ಆ್ಯಪ್ನಗರ

ಅಂಬಿ ಅಣ್ಣ ಸತ್ತ ಮೇಲೂ ಡಬಲ್‌ ಪ್ರೀತಿ ಸಿಕ್ಕಿದೆ, ಇದಕ್ಕೆ ನಾವೆಲ್ಲರೂ ಋಣಿ: ದರ್ಶನ್‌

ಅಮ್ಮ ಹುಟ್ಟಿ ಕೇವಲ 5 ದಿನ ಆಗಿದೆ. ಮೇ23 ರಂದು ಅವ್ರು ಹುಟ್ಟಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿ‌ ಜಿಲ್ಲೆಯ ಅಭಿವೃದ್ಧಿಗೆ ಪಣತೊಡಲಿದ್ದಾರೆ ಎಂದರು

Vijaya Karnataka Web 29 May 2019, 8:08 pm
ಮಂಡ್ಯ: ಇಂದು ನಮ್ಮ ನಮ್ಮ ಅಂಬಿ ಅಣ್ಣನ ಜನ್ಮದಿನ. ಆದರೂ ನಾನು ಅಂಬರೀಶ್ ಅವ್ರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲ್ಲ. ಮಂಡ್ಯ ಜನರಿಗೆ ಶುಭಾಶಯ ಹೇಳ್ತೀನಿ
Vijaya Karnataka Web ಮಂಡ್ಯ ಸಮಾವೇಶ
ಮಂಡ್ಯ ಸಮಾವೇಶ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಚಿತ್ರನಟಿ ಸುಮಲತಾ ಅಂಬರೀಷ್‌ ಜನರಿಗೆ ಧನ್ಯವಾದ ಹೇಳಲು 'ರೆಬಲ್‌ಸ್ಟಾರ್‌' ಅಂಬರೀಷ್‌ ಅವರ ಹುಟ್ಟುಹಬ್ಬದ ದಿನವಾದ ಬುಧವಾರ (ಮೇ 29) ಮಂಡ್ಯದಲ್ಲಿ ಕೃತಜ್ಞತಾ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಡಿ ಬಾಸ್‌ ದರ್ಶನ್‌ ಮನಬಿಚ್ಚಿ ಮಾತನಾಡಿದರು.

ನಾನು ಸಾಯೋವರೆಗೂ ಈ ಜನರ ಋಣಿಯಾಗಿರುತ್ತೇನೆ. ಪಕ್ಷಗಳನ್ನ ಎದುರುಹಾಕಿಕೊಂಡು, ಜನರನ್ನ ಎದುರಹಾಕಿಕೊಂಡು ನಮ್ಮ ಸುಮಮ್ಮನಿಗಾಗಿ ದುಡಿದವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇಲ್ಲಿಂದಲೇ ಎಲ್ಲ ಪಾದಗಳಿಗೂ ನಮಸ್ಕರಿಸುತ್ತೇನೆ ಎಂದು ದರ್ಶನ್‌ ವೇದಿಕೆ ಮುಟ್ಟಿ ನಮನಿಸಿದರು.

ವೇದಿಕೆ ಮೇಲಿನ ಅಂಬಿ ಫೋಟೋ ನೋಡ್ತಿದ್ರೆ ನನಗೆ ಅನ್ನಿಸುತ್ತಿತ್ತು. ಏನ್ರಯ್ಯಾ ನಾನು ಬದುಕಿದ್ದಾಗ ಅಷ್ಟು ಪ್ರೀತಿ ಕೊಟ್ರಿ ನಾನು ಸತ್ತಮೇಲು ಅದರ ಡಬ್ಬಲ್ ಪ್ರೀತಿ ಕೊಡ್ತಿದ್ದಿರಲ್ಲ ಅಂತ ಅಂಬರೀಶ್ ಅಣ್ಣ ಹೇಳ್ತಿದ್ದರೆ ಅನ್ನಿಸುತ್ತಿತ್ತು. ಆ ರೀತಿ ಇದೆ ಫೋಟೋ ಎಂದು ತಿಳಿಸಿದರು.

ಅಮ್ಮ ಹುಟ್ಟಿ ಕೇವಲ 5 ದಿನ ಆಗಿದೆ. ಮೇ23 ರಂದು ಅವ್ರು ಹುಟ್ಟಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿ‌ ಜಿಲ್ಲೆಯ ಅಭಿವೃದ್ಧಿಗೆ ಪಣತೊಡಲಿದ್ದಾರೆ ಎಂದು ಹೇಳಿದರು

ಮೇ 31ಕ್ಕೆ ನನ್ನ ತಮ್ಮ ಅಭಿ ಸಿನಿಮಾ ಚಿತ್ರ ಬಿಡುಗಡೆ ಆಗ್ತಿದೆ. ಎಲ್ಲರೂ ಅವನನ್ನ ಹರಸಿ ಹಾರೈಸಿ. ಅಂಬರೀಶ್ ಅಣ್ಣನಿಗೆ ಕೊಟ್ಟ ಪ್ರೀತಿಗಿಂತ ಹೆಚ್ಚಿಗೆ ಪ್ರೀತಿ ಇವನಿಗೆ ಕೊಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌