ಆ್ಯಪ್ನಗರ

ಅಮಿತ್ ಶಾ ಮೇಲೆ ಹೂವಿನ ಮಳೆ ಸುರಿದ ಬಿಜೆಪಿ ಕಾರ್ಯಕರ್ತರು

ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ. ಎಸ್.ಬಸವರಾಜು ಪರ ಅಮಿತ್ ಶಾ ಮತಯಾಚನೆ ಮಾಡಿದ್ದು, ರೋಡ್‌ ಶೋ ವೇಳೆ ಪಕ್ಷದ ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮೇಲೆ ಹೂವಿನ ಮಳೆ ಸುರಿದರು.

Vijaya Karnataka Web 16 Apr 2019, 4:35 pm

ತುಮಕೂರು: ಬಿಜೆಪಿ ರೋಡ್ ಶೋ ವೇಳೆ ಕೇಸರಿ ಪಕ್ಷದ ಕಾರ್ಯಕರ್ತರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೇಲೆ ಹೂವಿನ ಮಳೆ ಸುರಿದಿದ್ದಾರೆ. ನಗರದ ಟೌನ್ ಹಾಲ್‌ನ ಸ್ಕೈ ವಾಕ್‌ನಿಂದ ಹೂವಿನ ಮಳೆ ಸುರಿದಿದ್ದಾರೆ.


ತುಮಕೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ತುಮಕೂರು ನಗರಕ್ಕೆ ಮಂಗಳವಾರ ( ಏಪ್ರಿಲ್ 16, 2019)ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರೋಡ್‌ ಶೋ ನಡೆಸಿದರು. ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ. ಎಸ್.ಬಸವರಾಜು ಪರ ಅಮಿತ್ ಶಾ ಮತಯಾಚನೆಯನ್ನೂ ಮಾಡಿದರು. ನಗರದ ಬಿಜಿಎಸ್ ವೃತ್ತ (ಟೌನ್ ಹಾಲ್) ನಿಂದ ರೋಡ್ ಶೋಗೆ ಅಮಿತ್‌ ಶಾ ಚಾಲನೆ ನೀಡಿದರು.

ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೇಲೆ ಕೇಸರಿ ಪಕ್ಷದ ಕಾರ್ಯಕರ್ತರು ಟೌನ್‌ ಹಾಲ್‌ನಲ್ಲಿರುವ ಸ್ಕೈ ವಾಕ್‌ನಿಂದ ಹೂವಿನ ಮಳೆ ಸುರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ರೋಡ್‌ ಶೋನಲ್ಲಿ ಭಾಗಿಯಾಗಿದ್ದರು. ಏಪ್ರಿಲ್ 18, 2019ರಂದು ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಮತದಾನ ಹಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.


ಅಲ್ಲದೆ, ಬಿಜೆಪಿ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧೆ ಮಾಡುತ್ತಿರುವುದರಿಂದ ಚುನಾವಣೆಯ ಕಾವು ಹೆಚ್ಚಾಗಿದೆ. ಈ ಹಿನ್ನೆಲೆ ಬಿಜೆಪಿ ಲೋಖಸಭೆ ಅಭ್ಯರ್ಥಿ ಜಿ. ಎಸ್.ಬಸವರಾಜುರನ್ನು ಗೆಲ್ಲಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತಯಾಚನೆ ಮಾಡಿದ್ದು, ರೋಡ್‌ ಶೋ ನಲ್ಲಿ ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌