ಆ್ಯಪ್ನಗರ

ಮೋದಿ ವಿರುದ್ಧ ಅವಹೇಳನದ ಹೇಳಿಕೆ: ಈಗ ಬಿ.ಕೆ ಹರಿಪ್ರಸಾದ್ ಸರದಿ

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ ಹರಿಪ್ರಸಾದ್, 'ಮೋದಿ ಈಗ ವಿಜ್ಞಾನಿ ಆಗಿದ್ದಾರೆ. ಬಾಲಾಕೋಟ್ ದಾಳಿ ಸಂದರ್ಭದಲ್ಲಿ ಮೋದಿ‌ ಮೋಡದ ವಿಜ್ಞಾನಿ ಆಗಿದ್ದರು. ಪ್ಲಾಸ್ಟಿಕ್ ಸರ್ಜರಿ ವಿಜ್ಞಾನಿ ಕೂಡ ಆಗಿದ್ದಾರೆ' ಎಂದು ಲೇವಡಿ ಮಾಡಿದರು. 'ಅವರ ಗ್ರಾಜ್ಯುವೇಟ್ ಫೇಕ್, ಅವರು ಕೊಟ್ಟ ಕಾರ್ಯಕ್ರಮಗಳು ಕೂಡ ಫೇಕ್. ಮೊದಲು ಪ್ರಧಾನ ಸೇವಕ ಅಂದ್ರು, ಆ ಬಳಿಕ ಚೌಕಿದಾರ ಅಂದ್ರು. ಆದರೆ ಮೇ 23ರ ಬಳಿಕ ಅವರಿಗೆ ಬೇರೆಯದೇ ಹೆಸರೇ ಬರಲಿದೆ. ಮೇ 23ರ ಬಳಿಕ 'ಮಹಾನ್ ಫೇಕ್ ಮಹಾರಾಜ್' ಅಂತ ಮೋದಿಗೆ ಹೊಸ ಹೆಸರು ಬರುತ್ತದೆ' ಎಂದು ಹರಿಪ್ರಸಾದ್ ಟೀಕಿಸಿದರು.

Vijaya Karnataka Web 14 May 2019, 2:40 pm
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವಹೇಳನಕಾರಿ ಹೇಳಿಕೆ ನೀಡಿದ್ದು, ಮೇ 23ರ ನಂತರ ಮೋದಿಗೆ 'ಮಹಾನ್ ಫೇಕ್ ಮಹಾರಾಜ' ಅಂತ ಹೆಸರು ಬರಲಿದೆ ಎಂದು ಹೇಳಿದ್ದಾರೆ.
Vijaya Karnataka Web BK Hariprasad


ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ ಹರಿಪ್ರಸಾದ್, 'ಮೋದಿ ಈಗ ವಿಜ್ಞಾನಿ ಆಗಿದ್ದಾರೆ. ಬಾಲಾಕೋಟ್ ದಾಳಿ ಸಂದರ್ಭದಲ್ಲಿ ಮೋದಿ‌ ಮೋಡದ ವಿಜ್ಞಾನಿ ಆಗಿದ್ದರು. ಪ್ಲಾಸ್ಟಿಕ್ ಸರ್ಜರಿ ವಿಜ್ಞಾನಿ ಕೂಡ ಆಗಿದ್ದಾರೆ' ಎಂದು ಲೇವಡಿ ಮಾಡಿದರು.

'ಅವರ ಗ್ರಾಜ್ಯುವೇಟ್ ಫೇಕ್, ಅವರು ಕೊಟ್ಟ ಕಾರ್ಯಕ್ರಮಗಳು ಕೂಡ ಫೇಕ್. ಮೊದಲು ಪ್ರಧಾನ ಸೇವಕ ಅಂದ್ರು, ಆ ಬಳಿಕ ಚೌಕಿದಾರ ಅಂದ್ರು. ಆದರೆ ಮೇ 23ರ ಬಳಿಕ ಅವರಿಗೆ ಬೇರೆಯದೇ ಹೆಸರೇ ಬರಲಿದೆ. ಮೇ 23ರ ಬಳಿಕ 'ಮಹಾನ್ ಫೇಕ್ ಮಹಾರಾಜ್' ಅಂತ ಮೋದಿಗೆ ಹೊಸ ಹೆಸರು ಬರುತ್ತದೆ' ಎಂದು ಹರಿಪ್ರಸಾದ್ ಟೀಕಿಸಿದರು.

ಕಾಂಗ್ರೆಸ್ ಮುಖಂಡರು ಇರುವ ಹೋಟೆಲ್‌ಗಳ ಮೇಲೆ ಆದಾಯ ತೆರಿಗೆ ಹಾಗೂ ಚುನಾವಣೆ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ದಾಳಿ ವಿಚಾರ ಪ್ರಸ್ತಾಪಿಸಿದ ಹರಿಪ್ರಸಾದ್, 'ಐಟಿ, ಸಿಬಿಐನಂತಹ ಸಂಸ್ಥೆಗಳ ಸಮ್ಮಿಶ್ರ ಸರ್ಕಾರವೇ ಎನ್‌ಡಿಎ ಆಗಿ ಹೋಗಿದೆ. ಐಟಿ ಮತ್ತು‌ ಇಡಿಯನ್ನು ರಾಜಕೀಯ ದಾಳಕ್ಕಾಗಿ ಕೇಂದ್ರ ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಜನರನ್ನು ಭಯ ಬೀಳಿಸುವುದಕ್ಕಾಗಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಹುಬ್ಬಳ್ಳಿ ಹೋಟೆಲ್‌ ದಾಳಿಯಲ್ಲಿ ಶಿವಳ್ಳಿ ಫೋಟೋ‌ ಸಿಕ್ಕಿರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತ, 'ಅದ್ಯಾವುದೂ ನಮ್ಮದಲ್ಲ. ಅವರೇ‌ ಅವುಗಳನ್ನು ತಂದಿಟ್ಟು ಹಾಗೆ ಮಾಡಿಸಿರಬಹುದು' ಎಂದು ದೂಷಿಸಿದರು.

ಸರ್ಕಾರದ‌ ಭವಿಷ್ಯ ರಾಹುಲ್ ಗಾಂಧಿ ಮತ್ತು ದೇವೇಗೌಡರ ನಿರ್ಣಯದ ‌ಮೇಲಿದೆ. ಅವರನ್ನು ಬಿಟ್ಟು ಉಳಿದವರೆಲ್ಲರ ಮಾತುಗಳು ಕೇವಲ‌ ರಾಜಕೀಯ ಪ್ರೇರಿತ ಹೇಳಿಕೆಗಳು ಮಾತ್ರ. ರಮೇಶ ಜಾರಕಿಹೊಳಿ ಇನ್ನೂ ಸಹ ಪಕ್ಷದಲ್ಲೇ ಇದ್ದಾರೆ. ಅವರು ನಮ್ಮ ಪಕ್ಷದಲ್ಲೇ ಇರ್ತಾರೆ ಬೇರೆ ಎಲ್ಲಿಯೂ‌ ಹೋಗಿಲ್ಲ. ರಮೇಶ ಜಾರಕಿಹೊಳಿ‌ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಹರಿಪ್ರಸಾದ್ ಸಮರ್ಥಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌