ಆ್ಯಪ್ನಗರ

4ನೇ ಬಾರಿಗೆ ಗೆಲುವು ಬಾರಿಸಿದ ಜಿ.ಎಂ.ಸಿದ್ದೇಶ್ವರ

ದಾವಣೆಗೆರೆಯಲ್ಲಿ ತಮ್ಮ ವಿರುದ್ಧ ಸರಿಸಾಟಿಯಾಗಿ ನಿಲ್ಲುವವರು ಯಾರೂ ಇಲ್ಲ ಎಂಬುದನ್ನು ಬಿಜೆಪಿ ಹಿರಿಯ ಮುಖಂಡ ಜಿಎಂ ಸಿದ್ದೇಶ್ವರ ಮಗದೊಮ್ಮೆ ಸಾಬೀತು ಮಾಡಿದ್ದಾರೆ. ಅಲ್ಲದೆ ಲೋಕಸಭಾ ಚುಣಾವಣೆಯಲ್ಲಿ ನಾಲ್ಕನೇ ಬಾರಿಗೆ ಗೆಲುವು ಮೊಳಗಿಸಿದ್ದಾರೆ.

Vijaya Karnataka Web 23 May 2019, 6:38 pm
ದಾವಣಗೆರೆ: ಲೋಕಸಭಾ ಚುನಾವಣೆ ಫಲಿತಾಂಶ ಕ್ಷಣಕ್ಷಣಕ್ಕೂ ಬಾರಿ ಕುತೂಹಲವನ್ನು ಕೆರಳಿಸಿತ್ತು. ಬಿಜೆಪಿ ಪರ ಆಗಲೇ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಜಿ ಎಂ ಸಿದ್ದೇಶ್ವರ ನಾಲ್ಕನೇ ಬಾರಿಗೆ ಗೆಲುವು ದಾಖಲಿಸುವ ಮೂಲಕ ಮೋಡಿ ಮಾಡಿದ್ದಾರೆ. ತಮ್ಮ ಪ್ರತಿಸ್ಫರ್ಧಿ ಎಚ್ ಬಿ ಮಂಜಪ್ಪ ವಿರುದ್ಧ ಸಿದ್ದೇಶ್ವರ ಅಮೋಘ ಗೆಲುವು ಬಾರಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ: 651353
ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ: 482683

Mandya, Hassan Tumkuru Result 2019: ಮಂಡ್ಯ, ಹಾಸನ, ತುಮಕೂರಿನ ತಾಜಾ ಸ್ಥಿತಿಗತಿ: ಇಲ್ಲಿ ನೋಡಿ.
Karnataka Results 2019: ಕರ್ನಾಟಕದ 28 ಕ್ಷೇತ್ರಗಳಲ್ಲಿ ಏನಾಗಿದೆ?: ಮುಖ್ಯಾಂಶಗಳು ಇಲ್ಲಿವೆ
Lok Sabha Elections Result: ದೇಶಾದ್ಯಂತ ಹೇಗಿದೆ ಹವಾ?: ಮುಖ್ಯಾಂಶಗಳು ಇಲ್ಲಿವೆ
ಲೋಕಸಭೆ ಚುನಾವಣೆ ಫಲಿತಾಂಶ: ಎಲ್ಲೆಡೆ ಏನೇನಾಯ್ತು? ಇಲ್ಲಿ ನೋಡಿ
ಕರ್ನಾಟಕ ರಿಸಲ್ಟ್: ಮತದಾರರ ಒಲವು ದೋಸ್ತಿಗೋ, ಕಮಲಕ್ಕೋ?

ಒಂದು ಕಾಲದಲ್ಲಿ ದಾವಣಗೆರೆ ಲೋಕಸಭೆ ಕ್ಷೇತ್ರ ಕಾಂಗ್ರೆಸ್‌ನ ಭದ್ರ ಕೋಟೆ. ನಡುಕಾಲದ ಹೊತ್ತಿಗೆ ಈ ಕೋಟೆ ಛಿದ್ರವಾಗಿ ಇಲ್ಲಿ ಕಮಲ ಅರಳುತ್ತದೆ. ಈವರೆಗೂ ನಡೆದ ಹನ್ನೊಂದು ಚುನಾವಣೆಗಳಲ್ಲಿ ಮೊದಲ ಆರು ಬಾರಿ ಕಾಂಗ್ರೆಸ್‌ ಗೆದ್ದರೆ, ನಂತರದ ಐದು ಬಾರಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಈ ಜರ್ನಿಯಲ್ಲಿ ಹತ್ತಾರು ನಾಯಕರೇನೋ ಬಂದು ಹೋಗಿದ್ದಾರೆ. ಆದರೆ ಸಹಜವೆಂಬಂತೆ ಕ್ಷೇತ್ರದ ಎರಡು ದೊಡ್ಡ ಸಮುದಾಯಗಳ ನಡುವೆಯೇ ಅಧಿಕಾರ ಹಂಚಿಕೆ ಆಗುತ್ತಾ ಬಂದಿದೆ.

ಹ್ಯಾಟ್ರಿಕ್‌ ಗೆಲುವು ಸಾಧಿಸಿ ನಾಲ್ಕನೇ ಗೆಲುವಿಗೆ ಎದುರು ನೋಡುತ್ತಿರುವ ಹಾಲಿ ಸಂಸದ ಬಿಜೆಪಿಯ ಜಿ.ಎಂ. ಸಿದ್ದೇಶ್ವರ, ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ, ಮೊದಲ ಬಾರಿ ಕಣದಲ್ಲಿರುವ ಎಚ್‌ ಬಿ ಮಂಜಪ್ಪ ನಡುವೆ ಗೆಲುವಿಗೆ ತುರುಸಿನ ಸ್ಪರ್ಧೆಯಿದ್ದು ಯಾರ ಕೊರಳಿಗೆ ವಿಜಯ ಮಾಲೆ ಅಲಂಕರಿಸಲಿದೆ. ಉಳಿದ ಅಭ್ಯರ್ಥಿಗಳು ಎಷ್ಟು ಮತ ಪಡೆದಿದ್ದಾರೆ, ಯಾರು ಯಾರ ಗೆಲುವಿಗೆ ಅಡ್ಡಿಯಾಗಿದ್ದಾರೆಂಬ ಸ್ಪಷ್ಟ ಚಿತ್ರಣವೂ ಸಿಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌