ಆ್ಯಪ್ನಗರ

ಬಳ್ಳಾರಿ ಲೋಕಸಭೆ ಕ್ಷೇತ್ರ: ಬಿಜೆಪಿಗೆ ಅಭ್ಯರ್ಥಿಯೇ ಸಿಗಲಿಲ್ವ ಎಂದು ಡಿಕೆಶಿ ವ್ಯಂಗ್ಯ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿ ಯಡಿಯೂರಪ್ಪ, ಶ್ರೀರಾಮುಲುಗೆ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿಯನ್ನು ಸಿದ್ಧಪಡಿಸಲು ಆಗಿಲ್ಲ.

Vijaya Karnataka Web 25 Mar 2019, 10:27 am
ಸಂಡೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿ ಯಡಿಯೂರಪ್ಪ, ಶ್ರೀರಾಮುಲುಗೆ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿಯನ್ನು ಸಿದ್ಧಪಡಿಸಲು ಆಗಿಲ್ಲ. ಕೊನೆ ಗಳಿಗೆಯಲ್ಲಿ ಕಾಂಗ್ರೆಸ್‌ನ ದೇವೇಂದ್ರಪ್ಪಗೆ ಬಿಜೆಪಿ ಟಿಕೆಟ್‌ಕೊಟ್ಟು ಕಣಕ್ಕಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು.
Vijaya Karnataka Web dks


ಪಟ್ಟಣದ ಕೂಡ್ಲಿಗಿ ರಸ್ತೆ ಮೈದಾನದಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಭಾನುವಾರ ಮಾತನಾಡಿದರು. ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲು ಉಪ ಚುನಾವಣೆ ವೇಳೆ ಜೆ.ಶಾಂತಾ ದೆಹಲಿಗೆ, ಡಿ.ಕೆ.ಶಿವಕುಮಾರ್‌ ಜೈಲಿಗೆ ಎಂದಿದ್ದರು. ಆದರೆ ಶಾಂತಾ ಬದಲಿಗೆ ಉಗ್ರಪ್ಪ ದೆಹಲಿಗೆ ಹೋದರೆ, ನಾನು ಇಲ್ಲೇ ಇದ್ದೆ ಎಂದ ಡಿ.ಕೆ.ಶಿವಕುಮಾರ್‌, ದೇವೇಂದ್ರಪ್ಪ ಕಾಂಗ್ರೆಸ್‌ ಟಿಕೆಟ್‌ ಕೇಳಿದ್ದರು. ಜನರ ಸಮಸ್ಯೆ ಕುರಿತು ಲೋಕಸಭೆಯಲ್ಲಿ ನಿಮ್ಮಿಂದ ಧ್ವನಿ ಎತ್ತಲು ಸಾಧ್ಯವಿಲ್ಲ ಸುಮ್ಮನಿದ್ದು ಬಿಡಿ ಎಂದಿದ್ದರೆ. ಆದರೆ ಬಿಜೆಪಿಯಲ್ಲಿ ಅವರಿಗೆ ಟಿಕೆಟ್‌ ಕೊಡಿಸುವ ಮೂಲಕ ಶ್ರೀರಾಮುಲು ಗಾಳಕ್ಕೆ ಬಿದ್ದ ಮೀನಾಗಿದ್ದಾರೆ. ಮೀನು ಚೆನ್ನಾಗಿದೆ ತಿನ್ನಲಿ ಬಿಡಿ. ದೇವೇಂದ್ರಪ್ಪ ಲೋಡ್‌ಗಟ್ಟಲೆ ಹಣತಂದು ಸುರಿದರೂ ಕಾರ್ಯಕರ್ತರು ಹೆದರಬೇಕಿಲ್ಲ ಎಂದರು.

ಅವಕಾಶವಿಲ್ಲ: ಬಳ್ಳಾರಿ ಲೋಕಸಭೆ ಕ್ಷೇತ್ರ ಮುಂದಿನ ದಿನಗಳಲ್ಲಿ ಸಾಮಾನ್ಯ ಕ್ಷೇತ್ರವಾದರೆ ಇಲ್ಲಿಂದಲೇ ಸ್ಪರ್ಧಿಸುವೆ. ಇಲ್ಲಿನ ಕಲ್ಲು, ಕಬ್ಬಿಣ ಚಿನ್ನದಂತಿದೆ. ಜಿಲ್ಲೆಯ ಅಬಕಾರಿ ಅಧಿಕಾರಿಯೊಬ್ಬರು ವೈನ್‌ ಶಾಪ್‌ಗಳಿಂದ ಹಣ ವಸೂಲಿ ಮಾಡುತ್ತಾರೆ ಎನ್ನುವ ದೂರಿದೆ. ನನ್ನ ಅಧಿಕಾರಾವಧಿಯಲ್ಲಿ ಜಿಲ್ಲೆಯಲ್ಲಿ ಪರ್ಸೆಂಟೇಜ್‌, ರೋಲ್‌ ಕಾಲ್‌, ಹಫ್ತಾ ವಸೂಲಿ, ಕಳ್ಳ ಬಿಲ್‌ ಪಾವತಿ ಸಾಧ್ಯವಿಲ್ಲ ಎಂದು ಗುಡುಗಿದರು.

ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಮಾತನಾಡಿ, ಈ ಚುನಾವಣೆ ಕಾಂಗ್ರೆಸ್‌ನ ಜಾತ್ಯತೀತ ಸಿದ್ಧಾಂತ ಮತ್ತು ಬಿಜೆಪಿಯ ಮತೀಯವಾದ ಸರ್ವಾಧಿಕಾರದ ಮಧ್ಯದ ಹೋರಾಟವಾಗಿದೆ. ರಕ್ಷ ಣಾ ದಾಖಲೆಗಳನ್ನು ರಕ್ಷಿಸಲಾಗದ ಕೇಂದ್ರ ಸರಕಾರ ದೇಶವನ್ನು ಹೇಗೆ ರಕ್ಷ ಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ವೈದ್ಯಕೀಯ ಶಿಕ್ಷ ಣ ಸಚಿವ ಈ.ತುಕಾರಾಮ್‌, ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿದರು.

ರಾಜ್ಯ ಸಭೆ ಸದಸ್ಯ ನಾಸೀರ್‌ ಹುಸೇನ್‌, ಕೆಪಿಸಿಸಿ ಪ್ರ.ಕಾರ್ಯದರ್ಶಿ ವೆಂಕಟರಾವ್‌ ಘೋರ್ಪಡೆ, ಮಾಜಿ ಶಾಸಕ ಅನಿಲ್‌ ಲಾಡ್‌, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಕೆ.ಶಿವಪ್ಪ, ಮಾಜಿ ಎಂಎಲ್‌ಸಿ ಕೆ.ಎಸ್‌.ಎಲ್‌.ಸ್ವಾಮಿ, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ರತನ್‌ ಸಿಂಗ್‌, ಎನ್‌.ಟಿ.ಬೊಮ್ಮಣ್ಣ, ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ರಫೀಕ್‌, ಗ್ರಾಮೀಣ ಅಧ್ಯಕ್ಷ ಶಿವಯೋಗಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಮುಖಂಡರಾದ ಗುಜ್ಜಲ ರಘು, ಗುಜ್ಜಲ ನಾಗರಾಜ, ದೀಪಕ್‌ ಸಿಂಗ್‌, ರತ್ನಮ್ಮ, ಕವಿತಾ ಈಶ್ವರ ಸಿಂಗ್‌ ಸೇರಿದಂತೆ ಇತರರಿದ್ದರು.

ಮಾಜಿ ಶಾಸಕ ಶಿರಾಜ್‌ ಶೇಖ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾದ ಚಿತ್ರಿಕ್ಕಿ ಸತೀಶ, ಜಿ.ಏಕಾಂಬ್ರಪ್ಪ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌