ಆ್ಯಪ್ನಗರ

ರೇವಣ್ಣನೂ ಸಿಎಂ ಆಗಬಹುದು ಎಂದ ಸಿದ್ದರಾಮಯ್ಯ ಹೇಳಿಕೆ ಅಪ್ರಸ್ತುತ: ಪರಮೇಶ್ವರ್‌

ಸದ್ಯ ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ ಸಿಎಂ ಯಾರು ಎಂಬ ವಿಚಾರವೇ ಅಪ್ರಸ್ತುತ. ಸಿಎಂ ಹುದ್ದೆ ಕುರಿತ ಸಿದ್ದರಾಮಯ್ಯ ಹೇಳಿಕೆ ಸಾಂದರ್ಭಿಕ ಅಷ್ಟೇ ಎಂದು ಪರಮೇಶ್ವರ್‌ ಪರೋಕ್ಷವಾಗಿ ಟಾಂಗ್ ನೀಡಿದರು.

Vijaya Karnataka Web 16 May 2019, 5:01 pm
ಕಲಬುರಗಿ: ಜೆಡಿಎಸ್‌ನಲ್ಲಿ ಎಚ್‌.ಡಿ ರೇವಣ್ಣ ಕೂಡ ಮುಖ್ಯಮಂತ್ರಿ ಆಗುವ ಅರ್ಹತೆ ಉಳ್ಳವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಟ್ವೀಟ್‌ಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, ಇದು ಕೇವಲ ಸಾಂದರ್ಭಿಕ ಹೇಳಿಕೆ ಅಷ್ಟೇ ಎಂದು ತಿಳಿಸಿದರು.
Vijaya Karnataka Web G Parameshwara


ಸದ್ಯ ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ ಸಿಎಂ ಯಾರು ಎಂಬ ವಿಚಾರವೇ ಅಪ್ರಸ್ತುತ. ಸಿಎಂ ಹುದ್ದೆ ಕುರಿತ ಸಿದ್ದರಾಮಯ್ಯ ಹೇಳಿಕೆ ಸಾಂದರ್ಭಿಕ ಅಷ್ಟೇ ಎಂದು ಪರಮೇಶ್ವರ್‌ ಪರೋಕ್ಷವಾಗಿ ಟಾಂಗ್ ನೀಡಿದರು.

ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಮೂಲಕ ಪದೇ ಪದೇ ಮುಖ್ಯಮಂತ್ರಿ ಹುದ್ದೆ ಕುರಿತು ಹೇಳಿಕೆ ಕೊಡಿಸುತ್ತಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಹಿಂದುಳಿದ ವರ್ಗದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪಿಸಿ ತಿರುಗೇಟು ನೀಡಿದ್ದರು. ಚಿಂಚೋಳಿಯಲ್ಲಿ ಚುನಾವಣೆ ಪ್ರಚಾರದ ವೇಳೆ, ಖರ್ಗೆ ಎಂದೋ ಮುಖ್ಯಮಂತ್ರಿಯಾಗಬೇಕಿದ್ದವರು. ಅವರು ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯೂ ಆಗಬಹುದಿತ್ತು ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಇಂದು ಬೆಳಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಜೆಡಿಎಸ್‌ನಲ್ಲೂ ಎಚ್‌.ಡ ರೇವಣ್ಣ ಮುಖ್ಯಮಂತ್ರಿಯಾಗಲು ಅರ್ಹತೆಯುಳ್ಳವರು ಎನ್ನುವ ಮೂಲಕ ತಣ್ಣನೆ ಕಿಡಿ ಹಚ್ಚಿದ್ದರು.

ಸಿಎಂ ಹುದ್ದೆಗೆ ಎಚ್‌.ಡಿ ರೇವಣ್ಣ ಕೂಡ ಅರ್ಹರು: 'ತಣ್ಣಗೆ' ಕಿಡಿ ಹಚ್ಚಿದ ಸಿದ್ದರಾಮಯ್ಯ ಟ್ವೀಟ್

ಈ ವಿವಾದಕ್ಕೆ ಪ್ರತಿಕ್ರಿಯಿಸುತ್ತ ಪರಮೇಶ್ವರ್‌, ಈಗಾಗಲೇ ಡಿಕೆ ಶಿವಕುಮಾರ್ ಕೂಡ ನನಗೂ ಸಿಎಂ ಆಗೋ ಆಸೆ ಇದೆ ಅಂತ ಹೇಳಿದ್ದಾರೆ ಎಂದು ನುಡಿದರು.

ಮೇ 23ರ ನಂತರ ಸಮ್ಮಿಶ್ರ ಸರಕಾರ ಬೀಳಲಿದೆ ಎಂಬ ಬಿಜೆಪಿ ಹೇಳಿಕೆ ಅಲ್ಲಗಳೆದ ಅವರು, ಇವತ್ತೇ ಬರೆದು ಕೊಡುವೆ. ಮೇ 23 ರಲ್ಲ, 24 ಅಲ್ಲ, 25 ಅಲ್ಲ, ಮುಂದಿನ ನಾಲ್ಕು ವರ್ಷ ಸರ್ಕಾರಕ್ಕೆ ಏನೂ ಆಗಲ್ಲ. ಯಡಿಯೂರಪ್ಪ ಎಷ್ಟೇ ಜಪ ಮಾಡಿದ್ರು ಸಹ ಸರ್ಕಾರಕ್ಕೆ ಏನೂ ಆಗಲ್ಲ ಎಂದು ಪ್ರತಿಪಾದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ