ಆ್ಯಪ್ನಗರ

ಅರ್ಥಶಾಸ್ತ್ರದ ಗಂಧ ಗಾಳಿ ಗೊತ್ತಿಲ್ಲದ ರಾಹುಲ್‌: ಗೋವಿಂದ ಕಾರಜೋಳ

ಕಾಂಗ್ರೆಸ್ ಸುಡುವ ಮನೆ ಅಷ್ಟೆ ಅಲ್ಲ ಬಾಬಾ ಸಾಹೇಬ ಮತ್ತು ಜಗಜೀವನ ರಾಂ ಅವರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ನಿಂದ ದಲಿತರಿಗೆ ಅನ್ಯಾಯವಾಗಿದೆ ಎಂದು ಹೇಳಿದರು.

Vijaya Karnataka Web 19 Apr 2019, 9:15 pm
ಕಲಬುರಗಿ: ಅರ್ಥಶಾಸ್ತ್ರ ಗಂಧ ಗೊತ್ತಿಲ್ಲದ ರಾಹುಲ್ ಗಾಂಧಿ ವಾರ್ಷಿಕ 72000 ರೂ. ಕೊಡುತೀವಿ ಅಂತಿದ್ದಾರೆ. ಅದು ಹೇಗೆ ಸಾಧ್ಯ. ಬಜೆಟ್‌ಗಿಂತ ಹೆಚ್ಚುವರಿ ಮೊತ್ತ ಇದಕ್ಕಾಗಿ ಬೇಕಾಗುತ್ತದೆ ಎಂದು ಬಿಜೆಪಿ ನಾಯಕ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
Vijaya Karnataka Web ಗೋವಿಂದ ಕಾರಜೋಳ
ಗೋವಿಂದ ಕಾರಜೋಳ


ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಗೋವಿಂದ ಕಾರಜೋಳ ಮಾತನಾಡಿದರು.

ಇಂತಹ ಕನಸಿಗೆ ಬಲಿಯಾಗಬೇಡಿ. ಮಹಾಘಟಬಂದನ್ ನಲ್ಲಿರೋ ಊನವಾಗಿರುವ ನಾಯಕರಿಗೆ ಯಾರಿಗೂ ಪ್ರಧಾನಿ ಆಗುವ ಯೋಗ್ಯತೆ ಇಲ್ಲ ಎಂದರು.

ಕಾಂಗ್ರೆಸ್ ಸುಡುವ ಮನೆ ಅಷ್ಟೆ ಅಲ್ಲ ಬಾಬಾ ಸಾಹೇಬ ಮತ್ತು ಜಗಜೀವನ ರಾಂ ಅವರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ನಿಂದ ದಲಿತರಿಗೆ ಅನ್ಯಾಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಬರಕಾಸ್ತು ಮಾಡಿ ಎಂದು ಖುದ್ದು ಗಾಂಧೀಜಿ ಹೇಳಿದ್ದರು ಎಂದು ಮಾಜಿ ಸಚಿವ, ವಿಧಾನಸಭೆಯ ಬಿಜೆಪಿ ಪಕ್ಷದ ಉಪ ನಾಯಕ ಗೋವಿಂದ ಕಾರಜೋಳ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ