ಆ್ಯಪ್ನಗರ

ದೇವೇಗೌಡರ ಜತೆ 33 ವರ್ಷ ಯುದ್ಧ, ಈಗ ಅಭಿವೃದ್ಧಿಗಾಗಿ ಒಂದಾಗಿದ್ದೇವೆ: ಡಿಕೆಶಿ

ಬಿಜೆಪಿಗರಷ್ಟೇ ಹಿಂದುಗಳಲ್ಲ. ನಾವು ಹಿಂದುಗಳೆ. ನಮ್ಮ ಮೈಯಲ್ಲೂ ಕೆಂಪು ರಕ್ತ ಹರಿಯುತ್ತಿದೆ. ನಮ್ಮ ಮೈಯಲ್ಲಿ ಬೆವರು ಬಂದರೆ, ಉಪ್ಪು ಬರುತ್ತೆ. ಬಿಜೆಪಿಯವರ ಮನೆಯಲ್ಲೇನು ಸಕ್ಕರೆ ಬರುತ್ತಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

Vijaya Karnataka Web 26 Mar 2019, 4:18 pm
ರಾಮನಗರ: '33 ವರ್ಷಗಳ ಕಾಲ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಯುದ್ಧ ಮಾಡಿದ್ದೇನೆ. ಇನ್ನೆಷ್ಟು ದಿನ ಯುದ್ಧ ಮಾಡಲಿ. ಈಗ ಅಭಿವೃದ್ಧಿಗಾಗಿ ಒಂದಾಗಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
Vijaya Karnataka Web d k shivakumar


ಸಹೋದರ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗರಷ್ಟೇ ಹಿಂದುಗಳಲ್ಲ. ನಾವು ಹಿಂದುಗಳೆ. ನಮ್ಮ ಮೈಯಲ್ಲೂ ಕೆಂಪು ರಕ್ತ ಹರಿಯುತ್ತಿದೆ. ನಮ್ಮ ಮೈಯಲ್ಲಿ ಬೆವರು ಬಂದರೆ, ಉಪ್ಪು ಬರುತ್ತೆ. ಬಿಜೆಪಿಯವರ ಮನೆಯಲ್ಲೇನು ಸಕ್ಕರೆ ಬರುತ್ತಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಬೇರೆಯವರು ಉತ್ತರ, ದಕ್ಷಿಣ ಕರ್ನಾಟಕ ಎನ್ನುತ್ತಾರೆ. ಆದರೆ, ನಾವು ಅಖಂಡ ಕರ್ನಾಟಕ ಎನ್ನುತ್ತೇವೆ ಎಂದು ಹೇಳಿದರು.

ಈ ಬಾರಿಯ ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಅಶ್ವತ್ ನಾರಾಯಣ್ ವಿರುದ್ಧ ಅಲ್ಲ. ಇದು ದೇವೇಗೌಡರು ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಚುನಾವಣೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌