ಆ್ಯಪ್ನಗರ

ಕಾಂಗ್ರೆಸ್‌ ನಾಯಕರನ್ನು ಪುಕ್ಕಟೆ ಖರ್ಚಿನಲ್ಲಿ ಪಾಕಿಸ್ತಾನಕ್ಕೆ ಕಳಿಸುತ್ತೇವೆ: ಸಿ ಟಿ ರವಿ

ಕಾಂಗ್ರೆಸ್‌ಗೆ ಪಾಕಿಸ್ತಾನ ಪ್ರೀತಿ ಹೆಚ್ಚಾಗಿದೆ. ಹೀಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ತನ್ನ ಹೆಸರನ್ನು ಪಾಕಿಸ್ತಾನ ರಾಷ್ಟ್ರೀಯ ಕಾಂಗ್ರೆಸ್‌ ಎಂದು ಹೆಸರು ಬದಲಾಯಿಸಿಕೊಳ್ಳಲಿ.

Vijaya Karnataka 26 Mar 2019, 8:01 am
ಬೆಂಗಳೂರು: ಪಾಕಿಸ್ತಾನ ಪ್ರೀತಿ ಹೆಚ್ಚಿಸಿಕೊಳ್ಳುತ್ತಿರುವ ಕಾಂಗ್ರೆಸ್‌ ನಾಯಕರನ್ನು ಪುಕ್ಕಟೆ ಖರ್ಚಿನಲ್ಲಿ ಪಾಕಿಸ್ತಾನಕ್ಕೆ ಕಳುಹಿಸಿಕೊಡುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಬೇಕಾದರೆ ಮಾಡುತ್ತಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Vijaya Karnataka Web C T Ravi


ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ' ಕಾಂಗ್ರೆಸ್‌ಗೆ ಪಾಕಿಸ್ತಾನ ಪ್ರೀತಿ ಹೆಚ್ಚಾಗಿದೆ. ಹೀಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ತನ್ನ ಹೆಸರನ್ನು ಪಾಕಿಸ್ತಾನ ರಾಷ್ಟ್ರೀಯ ಕಾಂಗ್ರೆಸ್‌ ಎಂದು ಹೆಸರು ಬದಲಾಯಿಸಿಕೊಳ್ಳಲಿ. ಕಾಂಗ್ರೆಸಿಗರು ಭವಿಷ್ಯ ಅರಸಿಕೊಂಡು ಪಾಕಿಸ್ತಾನಕ್ಕೆ ಹೋಗಲಿ. ಅವರಿಗೆ ಅಲ್ಲಿಯೇ ಹೆಚ್ಚು ಅಭಿಮಾನಿ ಹಾಗೂ ಹಿತೈಷಿಗಳಿದ್ದಾರೆ ಎಂದು ವ್ಯಂಗ್ಯವಾಡಿದರು.

ಎಚ್ಡಿಕೆ ಬೀದಿ ಬಸವನೇ ?

ಸೋಲಿನಿಂದ ಹತಾಶರಾಗಿರುವ ಸಿಎಂ ಕುಮಾರಸ್ವಾಮಿ ಸಿನಿಮಾ ನಟರ ವಿರುದ್ಧ ಹರಿಹಾಯುತ್ತಿದ್ದಾರೆ. ಸುಮಲತಾ ಬೆಂಬಲಕ್ಕೆ ನಿಂತಿರುವ ದರ್ಶನ, ಯಶ್‌ ಅವರನ್ನು ಕಳ್ಳೆತ್ತು ಎಂದು ಛೇಡಿಸುತ್ತಿರುವ ಕುಮಾರಸ್ವಾಮಿ ಬೀದಿ ಬಸವನೇ ?ಎಂದು ವ್ಯಂಗ್ಯವಾಡಿದರು. ಸುಮಲತಾ ಅವರಿಗೆ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದೆ. ಇತಿಹಾಸದಲ್ಲಿ ಅನುಕಂಪದ ಅಲೆಯ ವಿರುದ್ಧ ಧನಬಲ ಹಾಗೂ ಅಧಿಕಾರ ಎಂದು ನಿಂತಿಲ್ಲ ಎಂದು ಹೇಳಿದರು. ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ಅನ್ವರ್‌ ಮಾನಿಪ್ಪಾಡಿ, ಎ.ಎಚ್‌.ಆನಂದ ಉಪಸ್ಥಿತರಿದ್ದರು. ಪ್ರಕಾಶ್‌ ಸಂಬರಗಿ ಎಂಬುವರು ಇಂಗ್ಲಿಷ್‌, ಹಿಂದಿ, ಕನ್ನಡದಲ್ಲಿ ರಚಿಸಿರುವ ಮೋದಿ ಗೀತೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ರಾಹುಲ್‌ ಗಾಂಧಿ ಚೋರ

ಕಳ್ಳರಿಗೆ ಸರಿಯಾಗಿ ಇರುವವರೆಲ್ಲರೂ ಕಳ್ಳರಾಗಿಯೇ ಕಾಣುತ್ತಾರೆ ಎಂದು ರವಿ ಛೇಡಿಸಿದರು. 2004ರಲ್ಲಿ ರಾಹುಲ್‌ ಗಾಂಧಿಯವರ ಆಸ್ತಿ 54 ಲಕ್ಷ ರೂ. ಇದ್ದಿದ್ದು ಈಗ 600 ಪಟ್ಟು ಹೆಚ್ಚಿದೆ. ಇದು ಹೇಗೆ ಸಾಧ್ಯ ? ಈ ಕಾರಣಕ್ಕಾಗಿ ರಾಹುಲ್‌ ಗಾಂಧಿಯನ್ನು ಚೋರಗುರು ಎಂದು ಕರೆಯಬೇಕಾಗುತ್ತದೆ. ಇನ್ನು ಅವರ ಶಿಷ್ಯರ ಆದಾಯ 78 ಕೋಟಿ ರೂ. ಇದ್ದದ್ದು ಈಗ 845 ಕೋಟಿ ರೂ.ಗೆ ಹೆಚ್ಚಿದೆ. ಇವರೆಲ್ಲರೂ ಮಹಾಚೋರ ಶಿಷ್ಯರು. ಇವರೆಲ್ಲ ಸೇರಿ ದೇಶದ ಚೌಕಿದಾರನನ್ನು ಚೋರ ಎಂದು ಕರೆಯುತ್ತಿದ್ದಾರೆ. ಇಂದಿನಿಂದ ಬಿಜೆಪಿ ರಾಹುಲ್‌ ಗಾಂಧಿಯವರನ್ನು ಚೋರಗುರು ಎನ್ನಬೇಕಾಗುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌