ಆ್ಯಪ್ನಗರ

'ಕಳ್ಳೆತ್ತು'ಗಳಿಗಲ್ಲ, ದುಡಿಯುವ ಎತ್ತುಗಳಿಗೆ 'ಮೇವು' ಕೊಡಿ: ರಾಮನಗರದಲ್ಲಿ ಎಚ್‌ಡಿಕೆ

ಬೆಂಗಳೂರು ನಾಗರಿಕರಿಗೆ ಮೋದಿಯವರ ಬಗ್ಗೆ ಒಲವಿದೆ; ನಾವೂ ಸಹ ಬೆಂಗಳೂರನ್ನು ಸಾಕಷ್ಟು ಅಭಿವೃದ್ದಿ ಮಾಡಿದ್ದೇವೆ, ಆದರೆ ಬೆಂಗಳೂರು ನಗರದಲ್ಲಿ ನಮ್ಮ ಬಗ್ಗೆ ಒಲವಿಲ್ಲ. ಇದು ನಮಗೆ ವ್ಯಥೆ ಉಂಟುಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.

Vijaya Karnataka Web 26 Mar 2019, 4:15 pm
ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾವು ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೆವು. ಆದರೆ ಈಗ ನಾವೆಲ್ಲರೂ ಒಂದಾಗಿದ್ದೇವೆ. ಜಿಲ್ಲೆಯ ಅಭಿವೃದ್ದಿ ನಿನಗೆ ಕಾಣಬೇಕಂದರೆ ಇನ್ನೂ 6, 7 ತಿಂಗಳು ನೀವು ಕಾಯಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹೇಳಿದರು.
Vijaya Karnataka Web HDK


ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಕೆ ಸಂದರ್ಭ ಹಾಜರಿದ್ದ ಎಚ್‌ಡಿಕೆ, ಸಮ್ಮಿಶ್ರ ಸರ್ಕಾರ ಉಳಿಸಲು ನಾನು, ಶಿವಕುಮಾರ್ ಒಂದಾಗಿದ್ದೇವೆ. ಒಂದು ಲಕ್ಷ ಬಹುಮತದಿಂದ ನನ್ನ ಧರ್ಮಪತ್ನಿ ಅನಿತಾ ಕುಮಾರಸ್ವಾಮಿಗೆ ಆಶೀರ್ವಾದ ಮಾಡಿದ್ದೀರಿ. ಅದೇ ರೀತಿ ಡಿ.ಕೆ ಸುರೇಶ್ ಅವರಿಗೂ ಆಶೀರ್ವಾದ ಮಾಡಬೇಕು. ನನಗೆ ನಿಮ್ಮ ಮೇಲೆ ನಂಬಿಕೆ ಇದೆ. ಚನ್ನಪಟ್ಟಣದಲ್ಲಿ ಬಿಜೆಪಿಯವರು ಸಹ ನಮಗೆ ಮತ ಹಾಕಲಿದ್ದಾರೆ' ಎಂದು ನುಡಿದರು.

ಬೆಂಗಳೂರು ನಾಗರಿಕರಿಗೆ ಮೋದಿಯವರ ಬಗ್ಗೆ ಒಲವಿದೆ; ನಾವೂ ಸಹ ಬೆಂಗಳೂರನ್ನು ಸಾಕಷ್ಟು ಅಭಿವೃದ್ದಿ ಮಾಡಿದ್ದೇವೆ, ಆದರೆ ಬೆಂಗಳೂರು ನಗರದಲ್ಲಿ ನಮ್ಮ ಬಗ್ಗೆ ಒಲವಿಲ್ಲ. ಇದು ನಮಗೆ ವ್ಯಥೆ ಉಂಟುಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.

ದುಡಿಯುವ ಎತ್ತುಗಳಿಗೆ 'ಮೇವು' ಕೊಡಿ:
ಈಗ ನಿಮ್ಮ ಬೆಳೆಯನ್ನು ತಿನ್ನಲು ಕಳ್ಳ ಎತ್ತುಗಳು ಬರುತ್ತವೆ; ಅವುಗಳಿಗೆ ಮೇವು ಕೊಡದೆ ದುಡಿಯುವ ಎತ್ತುಗಳಿಗೆ 'ಮೇವು' ಕೊಡಿ ಎಂದು ಸಿಎಂ ಮನವಿ ಮಾಡಿದರು. 'ಈ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಕೊಡಬೇಕು, ಸುರೇಶ್ ಅವರನ್ನು 5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಕಳೆದ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಸುರೇಶ್ ಅವರು ಶ್ರಮಪಟ್ಟಿದ್ದಾರೆ. ಅವರ ಋಣ ನನ್ನ ಮೇಲಿದೆ' ಎಂದು ಎಚ್‌ಡಿಕೆ ನುಡಿದರು.

'ನಿನ್ನೆ ಮಂಡ್ಯದಲ್ಲಿ ಸಿಕ್ಕ ಜನಬೆಂಬಲ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಶಿವರಾಮೇಗೌಡರು ಸೇರಿದಂತೆ ಹಲವರು ಸೇರಿ ನಿಖಿಲ್‌ನ ರಾಜಕೀಯಕ್ಕೆ ಎಳೆದಿದ್ದಾರೆ. ಅವನಿಗೆ ರಾಜಕೀಯಕ್ಕೆ ಬರುವ ಬಯಕೆ ಇರಲಿಲ್ಲ. ನಿಮ್ಮ ಮನೆಯ ಮಗ ಈ ಎಚ್.ಡಿ. ಕುಮಾರಸ್ವಾಮಿ. ಶಿವಕುಮಾರ್‌ ಅವರು ನನ್ನ ಜೊತೆ ಸೇರಿ ಸ್ವಲ್ಪ ಸಾಫ್ಟ್ ಆಗಿದ್ದಾರೆ. ಯಾಕಪ್ಪ ದ್ವೇಷದ ರಾಜಕಾರಣ ಅಂತ ತೀರ್ಮಾನ ಮಾಡಿದ್ದಾರೆ' ಎಂದು ಕುಮಾರಸ್ವಾಮಿ ರಾಮನಗರದಲ್ಲಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ