ಆ್ಯಪ್ನಗರ

ಕಾಂಗ್ರೆಸ್‌ ಪ್ರಣಾಳಿಕೆ ಭರವಸೆಗಳು ದೇಶವನ್ನು 50ರ ದಶಕಕ್ಕೆ ಕೊಂಡೊಯ್ಯುತ್ತದೆ: ರಾಜೀವ್‌ ಚಂದ್ರಶೇಖರ್‌

ಕಾಂಗ್ರೆಸ್‌ ಪಕ್ಷ ಕಳೆದ 65 ವರ್ಷಗಳಿಂದಲೂ 'ಭರವಸೆ' ನೀಡುತ್ತಲೇ ಬಂದಿದೆ. ಆದರೆ ಬಿಜೆಪಿ ಕಳೆದ ಚುನಾವಣೆ ವೇಳೆ ನೀಡಿದ ಶೇಕಡ 98ರಷ್ಟು ಭರವಸೆಗಳನ್ನು ಪೂರೈಸಿ ಜನಪರವಾಗಿ ಕಾರ್ಯ ನಿರ್ವಹಿಸಿದೆ ಎಂದು ಹೇಳಿದರು.

Vijaya Karnataka Web 2 Apr 2019, 8:38 pm
ಹೊಸದಿಲ್ಲಿ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ದೇಶದ ಅಭಿವೃದ್ಧಿಗೆ ಹಾಗೂ ಆರ್ಥಿಕ ಪ್ರಗತಿಗೆ ಮಾರಕವಾಗಿದೆ ಎಂದು ಬಿಜೆಪಿ ಸಂಸದ ರಾಜೀವ್‌ ಚಂದ್ರಶೇಖರ್‌ ವಿಶ್ಲೇಷಿಸಿದ್ದಾರೆ.
Vijaya Karnataka Web ರಾಜೀವ್‌ ಚಂದ್ರಶೇಖರ್‌
ರಾಜೀವ್‌ ಚಂದ್ರಶೇಖರ್‌


ಕಾಂಗ್ರೆಸ್‌ ಪ್ರಣಾಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಜೀವ್‌ ಚಂದ್ರಶೇಖರ್‌, ಇದು ಗೊತ್ತು ಗುರಿ ಇಲ್ಲದ ಭರವಸೆಗಳ ಕಂತೆಯಾಗಿದೆ ಎಂದರು.

ಪ್ರಣಾಳಿಕೆಯಲ್ಲಿರುವ ಕೆಲವು ಭರವಸೆಗಳು, ಆರ್ಥಿಕ ಪ್ರಗತಿಗೆ, ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದರು.

ಇನ್ನು ಸೇನಾ ಪಡೆಗಳಿಗೆ ನೀಡಿರುವ ವಿಶೇಷ ಅಧಿಕಾರ ಹಿಂತೆಗೆದುಕೊಳ್ಳುವ ಭರವಸೆಯಂತೂ ಅಪಾಯಕಾರಿ. ಇದು ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿಗಳ ಕೈಯಲ್ಲಿ ನಲುಗಿದ್ದ ಕಾಲಕ್ಕೆ ಕೊಂಡೊಯ್ಯುವ ಮುನ್ಸೂಚನೆಯಾಗಿದೆ ಎಂದು ಸಂಸದರು ತಿಳಿಸಿದರು.

ರಾಹುಲ್‌ ಗಾಂಧಿ ಎರಡು ವಿಷಯವನ್ನು ಚರ್ಚೆಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದಂತಿದೆ.

ಯುಪಿಎ ಆಡಳಿತ ಮತ್ತು ನರೇಂದ್ರ ಮೋದಿ ಆಡಳಿತ ಹಾಗೂ ಎರಡೂ ಸರಕಾರಗಳ ಭ್ರಷ್ಟಾಚಾರ ಪ್ರಮಾಣ.

ಯುಪಿಎ 10 ವರ್ಷಗಳ ಆಡಳಿತಾವಧಿಗಿಂತ ಮೋದಿ ಅವರ 5 ವರ್ಷದ ಆಡಳಿತ ಯಾವುದೇ ಕಪ್ಪು ಚುಕ್ಕೆ ಇಲ್ಲದೇ, ಆರ್ಥಿಕ ಪ್ರಗತಿಗೆ ಒತ್ತು ನೀಡಿದೆ. ಅಲ್ಲದೇ ದೇಶವನ್ನು ಅಭಿವೃದ್ಧಿಯತ್ತ ಕೊಂಡಯ್ಯುವ ಮೂಲಕ ಮೋದಿ ಸರಕಾರ ನವ ಭಾರತ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದೆ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದರು.

ಕಾಂಗ್ರೆಸ್‌ ಪಕ್ಷ ಕಳೆದ 65 ವರ್ಷಗಳಿಂದಲೂ 'ಭರವಸೆ' ನೀಡುತ್ತಲೇ ಬಂದಿದೆ. ಆದರೆ ಬಿಜೆಪಿ ಕಳೆದ ಚುನಾವಣೆ ವೇಳೆ ನೀಡಿದ ಶೇಕಡ 98ರಷ್ಟು ಭರವಸೆಗಳನ್ನು ಪೂರೈಸಿ ಜನಪರವಾಗಿ ಕಾರ್ಯ ನಿರ್ವಹಿಸಿದೆ ಎಂದು ಹೇಳಿದರು.

ದೇಶವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದ ಅಗತ್ಯವಿದೆ ಎಂದು ರಾಜೀವ್‌ ಚಂದ್ರಶೇಖರ್‌ ಪ್ರತಿಪಾದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌