ತುಮಕೂರು ಬಂಡಾಯ ಶಮನಕ್ಕೆ ಡಿಸಿಎಂ ಸಭೆ
ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಳ್ಳಲು ಕೇವಲ ಬ್ಲಾಕ್ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಅವಕಾಶ ನೀಡಲಾಗಿದೆ.
Vijaya Karnataka Web 24 Mar 2019, 12:28 pm
ತುಮಕೂರು: ಜಿಲ್ಲೆಯಲ್ಲಿ ಉಂಟಾಗಿರುವ ಬಂಡಾಯ ಶಮನಕ್ಕೆ ಡಿಸಿಎಂ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ಆರಂಭವಾಗಿದೆ.
ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಳ್ಳಲು ಕೇವಲ ಬ್ಲಾಕ್ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದ ಮುಖಂಡರು ಹಾಗೂ ಮಾಧ್ಯಮದವರು ಸಭೆಯಿಂದ ಹೊರ ಹೋಗುವಂತೆ ಪರಮೇಶ್ವರ್ ಮನವಿ ಮಾಡಿದ್ದಾರೆ.
ಎಲ್ಲಾ ಮುಖಂಡರ ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಪರಮೇಶ್ವರ್ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಮಾಜಿ ಶಾಸಕರುಗಳಾದ ಟಿ.ಬಿ ಜಯಚಂದ್ರ, ಷಡಕ್ಷರಿ, ರಫೀಕ್ ಅಹ್ಮದ್, ಷಫಿ ಅಹ್ಮದ್, ವಕ್ತಾರ ಮುರುಳಿಧರ ಹಾಲಪ್ಪ ಮತ್ತಿತರರು ಪಾಲ್ಗೊಂಡಿದ್ದಾರೆ.
ಟಿಕೆಟ್ ಆಕಾಂಕ್ಷಿ ಎಸ್. ಪಿ ಮುದ್ದಹನುಮೇಗೌಡ ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಯುತ್ತಿದೆ. ಶನಿವಾರ ಮುದ್ದಹನುಮೇಗೌಡ ಅವರ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡಿದ್ದ ರಾಯಸಂದ್ರ ರವಿಕುಮಾರ್, ಟಿ.ಡಿ ಮಲ್ಲೇಶ್, ಆಟೊರಾಜು ಮತ್ತಿತರರು ಈ ಸಭೆಗೆ ಹಾಜರಾಗಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಳ್ಳಲು ಕೇವಲ ಬ್ಲಾಕ್ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದ ಮುಖಂಡರು ಹಾಗೂ ಮಾಧ್ಯಮದವರು ಸಭೆಯಿಂದ ಹೊರ ಹೋಗುವಂತೆ ಪರಮೇಶ್ವರ್ ಮನವಿ ಮಾಡಿದ್ದಾರೆ.
ಎಲ್ಲಾ ಮುಖಂಡರ ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಪರಮೇಶ್ವರ್ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಮಾಜಿ ಶಾಸಕರುಗಳಾದ ಟಿ.ಬಿ ಜಯಚಂದ್ರ, ಷಡಕ್ಷರಿ, ರಫೀಕ್ ಅಹ್ಮದ್, ಷಫಿ ಅಹ್ಮದ್, ವಕ್ತಾರ ಮುರುಳಿಧರ ಹಾಲಪ್ಪ ಮತ್ತಿತರರು ಪಾಲ್ಗೊಂಡಿದ್ದಾರೆ.
ಟಿಕೆಟ್ ಆಕಾಂಕ್ಷಿ ಎಸ್. ಪಿ ಮುದ್ದಹನುಮೇಗೌಡ ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಯುತ್ತಿದೆ. ಶನಿವಾರ ಮುದ್ದಹನುಮೇಗೌಡ ಅವರ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡಿದ್ದ ರಾಯಸಂದ್ರ ರವಿಕುಮಾರ್, ಟಿ.ಡಿ ಮಲ್ಲೇಶ್, ಆಟೊರಾಜು ಮತ್ತಿತರರು ಈ ಸಭೆಗೆ ಹಾಜರಾಗಿದ್ದಾರೆ.