ಆ್ಯಪ್ನಗರ

ನಾನು ಮೇಡಂಗಾಗಿ ಸಹಿಸಿಕೊಂಡಿದ್ದೀನಿ, ನೀವು ಚುನಾವಣೆವರೆಗೆ ಸಹಿಸಿಕೊಳ್ಳಿ ಅಷ್ಟೇ; ಆಪ್ತರಿಗೆ ಸಿದ್ದು ಹೀಗೆ ಹೇಳಿದ್ದಾರೆ ಎಂದ ಸಿಟಿ ರವಿ

ಅತಿಯಾಸೆ ಗತಿಕೇಡು ಎನ್ನುವುದು ಹಳೆ ಗಾದೆಯಾಗಿದೆ. ದೇವೇಗೌಡರ ಕುಟುಂಬಕ್ಕೆ ಆಸೆ ಹೆಚ್ಚಾಗಿದೆ. ದೇವೇಗೌಡರಿಂದ ಮೊಮ್ಮಕ್ಕಳವರೆಗೆ ರಾಜಕೀಯ ದುರಾಸೆ ವಿಸ್ತೀರ್ಣವಾಗಿದೆ. ಈ ಬಾರಿ ಜನರು ತಕ್ಕ ಬುದ್ದಿ ಕಲಿಸ್ತಾರೆ ಎಂದರು.

Vijaya Karnataka Web 4 Apr 2019, 5:26 pm
ತುಮಕೂರು: ನಾನು ಮೇಡಂ (ಸೋನಿಯಾಗಾಂಧಿ) ಗೋಸ್ಕರ ಸಹಿಸಿಕೊಂಡಿದ್ದೀನಿ. ನೀವು ಸಹಿಸಿಕೊಳ್ಳಿ. ಲೋಕಸಭೆ ಚುನಾವಣೆ ವರೆಗೂ ಸಹಿಸಿಕೊಳ್ಳಿ. ಸಿದ್ದರಾಮಯ್ಯ, ತಮ್ಮ ಆಪ್ತ ಕಾಂಗ್ರೆಸ್ ಶಾಸಕರ ಬಳಿ‌ ಹೀಗೆ ಹೇಳಿದ್ದಾರೆ. ಮೇ 23 ವರೆಗೂ ಅಷ್ಟೇ ಈ ಸರಕಾರ ಇರೋದು ಎಂದು ಬಿಜೆಪಿ ಶಾಸಕ ಸಿಟಿ ರವಿ ತಿಳಿಸಿದ್ದಾರೆ.
Vijaya Karnataka Web ಸಿಟಿ ರವಿ
ಸಿಟಿ ರವಿ


ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಸಿಟಿ ರವಿ ಮಾತನಾಡಿದರು.

ಅತಿಯಾಸೆ ಗತಿಕೇಡು ಎನ್ನುವುದು ಹಳೆ ಗಾದೆಯಾಗಿದೆ. ದೇವೇಗೌಡರ ಕುಟುಂಬಕ್ಕೆ ಆಸೆ ಹೆಚ್ಚಾಗಿದೆ. ದೇವೇಗೌಡರಿಂದ ಮೊಮ್ಮಕ್ಕಳವರೆಗೆ ರಾಜಕೀಯ ದುರಾಸೆ ವಿಸ್ತೀರ್ಣವಾಗಿದೆ. ಈ ಬಾರಿ ಜನರು ತಕ್ಕ ಬುದ್ದಿ ಕಲಿಸ್ತಾರೆ ಎಂದರು.

ಈ ಬಾರಿ ಮೋದಿ ಅಲೆಯಲ್ಲಿ ಪ್ರತಿಪಕ್ಷಗಳು ಕೊಚ್ಚಿಕೊಂಡು ಹೋಗುತ್ತವೆ. ಪ್ರಮುಖವಾಗಿ ಯುವ ಸಮುದಾಯ ಬಿಜೆಪಿ ಪರವಾಗಿ ಅದರಲ್ಲೂ ಮೋದಿಯ ಪರವಾಗಿ ದನಿ ಎತ್ತುತ್ತಿದ್ದಾರೆ ಎಂದು ಸಿಟಿ ರವಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌