ಆ್ಯಪ್ನಗರ

ಮೈಸೂರಲ್ಲಿ ಬಹಳ ವರ್ಷಗಳಿಂದ ಕಾಂಗ್ರೆಸ್‌-ಜೆಡಿಎಸ್‌ ಫೈಟ್ ಇತ್ತು, ಹಾಗಾಗಿ ಸಮಸ್ಯೆ: ಸಿದ್ದರಾಮಯ್ಯ

ನಾನು ಜಿಟಿ ದೇವೇಗೌಡರಿಗೆ ದೂರವಾಣಿ ಕರೆ ಮಾಡಿದ್ದೆ. ಸಣ್ಣಪುಟ್ಟ ಸಮಸ್ಯೆ ಇತ್ತು ಸರಿ ಹೋಗಿದೆ ಅಂದಿದ್ದಾರೆ. ಬಿಜೆಪಿಯವರು ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಾರೆ.‌ ಜಿ.ಟಿ. ದೇವೇಗೌಡ ಹಾಗೂ ನನ್ನ ನಡುವೆ ಬಹಳ ವ್ಯತ್ಯಾಸವಿತ್ತು. ಈಗ ನಾವೇ ಮಾತಾಡ್ತಿದ್ದೇವಿ. ನಾಯಕರ ಮೈತ್ರಿಯನ್ನು ಎರಡೂ ಪಕ್ಷಗಳ ಕಾರ್ಯಕರ್ತರು ಒಪ್ಪಿಕೊಳ್ಳಬೇಕು. ಮೈತ್ರಿ ಹೈಕಮಾಂಡ್ ಮಟ್ಟದಲ್ಲಾಗಿದ್ದು, ಎಲ್ಲರೂ ಒಪ್ಪಿ ಕೆಲಸ ಮಾಡಬೇಕು. ಯಾರಿಗಾದ್ರೂ ಒಪ್ಪಿಗೆ ಇಲ್ಲವಾದಲ್ಲಿ ಪಕ್ಷವನ್ನು ಬಿಡಬಹುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Vijaya Karnataka Web 6 Apr 2019, 4:40 pm
ಬೆಂಗಳೂರು: ಮೈಸೂರಲ್ಲಿ ಬಹಳಷ್ಟು ವರ್ಷಗಳಿಂದ ಜೆಡಿಎಸ್, ಕಾಂಗ್ರೆಸ್ ನಡುವೆಯೇ ಹೋರಾಟ ನಡೆಯುತ್ತಿದೆ. ಹಾಗಾಗಿ ಈಗ ನಾಯಕರು ಮೈತ್ರಿ ಮಾಡಿಕೊಂಡರೂ ಕೆಳ ಹಂತದಲ್ಲಿ ಕೆಲ‌ ಸಮಸ್ಯೆಗಳಿವೆ. ಹೀಗಾಗಿ ಕಾಂಗ್ರೆಸ್ ಜತೆ ಮೈತ್ರಿಗೆ ಜೆಡಿಎಸ್‌ನ ಕೆಲವರು ವಿರೋಧ ಮಾಡುತ್ತಾರೆ. ಹಾಗೆಯೇ ಕೆಲ ಕಾಂಗ್ರೆಸ್ಸಿನವರು ವಿರೋಧ ವ್ಯಕ್ತಡಿಸಿರ್ತಾರೆ. ಯಾರೋ ಕೆಲವರು ಹೀಗೆ ವಿರೋಧ ಮಾಡಿರ್ತಾರೆ. ಆದರೆ ಬಹುತೇಕ ಉಭಯ ಪಕ್ಷಗಳ ನಾಯಕರು‌ ಹೊಂದಾಣಿಕೆಯಿಂದ ಹೋಗಲು ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Vijaya Karnataka Web Siddaramaiah new


ನಾನು ಜಿಟಿ ದೇವೇಗೌಡರಿಗೆ ದೂರವಾಣಿ ಕರೆ ಮಾಡಿದ್ದೆ. ಸಣ್ಣಪುಟ್ಟ ಸಮಸ್ಯೆ ಇತ್ತು ಸರಿ ಹೋಗಿದೆ ಅಂದಿದ್ದಾರೆ. ಬಿಜೆಪಿಯವರು ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಾರೆ.‌ ಜಿ.ಟಿ. ದೇವೇಗೌಡ ಹಾಗೂ ನನ್ನ ನಡುವೆ ಬಹಳ ವ್ಯತ್ಯಾಸವಿತ್ತು. ಈಗ ನಾವೇ ಮಾತಾಡ್ತಿದ್ದೇವಿ. ನಾಯಕರ ಮೈತ್ರಿಯನ್ನು ಎರಡೂ ಪಕ್ಷಗಳ ಕಾರ್ಯಕರ್ತರು ಒಪ್ಪಿಕೊಳ್ಳಬೇಕು. ಮೈತ್ರಿ ಹೈಕಮಾಂಡ್ ಮಟ್ಟದಲ್ಲಾಗಿದ್ದು, ಎಲ್ಲರೂ ಒಪ್ಪಿ ಕೆಲಸ ಮಾಡಬೇಕು. ಯಾರಿಗಾದ್ರೂ ಮೈತ್ರಿ ಒಪ್ಪಿಗೆ ಇಲ್ಲವಾದಲ್ಲಿ ಪಕ್ಷವನ್ನು ಬಿಡಬಹುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮೈತ್ರಿ ಒಪ್ಪದವರು ಕೂಡಲೇ ಪಕ್ಷ ಬಿಡಿ: ಮಂಡ್ಯದ ಕಾಂಗ್ರಸಿಗರಿಗೆ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

ನಾನು 'ಚಕ್ರವ್ಯೂಹ' ನೋಡಿಲ್ಲ: ಎಚ್‌ಡಿಕೆಗೆ ಸಿದ್ದು ಉತ್ತರ

ಬಿಜೆಪಿಗೆ ಬೆಂಬಲಿಸುವವರಿಗೆ ಸಿದ್ದು ಎಚ್ಚರಿಕೆ:
'ನಾವು ಜೆಡಿಎಸ್ ಜೊತೆಗಿನ ಮೈತ್ರಿಯೊಂದಿಗೆ ಬಿಜೆಪಿ ಅಭ್ಯರ್ಥಿಯನ್ನು ಈ ಬಾರಿ ಮೈಸೂರಲ್ಲಿ ಸೋಲಿಸುತ್ತೇವೆ. ಮೈಸೂರಲ್ಲಿ ಗೆಲ್ಲುತ್ತೇವೆ. ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

'ಚೆಲುವರಾಯಸ್ವಾಮಿ ಏನು ಹೇಳಿದ್ದಾರೆ ಗೊತ್ತಿಲ್ಲ. ಕೆಲವು ಬಾರಿ ಟಿವಿಗಳಲ್ಲಿ ಬಂದಿದ್ದನ್ನು ನಂಬಲು ಆಗುವುದಿಲ್ಲ. ಈಗ ಮೈತ್ರಿ ಅಭ್ಯರ್ಥಿ ಬೆಂಬಲಿಸಿ ಅಂತ ಹೇಳಿದ್ದೇವೆ. ಆದರೂ ಬೆಂಬಲಿಸುವುದಿಲ್ಲ ಎನ್ನುವುದಾದರೆ ಆಯ್ತು, ಹಾಗಾದ್ರೆ ಹೊರ ನಡಿರಿ ಅಂತಾ ಹೇಳುತ್ತೇವೆ ಅಷ್ಟೇ' ಎಂದು ಸಿದ್ದರಾಮಯ್ಯ ನುಡಿದರು.

ಮೈಸೂರಲ್ಲಿ ಮೈತ್ರಿ ಬಲಿಷ್ಠವಾಗುತ್ತಿದೆ, ಮಂಡ್ಯದಲ್ಲಿ ದುರ್ಬಲವಾಗುತ್ತಿದೆ ಎಂಬ ಪ್ರಶ್ನೆಗೆ, 'ಅದು ನಿಮ್ಮ ಅಭಿಪ್ರಾಯ ಅಷ್ಟೇ. ನಾಳೆ ಕರೆದ ಮಂಡ್ಯ ಕಾಂಗ್ರೆಸ್ ನಾಯಕರ ಸಭೆಗೆ ಸಿಎಂ ಬರಲ್ಲ' ಎಂದು ಸಿದ್ದರಾಮಯ್ಯ ನುಡಿದರು.

ಕಾಂಗ್ರೆಸ್, ಬಿಜೆಪಿ, ರೈತ ಸಂಘ ಎಲ್ಲವೂ ಸೇರಿ ಮಂಡ್ಯದಲ್ಲಿ ಚಕ್ರವ್ಯೂಹ ರಚಿಸಿವೆ ಎಂದು ಕುಮಾರಸ್ವಾಮಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸುತ್ತ, 'ಚಕ್ರವ್ಯೂಹ ಹೇಗಿತ್ತು ಅಂತ ನಿಮಗೆ ಗೊತ್ತಾ? ನಮಗಂತೂ ಗೊತ್ತಿಲ್ಲ. ಯಾವ ವ್ಯೂಹ ಕೂಡ ಇಲ್ಲ. ಚಕ್ರವ್ಯೂಹವೂ ಇಲ್ಲ.‌ನಾವು ನೋಡಿಲ್ಲ.‌ನೀವೂ ನೋಡಿಲ್ಲ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌