ಆ್ಯಪ್ನಗರ

ವೋಟ್‌ ಹಾಕಿದವರಿಗೆ ಮಾತ್ರ ಕ್ಷೌರ ಸೇವೆ

''ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆ ಮತದಾನದ ಹಬ್ಬವಾಗಿದ್ದು, ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ವೇದಿಕೆ ವತಿಯಿಂದ ಕ್ಷೌರ ಕಾಯಕ ಆಂದೋಲನ ಸಂಘಟಿಸಲಾಗಿದೆ,'' ಎಂದು ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಬೈಲಪ್ಪ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು

Vijaya Karnataka Web 12 Apr 2019, 7:54 am
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಏ.18 ಹಾಗೂ 23ರಂದು ಮತದಾನ ಮಾಡಿ ಬಂದವರಿಗೆ ಕ್ಷೌರ ಕಾಯಕ ಮಾಡಲು ಸವಿತಾ ಕ್ಷೇಮಾಭಿವೃದ್ಧಿ ಮತ್ತು ಜಾಗೃತಿ ವೇದಿಕೆ ನಿರ್ಧರಿಸಿದೆ.
Vijaya Karnataka Web Voting


''ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆ ಮತದಾನದ ಹಬ್ಬವಾಗಿದ್ದು, ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ವೇದಿಕೆ ವತಿಯಿಂದ ಕ್ಷೌರ ಕಾಯಕ ಆಂದೋಲನ ಸಂಘಟಿಸಲಾಗಿದೆ,'' ಎಂದು ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಬೈಲಪ್ಪ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು

''ರಾಜ್ಯದಲ್ಲಿ ಏ.18 ಹಾಗೂ 23ರಂದು ತಮ್ಮ ಹಕ್ಕು ಚಲಾಯಿಸಿ ಬಂದವರಿಗೆ ಮಾತ್ರ ಕ್ಷೌರ ಕಾರ್ಯ ಮಾಡಲಾಗುವುದು. ಕ್ಷೌರಕ್ಕೆ ಬಂದವರನ್ನು ಮತದಾನ ಮಾಡಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ತಮ್ಮ ಕಾಯಕ ಮಾಡಲು ಈಗಾಗಲೇ ನಮ್ಮ ಸಮುದಾಯದ ಜನರಿಗೆ ತಿಳಿಸಲಾಗಿದೆ. ಪ್ರತಿಯೊಬ್ಬರೂ ಮತದಾನ ಮಾಡಿ ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು,'' ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ವೇದಿಕೆಯ ಬಿ.ಎಂ.ಶ್ರೀನಿವಾಸ್‌, ಎಚ್‌.ಎನ್‌.ನರಸಿಂಹಮೂರ್ತಿ, ಬಿ.ಶ್ರೀಕಾಂತ್‌, ಮಂಜುನಾಥ್‌ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌