ಆ್ಯಪ್ನಗರ

ಕಾಂಗ್ರೆಸ್‌ ಹಾಲಿ ಸಂಸದರಿಗೆ ಟಿಕೆಟ್‌ ಸಂಭವ: ರಾಹುಲ್‌ ಗಾಂಧಿ ಸ್ಪರ್ಧೆಯ ಊಹಾಪೋಹಕ್ಕೆ ತೆರೆ

ಕರ್ನಾಟಕದಿಂದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧಿಸಲಿದ್ದಾರೆ, ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ರಾಹುಲ್‌ ಸ್ಪರ್ಧೆಯ ಊಹಾಪೋಹಕ್ಕೆ ತೆರೆ ಬಿದ್ದಂತಾಗಿದೆ.

Vijaya Karnataka 23 Mar 2019, 6:30 am
ಬೆಂಗಳೂರು: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ರಾಜ್ಯ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಅದರಂತೆ ಮಿತ್ರಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ತುಮಕೂರು ಹೊರತುಪಡಿಸಿ ಇತರ ಎಲ್ಲ ಹಾಲಿ ಸಂಸದರ ಮರು ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Vijaya Karnataka Web congress flag


'ಕರ್ನಾಟಕದಿಂದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧಿಸಲಿದ್ದಾರೆ, ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು' ಎಂಬ ಮಾತು ಕೇಳಿಬಂದಿತ್ತು. ಆದರೆ, ಬೆಂಗಳೂರು ಗ್ರಾಮಾಂತರದಿಂದ ಸಂಸದ ಡಿ.ಕೆ.ಸುರೇಶ್‌ ಪುನಃ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಕಾಂಗ್ರೆಸ್‌ ತನ್ನ ಬಳಿ ಉಳಿಸಿಕೊಂಡಿರುವ ಎಲ್ಲ 20 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದರಿಂದ ರಾಹುಲ್‌ ಸ್ಪರ್ಧೆಯ ಊಹಾಪೋಹಕ್ಕೆ ತೆರೆ ಬಿದ್ದಂತಾಗಿದೆ.

ಬೀದರ್‌ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ದಾವಣಗೆರೆಯಿಂದ ಶಾಮನೂರು ಶಿವಶಂಕರಪ್ಪ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್‌ ನೀಡಿದಂತಾಗಿದೆ. ಇನ್ನು ಧಾರವಾಡ ಹಾಗೂ ಬೆಳಗಾವಿ ಕ್ಷೇತ್ರಗಳಲ್ಲಿ ಅಚ್ಚರಿಯ ಆಯ್ಕೆಯಾಗಿದೆ. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಪತ್ನಿ ವೀಣಾ ಕಾಶಪ್ಪನವರ್‌ ಬಾಗಲಕೋಟದಿಂದ ಸ್ಪರ್ಧಿಸುತ್ತಿದ್ದು ಕಾಂಗ್ರೆಸ್‌ ಟಿಕೆಟ್‌ ಪಡೆದ ಏಕೈಕ ಮಹಿಳೆ ಇವರಾಗಿದ್ದಾರೆ.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ದಿಲ್ಲಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಪಟ್ಟಿ ಸಿದ್ಧಪಡಿಸಲಾಗಿದ್ದು, ಅಧಿಕೃತವಾಗಿ ಪ್ರಕಟವಾಗುವುದು ಬಾಕಿಯಿದೆ. ರಾಜ್ಯ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಜಿ.ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌ ಸಭೆಯಲ್ಲಿದ್ದರು.

ಹಾಲಿ ಸಂಸದರು

ಚಿಕ್ಕೋಡಿ - ಪ್ರಕಾಶ್‌ ಹುಕ್ಕೇರಿ

ಕಲಬುರ್ಗಿ - ಮಲ್ಲಿಕಾರ್ಜುನ ಖರ್ಗೆ

ರಾಯಚೂರು - ಬಿ.ವಿ.ನಾಯಕ್‌

ಬಳ್ಳಾರಿ - ವಿ.ಎಸ್‌.ಉಗ್ರಪ್ಪ

ಚಿತ್ರದುರ್ಗ - ಬಿ.ಎನ್‌.ಚಂದ್ರಪ್ಪ

ಚಾಮರಾಜನಗರ - ಆರ್‌.ಧ್ರುವನಾರಾಯಣ

ಬೆಂಗಳೂರು ಗ್ರಾಮಾಂತರ - ಡಿ.ಕೆ.ಸುರೇಶ್‌

ಚಿಕ್ಕಬಳ್ಳಾಪುರ - ಎಂ.ವೀರಪ್ಪ ಮೊಯ್ಲಿ

ಕೋಲಾರ - ಕೆ.ಎಚ್‌.ಮುನಿಯಪ್ಪ

ಇತರ ಕ್ಷೇತ್ರಗಳಲ್ಲಿ ಸಂಭಾವ್ಯರು

ಮೈಸೂರು - ಸಿ.ಎಚ್‌.ವಿಜಯಶಂಕರ್‌

ಬಾಗಲಕೋಟ - ವೀಣಾ ಕಾಶಪ್ಪನವರ್‌

ಬೀದರ್‌ - ಈಶ್ವರ ಖಂಡ್ರೆ

ಬೆಂಗಳೂರು ದಕ್ಷಿಣ - ಕೆ.ಗೋವಿಂದರಾಜ್‌

ದಾವಣಗೆರೆ - ಶಾಮನೂರು ಶಿವಶಂಕರಪ್ಪ

ಹಾವೇರಿ - ಡಿ.ಆರ್‌.ಪಾಟೀಲ್‌

ಕೊಪ್ಪಳ - ವಿರೂಪಾಕ್ಷಪ್ಪ/ ರಾಜಶೇಖರ ಹಿಟ್ನಾಳ್‌

ಬೆಳಗಾವಿ - ವಿ ಎಸ್‌ ಸಾಧುನವರ

ಧಾರವಾಡ - ಸದಾನಂದ ಡಂಗನವರ್‌

ದಕ್ಷಿಣ ಕನ್ನಡ - ಮಿಥುನ್‌ ರೈ

ಬೆಂಗಳೂರು ಸೆಂಟ್ರಲ್‌ - ರಿಜ್ವನ್‌ ಅರ್ಷದ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌