ಆ್ಯಪ್ನಗರ

ಎಲ್ಲರೂ ಪಕ್ಷ ಬಿಟ್ಟು ಹೋದಾಗ ಕಣ್ಣೀರು ಹಾಕಿದ್ದೇನೆ: ದೇವೇಗೌಡ

ಜೆಡಿಎಸ್ ಪಕ್ಷವನ್ನ ಯಾರೂ ಮುಗಿಸಲು ಆಗಲ್ಲ. ದೇವರನ್ನು ನಂಬಿ ನಾನು ಪಕ್ಷ ಉಳಿಸಿಕೊಳ್ಳುತ್ತಿದ್ದೀನಿ. ಕುಮಾರಸ್ವಾಮಿ ಕದ್ದು ಸಿಎಂ ಆದ್ರು ಎಂದು ಎಸ್.ಎಂ.ಕೃಷ್ಣ ಹೇಳುತ್ತಾರೆ. ಆದರೆ, ನನ್ನ ಅನುಮತಿ ಇಲ್ಲದೆ ಕುಮಾರಸ್ವಾಮಿ ಬಿಜೆಪಿ ಜತೆ ಹೋದರು. ನನ್ನ ಮಗ ಕದ್ದು ಹೋಗುವವನಲ್ಲ ಎಂದರು.

Vijaya Karnataka Web 4 Apr 2019, 9:36 pm
ಮಂಡ್ಯ/ಕೆ.ಆರ್.ಪೇಟೆ: ಜನತಾದಳ(ಜಾತ್ಯತೀತ)ದಿಂದ ಬೆಳೆದವರು ಪಕ್ಷ ಬಿಟ್ಟು ಹೋದಾಗ ಜೆಡಿಎಸ್ ಕಚೇರಿಯಲ್ಲಿ ನಾನು ಕಣ್ಣೀರು ಹಾಕಿದ್ದೇನೆ. ಎಲ್ಲವೂ ಮುಗಿದೇ ಹೋಯಿತು ಎನ್ನುವ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಏಕಾಂಗಿಯಾಗಿ ಹೋರಾಡಿ ಪಕ್ಷ ಕಟ್ಟಿಬೆಳೆಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
Vijaya Karnataka Web ದೇವೇಗೌಡ
ದೇವೇಗೌಡ


ಕೆ.ಆರ್.ಪೇಟೆಯಲ್ಲಿ ಗುರುವಾರ ನಡೆದ ಜೆಡಿಎಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷವನ್ನ ಯಾರೂ ಮುಗಿಸಲು ಆಗಲ್ಲ. ದೇವರನ್ನು ನಂಬಿ ನಾನು ಪಕ್ಷ ಉಳಿಸಿಕೊಳ್ಳುತ್ತಿದ್ದೀನಿ. ಕುಮಾರಸ್ವಾಮಿ ಕದ್ದು ಸಿಎಂ ಆದ್ರು ಎಂದು ಎಸ್.ಎಂ.ಕೃಷ್ಣ ಹೇಳುತ್ತಾರೆ. ಆದರೆ, ನನ್ನ ಅನುಮತಿ ಇಲ್ಲದೆ ಕುಮಾರಸ್ವಾಮಿ ಬಿಜೆಪಿ ಜತೆ ಹೋದರು. ನನ್ನ ಮಗ ಕದ್ದು ಹೋಗುವವನಲ್ಲ ಎಂದರು.

1978ರಲ್ಲೇ ನಾನು ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, ಕೆಲವರು ತಪ್ಪಿಸಿದರು. ಇನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕ ನಿವೇಶನ ಕೊಡಲು ಎಷ್ಟು ಸತಾಯಿಸಿದರು ಗೊತ್ತಾ? ಮಾಜಿ ಪ್ರಧಾನಿಯೊಬ್ಬರಿಗೆ ಒಂದು ನಿವೇಶನ ಕೊಡೋದಕ್ಕೆ ಇಷ್ಟೊಂದು ಶತಾಯಿಸೋದಾ? ಎಂದು ಹೊಸದಿಲ್ಲಿಯಲ್ಲಿದ್ದ ಕುರುಬರ ಹೆಣ್ಣು ಮಗಳೊಬ್ಬರು ಬೇಸರದಿಂದ ಹೇಳಿದ್ದಾಗಿ ಎಚ್‌ಡಿ ದೇವೇಗೌಡರು ಸ್ಮರಿಸಿದರು.

ದೇವೇಗೌಡರೇ ನಮಗೆ ಡಿ ಬಾಸ್

ಕೆ.ಆರ್.ಪೇಟೆಯಲ್ಲಿ ಗುರುವಾರ ನಡೆದ ಜೆಡಿಎಸ್ ಬಹಿರಂಗ ಪ್ರಚಾರ ಸಭೆಯಲ್ಲಿ ದೇವೇಗೌಡರೇ ನಮಗೆ ಬಾಸ್ ಎಂದು ಜೆಡಿಎಸ್ ಕಾರ್ಯಕರ್ತರು ‘ಡಿ ಬಾಸ್.. ಡಿ ಬಾಸ್..’ ಎಂದು ಘೋಷಣೆ ಮೊಳಗಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಂಡ್ಯ ಜಿಲ್ಲೆಯ ಬಾಸ್, ರೈತರ ಬಾಸ್, ಕಾವೇರಿ ನದಿ ನೀರು ಹಂಚಿಕೆಯ ಹೋರಾಟದ ಬಾಸ್, ದೇವೇಗೌಡರ ನಮ್ಮೆಲ್ಲರ ಬಾಸ್ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸುವ ಮೂಲಕ ನಟ ದರ್ಶನ್ ಅಭಿಮಾನಿಗಳಿಗೆ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌