ಆ್ಯಪ್ನಗರ

ಮಂಡ್ಯ ಚುನಾವಣೆ ವೇಳೆ ಮದ್ದೂರು ಹೊಳೆ ಆಂಜನೇಯಸ್ವಾಮಿಗೆ ಭಾರಿ ಬೇಡಿಕೆ

ಹೊಳೆ ಆಂಜನೇಯ ಸ್ವಾಮಿಗೆ ಒಂದು ಕಾಲೂ ರೂ. ಹರಕೆ ಹೊತ್ತು ಪೂಜೆ ಸಲ್ಲಿಸಿದರು. ಸುಮಲತಾ ಪರ ಪೂಜೆ ನೆರವೇರಿಸಿ ಆಕೆಯ ಗೆಲುವಿಗಾಗಿ ಹಿರಿಯ ನಟ ದೊಡ್ಡಣ್ಣ ಪ್ರಾರ್ಥಿಸಿದರು.

Vijaya Karnataka Web 5 Apr 2019, 5:38 pm
ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಈಗ ಪ್ರಚಾರದ ಭರಾಟೆ ಜೋರಾಗಿದೆ. ಜತೆಗೆ ದೇವರಿಗೆ ಮೊರೆ ಹೋಗುವುದು ಕೂಡ.
Vijaya Karnataka Web ದೊಡ್ಡಣ್ಣ
ದೊಡ್ಡಣ್ಣ


ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೊಳೆ ಆಂಜನೇಯಸ್ವಾಮಿಗಾಗಿ ಈಗ ಎಲ್ಲರೂ ಮೊರೆ ಹೋಗುತ್ತಿದ್ದಾರೆ. ಇಲ್ಲಿ ಒಂದೂ ಕಾಲು ರೂಪಾಯಿ ಹರಕೆ ಹೊತ್ತರೆ ಬೇಡಿಕೆಗಳೆಲ್ಲವೂ ಸಾಂಗವಾಗಿ ನೆರವೇರುತ್ತದೆ ಎಂಬ ಪ್ರತೀತಿ ಇದೆ.

ಪುತ್ರನ ಗೆಲುವಿಗಾಗಿ ಐದು ವಾರಗಳ ಒಂದೂ ಕಾಲು ರೂಪಾಯಿ ಹರಕೆ ಹೊತ್ತಿದ್ದರು ಅನಿತಾ ಕುಮಾರಸ್ವಾಮಿ.

ಈಗ ನಟ ದೊಡ್ಡಣ್ಣ ‌ಸರದಿ.

ಸುಮಲತಾ ಗೆಲುವಿಗಾಗಿ ನಟ ದೊಡ್ಡಣ್ಣ ಮದ್ದೂರಿನ ಹೊಳೆ ಆಂಜನೇಯಸ್ವಾಮಿಯ ಮೊರೆ ಹೋಗಿದ್ದಾರೆ. ದೊಡ್ಡಣ್ಣ ಅವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಹೊಳೆ ಆಂಜನೇಯ ಸ್ವಾಮಿಗೆ ಒಂದು ಕಾಲೂ ರೂ. ಹರಕೆ ಹೊತ್ತು ಪೂಜೆ ಸಲ್ಲಿಸಿದರು. ಸುಮಲತಾ ಪರ ಪೂಜೆ ನೆರವೇರಿಸಿ ಆಕೆಯ ಗೆಲುವಿಗಾಗಿ ಪ್ರಾರ್ಥಿಸಿದರು.

ನಟ ದೊಡ್ಡಣ್ಣ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ