ಆ್ಯಪ್ನಗರ

ರಾಹುಲ್ ಗಾಂಧಿಯನ್ನು ಪಪ್ಪು ಅಂದವರಿಗೆ ನಾಚಿಕೆ ಆಗಲ್ವ: ಎಚ್ ಕೆ ಪಾಟೀಲ್

30 ಸಾವಿರ ಕೋಟಿ ಹಗರಣದ ದಾಖಲೆ ಕಳೆದು ಹೋಗಿವೆ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡುತ್ತಾರೆ. ಮೂರೇ ದಿನದಲ್ಲಿ ದಾಖಲೆ ಇವೆ. ಆದರೆ, ಝೆರಾಕ್ಸ್ ಕಳೆದಿವೆ ಎಂದು ನೆಪ ಹೇಳುತ್ತಾರೆ. ನೀವು ಏನು ಮಾಡುತ್ತಿದ್ದಿರಿ ಎಂದು ಖಾರವಾಗಿ ಪ್ರಶ್ನಿಸಿದರು.

Vijaya Karnataka Web 10 Apr 2019, 3:19 pm
ಬಾಗಲಕೋಟ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪಪ್ಪು ಅಂತ ಮೂದಲಿಸುತ್ತಿದ್ದಿರಿ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಕಿಡಿಕಾರಿದ್ದಾರೆ.
Vijaya Karnataka Web hk


ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೋಫೋರ್ಸ್ ಹಗರಣ ಮುಚ್ಚಿಹಾಕಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದರಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲ. 30 ಸಾವಿರ ಕೋಟಿ ಹಗರಣದ ದಾಖಲೆ ಕಳೆದು ಹೋಗಿವೆ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡುತ್ತಾರೆ. ಮೂರೇ ದಿನದಲ್ಲಿ ದಾಖಲೆ ಇವೆ. ಆದರೆ, ಝೆರಾಕ್ಸ್ ಕಳೆದಿವೆ ಎಂದು ನೆಪ ಹೇಳುತ್ತಾರೆ. ನೀವು ಏನು ಮಾಡುತ್ತಿದ್ದಿರಿ ಎಂದು ಖಾರವಾಗಿ ಪ್ರಶ್ನಿಸಿದರು.

ರಫೇಲ್ ಡೀಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾರ್ಯಾರನ್ನು ಕರೆದುಕೊಂಡು ಹೋಗಿದ್ದರು. ರಕ್ಷಣಾ ಸಚಿವರನ್ನು ಹಾಗೂ ಸೇನಾ ಮುಖ್ಯಸ್ಥರನ್ನು ಕರೆದುಕೊಂಡು ಹೋಗಿದ್ದರಾ? ಎಂದ ಅವರು, ಅಂಬಾನಿ & ಟೀಂ ಕರೆದುಕೊಂಡು ಹೋಗಿರುವುದು ಸರಿಮನಾ ಎಂದು ಪ್ರಶ್ನಿಸಿದರು. ರಫೇಲ್ ಡೀಲ್‌ನಲ್ಲಿ ಮೋದಿ ಸಿಲುಕಿ ಹಾಕಿಕೊಂಡಿದ್ದಾರೆ. ಈಗ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌