ಆ್ಯಪ್ನಗರ

ಕಾಂಗ್ರೆಸ್ ಪಕ್ಷದ ಬೆನ್ನಿಗೆ ಉಮೇಶ್‌ ಜಾಧವ್ ಚೂರಿ ಹಾಕಿದ್ದಾನೆ: ಡಿಸಿಎಂ ಪರಮೇಶ್ವರ

ಕಾಂಸ್ ಪಕ್ಷ ಅವರಿಗೆ ಮಾತೃ ಸಮಾನ. ಅಂತ ಮಾತೆಗೆ ಮೋಸ ಮಾಡಿ ಜಾಧವ್ ದುಡ್ಡಿಗಾಗಿ ಬಿಜೆಪಿಗೆ ಮಾರಾಟವಾಗಿರುವುದು ನಾಚಿಗೆಗೇಡು ಎಂದು ಏಕವಚನದಲ್ಲಿಯೇ ಟೀಕಿಸಿದರು.

Vijaya Karnataka Web 6 May 2019, 4:21 pm
ಕಲಬುರಗಿ: ಮೊದಲ ಸಲ‌ ಗೆದ್ದಾಗ ಎರಡನೆಯ ಸಲ ಗೆದ್ದಾಗ ಜಾಧವ್ ಚೆನ್ನಾಗಿಯೇ ಇದ್ದ ಬಂದಾಗೆಲ್ಲ ಕಾಲಿಗೆ ನಮಸ್ಕರಿಸಿರಿ ಅಣ್ಣಾ ಆ ಕೆಲಸ ಆಗಬೇಕು ಈ ಕೆಲಸ ಆಗಬೇಕು ಅಂತಿದ್ದ ಈಗ ಹಣ ತಗೊಂಡು ಬಿಜೆಪಿಗೆ ಸೇರಿದ್ದಾನಂತೆ ಎಷ್ಟು ಅಂತ ನನಗೆ ಗೊತ್ತಿಲ್ಲ ಎಂದು ಡಿಸಿಎಂ ಡಾ ಜಿ.ಪರಮೇಶ್ವರ ಹೇಳಿದರು.
Vijaya Karnataka Web ಪರಮೇಶ್ವರ್‌
ಪರಮೇಶ್ವರ್‌


ಟೆಂಗಳಿಯಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಅವರು ಮಾತಮಾಡುತ್ತಿದ್ದರು.

ಕಾಂಸ್ ಪಕ್ಷ ಅವರಿಗೆ ಮಾತೃ ಸಮಾನ. ಅಂತ ಮಾತೆಗೆ ಮೋಸ ಮಾಡಿ ಜಾಧವ್ ದುಡ್ಡಿಗಾಗಿ ಬಿಜೆಪಿಗೆ ಮಾರಾಟವಾಗಿರುವುದು ನಾಚಿಗೆಗೇಡು ಎಂದು ಏಕವಚನದಲ್ಲಿಯೇ ಟೀಕಿಸಿದರು.

ರಾಜಕೀಯವಾಗಿ ಬೆಳಕಿಗೆ ತಂದವರ ವಿರುದ್ದ ಚುನಾವಣೆ ನಿಲ್ಲುವುದರ ಜತೆಗೆ ತನ್ನ ಮಗ ಅವಿನಾಶ್ ಜಾಧವ್‌ನಿಗೆ ಟಿಕೇಟ್ ಕೊಡಿಸಿದ್ದು ಇನ್ನೆಂತ ಮೋಸ ಎಂದು ಡಿಸಿಎಂ ತಿರುಗೇಟು ನೀಡಿದರು.

"ನೋಡಪ್ಪ ಜಾಧವ್ ನಮಗೆ ಮೋಸ ಮಾಡಿ ಪಕ್ಷ ಬಿಟ್ಟ ನೀನೂ ಕೂಡಾ ಪಕ್ಷ ಬಿಡಬೇಡ ಎಂದು ರಾಠೋಡ್ ಗೆ ಹೇಳಿದ್ದೆ. ಆತ ಪ್ರಮಾಣ ಮಾಡಿದ್ದಾನೆ‌ ಅಂತ ಪ್ರಾಮಾಣಿಕನಿಗೆ ಮತ ನೀಡಿ" ಎಂದು ಕರೆ ನೀಡಿದರು.

"ಮೈತ್ರಿ ಸರಕಾರ 15 ಲಕ್ಷ ರೈತರ 7500 ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ. ಸರಕಾರ ಬೀಳಿಸಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಏನೇ ಪಲ್ಟಿ ಹೊಡೆದರೂ ಸರಕಾರ ಬೀಳಲ್ಲ" ಎಂದು ಜಿ. ಪರಮೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌