ಸ್ಥಾನ ಗೆಲ್ಲುವುದು ನಿಕ್ಕಿ ರಾಹುಲ್ ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌