ಆ್ಯಪ್ನಗರ

ಚುನಾವಣೆ ಖರ್ಚಿಗಾಗಿ 1344 ಕೋಟಿ ರೂ. ಮೌಲ್ಯದ ಕಾಮಗಾರಿ ಹಣ ಗುಳುಂ, ತನಿಖೆ ಆಗಲಿ: ಸಿಟಿ ರವಿ

1344 ಕೋಟಿ ರೂ. ಮೌಲ್ಯದ ಐದು ಕಾಮಗಾರಿಗಳ ಹಣ ಸಂದಾಯದ ಬಗ್ಗೆ ತನಿಖೆ ‌ನಡೆಯಬೇಕಿದೆ. ನೀರಾವರಿ, ಇಂಧನ, ಲೋಕೋಪಯೋಗಿ ಇಲಾಖೆಯಲ್ಲಿ ಕಳ್ಳ ಬಿಲ್, ಸುಳ್ಳು ಲೆಕ್ಕ ತೋರಿಸಿದ್ದಾರೆ ಅನ್ನೋ ಮಾಹಿತಿ ಇದೆ.

Vijaya Karnataka Web 4 Apr 2019, 9:13 pm
ತುಮಕೂರು: ಮುಖ್ಯಮಂತ್ರಿ ಕುಮಾರಾಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಮಂಡ್ಯದಲ್ಲಿ ನೀವು ಮಾಡ್ತಿರೋ ಕೆಲಸ‌ ಇದಕ್ಕೆ ಸಾಕ್ಷಿ. ಐಟಿ ದಾಳಿಯನ್ನೇ ಭಯೋತ್ಪಾದಕ ದಾಳಿಯಂತೆ ಬಿಂಬಿಸುತ್ತಿದ್ದಾರೆ. ಚುನಾವಣೆಗೆ ಅಕ್ರಮ ನಿಧಿಯನ್ನು ಸಂಗ್ರಹಿಸುವುದಕ್ಕೋಸ್ಕರ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜತೆಗೆ ಶಾಮೀಲು ಆಗಿದ್ದಾರೆ ಎಂದು ಬಿಜೆಪಿ ಶಾಸಕ ಸಿಟಿ ರವಿ ತಿಳಿಸಿದ್ದಾರೆ.
Vijaya Karnataka Web ಸಿಟಿ ರವಿ
ಸಿಟಿ ರವಿ


ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

1344 ಕೋಟಿ ರೂ. ಮೌಲ್ಯದ ಐದು ಕಾಮಗಾರಿಗಳ ಹಣ ಸಂದಾಯದ ಬಗ್ಗೆ ತನಿಖೆ ‌ನಡೆಯಬೇಕಿದೆ. ನೀರಾವರಿ, ಇಂಧನ, ಲೋಕೋಪಯೋಗಿ ಇಲಾಖೆಯಲ್ಲಿ ಕಳ್ಳ ಬಿಲ್, ಸುಳ್ಳು ಲೆಕ್ಕ ತೋರಿಸಿದ್ದಾರೆ ಅನ್ನೋ ಮಾಹಿತಿ ಇದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಸರಕಾರದ ಆಯಸ್ಸು ಮೇ 23 ರವರೆಗೆ ಅಷ್ಟೇ. ಮೇ 23 ರ ಬಳಿಕ ಸರಕಾರದ ಟೈಮ್ ಬಾಂಬ್ ಸ್ಪೋಟಗೊಳ್ಳುತ್ತದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಪ್ರಣಾಳಿಕೆ ವಿಚಾರವಾಗಿ ಮಾತನಾಡಿದ, ದೇಶದ ಸುಭದ್ರತೆಗೆ ಅಪಾಯಕಾರಿ ಅಂಶಗಳು ಇವೆ. ಇದು ದೇಶಕ್ಕೆ ಮಾರಕ. ಕಾಂಗ್ರೆಸ್ ದೇಶಪ್ರೇಮಿಗಳ ಪರ ಇಲ್ಲ. ದೇಶದ್ರೋಹಿಗಳ ಪರವಿದೆ‌. ದೇಶದಲ್ಲಿ ಅತಿಕಡಿಮೆ ತಲಾ ಆದಾಯವಿರುವ ಕ್ಷೇತ್ರ ಅಮೇಥಿ. ಅಮೇಥಿ ರಾಹುಲ್ ಗಾಂಧಿ ಸ್ಪರ್ಧೆ ಸುವ ಕ್ಷೇತ್ರ. ಅಮೇಥಿಯಲ್ಲಿರುವ ಬಡತನ ಇವರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ರವಿ ತಿಳಿಸಿದರು.

ಕಾಂಗ್ರೆಸ್ ಮುಳುಗುವ ಹಡಗು. ಹಡಗು ರಕ್ಷಣೆಗಾಗಿ ದೇಶಘಾತುಕದವರು ಜತೆಗೂಡಿದ್ದಾರೆ ಎಂದು ಸಿಟಿ ರವಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌