ಆ್ಯಪ್ನಗರ

ಮೋದಿಗಿಂತ ದೇವೇಗೌಡರೇ ಉತ್ತಮ ಪ್ರಧಾನಿ: ಕುಮಾರಸ್ವಾಮಿ

ಎಎನ್ಐ‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ 5 ವರ್ಷದ ಆಡಳಿತಕ್ಕೆ ಹೋಲಿಸಿದರೆ ನನ್ನ ತಂದೆ ಎಚ್. ಡಿ ದೇವೇಗೌಡರ 10 ತಿಂಗಳ ಆಡಳಿತವೇ ಉತ್ತಮವಾಗಿತ್ತು. ದೇಶದಲ್ಲಿ ಒಂದೇ ಒಂದು ಉಗ್ರ ದಾಳಿ ನಡೆದಿರಲಿಲ್ಲ, ದೇಶದಲ್ಲಿ ಶಾಂತಿ ನೆಲೆಸಿತ್ತು ಮತ್ತು ಆಂತರಿಕ ಭದ್ರತೆ ಆಗ ಸುಸ್ಥಿರವಾಗಿತ್ತು, ಎಂದಿದ್ದಾರೆ.

Times Now 20 Apr 2019, 10:05 am
ಬೆಂಗಳೂರು: ದೇಶದ ಆಂತರಿಕ ಭದ್ರತೆಯನ್ನು ಪರಿಗಣಿಸಿದರೆ ತಮ್ಮ ತಂದೆ ಎಚ್.ಡಿ ದೇವೇಗೌಡರ ಕಾಲದ ಆಡಳಿತವೇ ಉತ್ತಮವಾಗಿತ್ತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.
Vijaya Karnataka Web 1555729542-kumaraswamy1


ಎಎನ್ಐ‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ 5 ವರ್ಷದ ಆಡಳಿತಕ್ಕೆ ಹೋಲಿಸಿದರೆ ನನ್ನ ತಂದೆ ಎಚ್. ಡಿ ದೇವೇಗೌಡರ 10 ತಿಂಗಳ ಆಡಳಿತವೇ ಉತ್ತಮವಾಗಿತ್ತು. ದೇಶದಲ್ಲಿ ಒಂದೇ ಒಂದು ಉಗ್ರ ದಾಳಿ ನಡೆದಿರಲಿಲ್ಲ, ಶಾಂತಿ ನೆಲೆಸಿತ್ತು ಮತ್ತು ಆಂತರಿಕ ಭದ್ರತೆ ಸುಸ್ಥಿರವಾಗಿತ್ತು, ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಉದಾಹರಣೆಯನ್ನು ನೀಡಿದ ಅವರು, ದೇವೇಗೌಡರ ಆಡಳಿತದ ಸಂದರ್ಭದಲ್ಲಿ ಕಣಿವೆ ನಾಡಿನಲ್ಲಿ ಶಾಂತಿ ನೆಲೆಸಿತ್ತು. ರಾಜ್ಯದಲ್ಲಿ ಒಂದೇ ಒಂದು ಬಾಂಬ್ ಸ್ಫೋಟವಾಗಿರಲಿಲ್ಲ. ನೆರೆ ರಾಷ್ಟ್ರದ ಜತೆಗೆ ಯಾವುದೇ ಸಂಘರ್ಷಗಳಿರಲಿಲ್ಲ. ಗಡಿಯಲ್ಲಿ ಶಾಂತಿ ಇತ್ತು ಎಂದರು.

ಜಾತ್ಯಾತೀತ ಜನತಾ ದಳದ ವರಿಷ್ಠರಾಗಿರುವ ದೇವೇಗೌಡ ಅವರು ಜೂನ್ 1, 1996ರಿಂದ, ಏಪ್ರಿಲ್ 21, 1997ರವರೆಗೆ , ದೇಶದ ಪ್ರಧಾನಿಯಾಗಿದ್ದರು.

ಕಣ್ಣೀರು ಸುರಿಸಿದ್ದೇಕೆ?

ಇತ್ತೀಚಿಗೆ ಬೆಂಗಳೂರನಲ್ಲಿ ಕಣ್ಣೀರು ಸುರಿಸಿದ ಪ್ರಸಂಗದ ಬಗ್ಗೆ ಕೇಳಲಾಗಿ, ನಾನು ಬಹಳ ಭಾವನಾತ್ಮಕ ಮತ್ತು ಸೂಕ್ಷ್ಮ ವ್ಯಕ್ತಿ ಎಂದವರು ಹೇಳಿದ್ದಾರೆ.

ರಾಹುಲ್ ಪ್ರಧಾನಿಯಾದರೆ ದೇವೇಗೌಡರ ಮಾರ್ಗದರ್ಶನ

ದೇವೇಗೌಡರು ಅನುಭವಿ ಮತ್ತು ಈ ವಿಷಯದಲ್ಲಿ ಎಲ್ಲರಿಗಿಂತ ಉತ್ತಮರಾಗಿದ್ದು, ರಾಹುಲ್ ಗಾಂಧಿ ಪ್ರಧಾನಿಯಾದರೆ ಆಡಳಿತ ನಡೆಸಲು ಸಲಹೆ ನೀಡಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ರಾಹುಲ್ ಉತ್ತಮ ಆಡಳಿತ ನಡೆಸಲಿದ್ದಾರೆ.

ಜನರ ಒತ್ತಾಯಕ್ಕೆ ಕುಟುಂಬ ಸದಸ್ಯರು ಕಣಕ್ಕೆ


ಜನರ ಮತ್ತು ಪಕ್ಷದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕುಟುಂಬ ಸದಸ್ಯರನ್ನು ಕಣಕ್ಕಿಳಿಸಿದ್ದೇನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ