ಆ್ಯಪ್ನಗರ

ಕರ್ನಾಟಕಕ್ಕೆ ತೊಂದರೆ ಆಗದಂತೆ ಟಿಬಿ ಡ್ಯಾಮ್ ಹೂಳು ತೆಗೀತೀವಿ, ಬಿಜೆಪಿಗೆ ವೋಟ್‌ ಹಾಕ್ಬೇಡಿ: ನಾಯ್ಡು

ಒಂದು ವೋಟ್ ಕೂಡ ಬೇರೆ ಪಕ್ಷಕ್ಕೆ ಹೋಗದಂತೆ ಕಾಂಗ್ರೆಸ್ ಗೆ ಹೋಗಬೇಕಿದೆ. ಜನ್ಮ ಭೂಮಿ ಮತ್ತು ಕರ್ಮ ಭೂಮಿಗೆ ಒಳ್ಳೆಯದಾಗಬೇಕು ಎಂದರೆ ಕಾಂಗ್ರೆಸ್ ಗೆ ವೋಟ್ ಹಾಕಿ

Vijaya Karnataka Web 21 Apr 2019, 3:31 pm
Vijaya Karnataka Web ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
ಕೊಪ್ಪಳ: ತುಂಗಭದ್ರಾ ಡ್ಯಾಂಗೆ ಹೂಳು ತುಂಬಿದೆ. ಇಲ್ಲಿ ನೀರಿದೆ ಅಂತಾ ಇಲ್ಲಿಗೆ ಬಂದು ನೆಲೆಸಿದ್ದೀರಿ. ಆದ್ರೆ, ಡ್ಯಾಂನಲ್ಲಿ ನೀರು ನಿಲ್ಲದ್ದರಿಂದ ನಿಮಗೆ ತೊಂದರೆ ಆಗಿದೆ ಅಂತಾ ಗೊತ್ತು. ಕರ್ನಾಟಕಕ್ಕೆ ಅನ್ಯಾಯ ಆಗದಂತೆ ತುಂಗಭದ್ರಾ ಹೂಳು ತೆಗೆಯುತ್ತೇವೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ.

ಗಂಗಾವತಿ ತಾಲೂಕಿನ ಶ್ರೀ ರಾಮನಗರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಆಂಧ್ರಪ್ರದೇಶದ ಸಿಎಂ ಚಂದ್ರಬಾಬಯ ನಾಯ್ಡು ಭಾಷಣ ಮಾಡಿದರು.

ತೆಲಂಗಾಣದೊಂದಿಗೂ ಮಾತಾಡುತ್ತೇನೆ. ಇದೆಲ್ಲ ಆಗಬೇಕು ಎಂದರೆ ಬಿಜೆಪಿಗೆ ವೋಟ್ ಮಾಡಬಾರದು. ಒಂದು ವೋಟ್ ಕೂಡ ಬೇರೆ ಪಕ್ಷಕ್ಕೆ ಹೋಗದಂತೆ ಕಾಂಗ್ರೆಸ್ ಗೆ ಹೋಗಬೇಕಿದೆ. ಜನ್ಮ ಭೂಮಿ ಮತ್ತು ಕರ್ಮ ಭೂಮಿಗೆ ಒಳ್ಳೆಯದಾಗಬೇಕು ಎಂದರೆ ಕಾಂಗ್ರೆಸ್ ಗೆ ವೋಟ್ ಹಾಕಿ ಎಂದರು

ಎಸ್.ಎಂ. ಕೃಷ್ಣ ಸಿಎಂ ಆಗಿದ್ದಾಗ ನಾನು ಅವರು ಸೇರಿ ಹೈದ್ರಾಬಾದ್ ಮತ್ತು ಬೆಂಗಳೂರು ಅಭಿವೃದ್ಧಿ ಮಾಡಿದ್ದೆವು. ಆದ್ರೆ, ಹೈದ್ರಾಬಾದ್ ಈಗ ತೆಲಂಗಾಣಕ್ಕೆ ಹೋಯ್ತು. ನಮಗೆ ರಾಜಧಾನಿ ಇಲ್ಲ. ಅದಕ್ಕಾಗಿ ನಾನು ಅಮರಾವತಿ ನಿರ್ಮಾಣಕ್ಕೆ ಮುಂದಾಗಿದ್ದೆ. ಆದ್ರೆ, ಮೊದಲು ಇದಕ್ಕೆ ಅನುದಾನ ಕೊಡ್ತಿನಿ ಅಂತಾ ಹೇಳಿದ್ದ ಮೋದಿ ಕೈ ಕೊಟ್ಟರು.
ಅಮರಾವತಿ ನಿರ್ಮಾಣಕ್ಕೆ ನಯಾಪೈಸೆ ಕೊಡಲಿಲ್ಲ. ಆದ್ರೆ, ಜಗತ್ತಿನಲ್ಲೇ ದೊಡ್ಡ ಸಿಟಿ ಯಾಗಿ ಅಮರಾವತಿ ನಿರ್ಮಾಣ ಮಾಡ್ತಿನಿ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ನಾಳೆ ನೀವು ವೋಟ್ ಹಾಕುವಾಗ ಗಮನಿಸಿ. ನೀವು ವೋಟ್ ಹಾಕುವಾಗ ಇವಿಎಂ, ಬ್ಯಾಲೆಟ್ ಬಾಕ್ಸ್ ಗಮನಿಸಿ. ಇವಿಎಂ ಬಗ್ಗೆ ಈಗಲೂ ಅನುಮಾನ ಇದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ‌ನಾವು ರೈತರ ಸಾಲಮನ್ನಾ ಮಾಡಿದ್ದೇವೆ. ಆದ್ರೇ ಮೋದಿ ನೀವು ಏನು ಮಾಡಿದ್ದೀರಾ? ಗುಜರಾತ್ ನಲ್ಲಿ ಹುಟ್ಟಿದ ಮಹಾತ್ಮಾ ಗಾಂಧಿ ಸತ್ಯಮೇವ ಜಯತೆ ಅಂದಿದ್ರು. ಆದ್ರೆ ಗುಜುರಾತಿನಲ್ಲಿ ಹುಟ್ಟಿದ ಮೋದಿ ಬರೀ ಸುಳ್ಳು ಹೇಳ್ತಾರೆ ಎಂದು ನಾಯ್ಡು ತಿಳಿಸಿದರು.

ನರೇಂದ್ರಮೋದಿ ಗೆಲ್ಲಿಸಿದ್ರೆ ನಿಮ್ಮನ್ನು ‌ಕೇಸ್ ಹಾಕಿ ಜೈಲಿಗೆ ಕಳುಹಿಸಬಹುದು. ನನಗೆ ಮೋಸ ಆಗಿದೆ. ನೀವು ಯೋಚನೆ ಮಾಡಿ‌. ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಅಭ್ಯರ್ಥಿಗಳನ್ನು ಗೆಲ್ಲಿಸಿ. ನೀವು ಅಭ್ಯರ್ಥಿ ಗೆಲ್ಲಿಸಿ, ಅಭಿವೃದ್ಧಿ ಹೇಗೆ ಮಾಡ್ತೀವಿ ನೋಡಿ. ದಕ್ಷಿಣ ಭಾರತದಲ್ಲಿ ಎಲ್ಲಿಯೂ ಬಿಜೆಪಿ ಇಲ್ಲ. ಈ ಬಿಜೆಪಿಯನ್ನು ಸೋಲಿಸಿ ಓಡಿಸಬೇಕು. ತೆಲುಗು ಜನ್ರು ಈ ಭಾರೀ ಮೈತ್ರಿ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಚಂದ್ರಬಾಬು ನಾಯ್ಡು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ