ಆ್ಯಪ್ನಗರ

ಜೆಡಿಎಸ್‌ಗೆ ಕ್ಷೇತ್ರದ ಜತೆಗೆ ಅಭ್ಯರ್ಥಿ ದಾನಗೈದ ಕಾಂಗ್ರೆಸ್‌

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್‌ ಮಧ್ವರಾಜ್‌ ಕಾಂಗ್ರೆಸ್‌, ಜೆಡಿಎಸ್‌ ಚಿಹ್ನೆಯುಳ್ಳ ಶಾಲನ್ನು ತೊಟ್ಟು ಶುಕ್ರವಾರ ರಾತ್ರಿ ಉಡುಪಿಯಲ್ಲಿ ಹಾಗೂ ಶನಿವಾರ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಮತ ಯಾಚನೆಯಲ್ಲಿ ತೊಡಗಿದ್ದಾರೆ.

Vijaya Karnataka Web 24 Mar 2019, 2:49 pm
ಎಸ್‌. ಜಿ.ಕುರ್ಯ
Vijaya Karnataka Web JDS

ಉಡುಪಿ:
ಕಾಂಗ್ರೆಸ್‌ ಪಕ್ಷ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜತೆಗೆ ತನ್ನ ಅಭ್ಯರ್ಥಿಯನ್ನೂ ಜೆಡಿಎಸ್‌ಗೆ ದಾನ ಮಾಡುವ ಮೂಲಕ ಹೊಸ ರಾಜಕೀಯ ಇತಿಹಾಸಕ್ಕೆ ಮುನ್ನುಡಿ ಬರೆದಿದೆ. ಮೈತ್ರಿ ಸರಕಾರದಲ್ಲಿ ಕ್ಷೇತ್ರ ಹಂಚಿಕೆ ಕಾಮನ್‌. ಆದರೆ ಕಾಂಗ್ರೆಸ್‌ ತನ್ನ ಪಕ್ಷದ ನಾಯಕ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಬಿಜೆಪಿ ವಿರುದ್ಧ ಫೈಟ್‌ಗೆ ನಿಂತಿರುವುದು ಕರಾವಳಿ ರಾಜಕೀಯ ಇತಿಹಾಸಕ್ಕೆ ಹೊಸ ಸೇರ್ಪಡೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್‌ ಮಧ್ವರಾಜ್‌ ಕಾಂಗ್ರೆಸ್‌, ಜೆಡಿಎಸ್‌ ಚಿಹ್ನೆಯುಳ್ಳ ಶಾಲನ್ನು ತೊಟ್ಟು ಶುಕ್ರವಾರ ರಾತ್ರಿ ಉಡುಪಿಯಲ್ಲಿ ಹಾಗೂ ಶನಿವಾರ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಮತ ಯಾಚನೆಯಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್‌, ಜೆಡಿಎಸ್‌ ನಾಯಕರು, ಕಾರ್ಯಕರ್ತರಲ್ಲಿ ಕುತೂಹಲದ ಜತೆಗೆ ಪಕ್ಷದ ಅಸ್ತಿತ್ವ ಉಳಿಸಲು ಕಣಕ್ಕಿಳಿದ ಪ್ರಮೋದ್‌ ಮಧ್ವರಾಜ್‌ ಆತಂಕವನ್ನೂ ಹುಟ್ಟುಹಾಕಿದ್ದಾರೆ. ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಕಾಂಗ್ರೆಸ್‌ ವರಿಷ್ಠರು ಅಭ್ಯರ್ಥಿಯನ್ನೂ ದಾನ ಮಾಡಿದ್ದಕ್ಕೆ ಕಾಂಗ್ರೆಸ್‌ನ ಒಂದು ವಲಯದಲ್ಲಿ ಆಕ್ರೋಶವೂ ಇದೆ.

ಜೆಡಿಎಸ್‌ನಿಂದ ಬಿ ಫಾರಂ ಜತೆಗೆ ಶಾಸ್ತ್ರಕ್ಕಾಗಿ ಸದಸ್ಯತ್ವ ಪಡೆದಿರುವ ಪ್ರಮೋದ್‌ ಮಧ್ವರಾಜ್‌ ಇನ್ನೂ ಕಾಂಗ್ರೆಸ್‌ ತೊರೆದಿಲ್ಲ. ಕಾಂಗ್ರೆಸ್‌, ಜೆಡಿಎಸ್‌ ಎರಡೂ ದೋಣಿಯ ಮೇಲೆ ಮಧ್ವರಾಜ್‌ ಬ್ಯಾಲೆನ್ಸ್‌ ಮಾಡುತ್ತಿದ್ದಾರೆ. ಈ ಹೊಸ ಸೂತ್ರದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಮತಗಳು ತಮ್ಮದಾಗಬಹುದು. ಈ ಮೂಲಕ ಗೆಲುವು ಸಾಧಿಸಬಹುದು ಎಂದುವುದು ಪ್ರಮೋದ್‌ ಮಧ್ವರಾಜ್‌ ಲೆಕ್ಕಾಚಾರ. ಈ ಹುಮ್ಮಸ್ಸಿನಲ್ಲಿ ಅವರು ಫೀಲ್ಡ್‌ಗಿಳಿದಿದ್ದಾರೆ.

64ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಸ್ತಿತ್ವಕ್ಕೆ ಧಕ್ಕೆ!ಮಂಡ್ಯ, ಹಾಸನ, ಶಿವಮೊಗ್ಗ, ತುಮಕೂರು, ಬೆಂಗಳೂರು ಉತ್ತರ, ವಿಜಯಪುರ, ಉಡುಪಿ ಚಿಕ್ಕಮಗಳೂರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಡೆವ ಚುನಾವಣಾ ಮತ ಯಂತ್ರದಲ್ಲಿ ಹಸ್ತ ಚಿಹ್ನೆ ಇರದೆ , 9 ಜಿಲ್ಲೆಗಳ 64 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌