ಆ್ಯಪ್ನಗರ

ತುಮಕೂರಿನಿಂದ ನಾಳೆ ದೇವೇಗೌಡರ ನಾಮಪತ್ರ ಸಲ್ಲಿಕೆ

ದೇವೇಗೌಡರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ.‌ ಅದಕ್ಕಾಗಿ ಕಾರ್ಯಕರ್ತರು ನಮ್ಮ ಕಾರ್ಯತಂತ್ರದಂತೆ ಕೆಲಸ ಮಾಡಬೇಕು. ಒಂದು ವೇಳೆ ದೇವೇಗೌಡರು ಸ್ಪರ್ಧೆಯಿಂದ ಹಿಂದೆ ಸರಿದಲ್ಲಿ ಆಗ ಕ್ಷೇತ್ರವನ್ನು ಮುದ್ದಹನುಮೇಗೌಡ ಅವರಿಗೆ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.

Vijaya Karnataka Web 24 Mar 2019, 3:32 pm
ತುಮಕೂರು: ಮಾ.25 ರ ಸೋಮವಾರ ತುಮಕೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ತಿಳಿಸಿದರು.
Vijaya Karnataka Web HD Devegowda


ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ನಡೆದ ಬ್ಲಾಕ್ ಕಾಂಗ್ರೆಸ್ ಮುಖಂಡರೊಂದಿಗಿನ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ದೇವೇಗೌಡರನ್ನು ಗೆಲ್ಲಿಸುವ ಜವಬ್ದಾರಿ ನಮ್ಮ ಮೇಲಿದೆ.‌ ಅದಕ್ಕಾಗಿ ಕಾರ್ಯಕರ್ತರು ನಮ್ಮ ಕಾರ್ಯತಂತ್ರದಂತೆ ಕೆಲಸ ಮಾಡಬೇಕು. ಒಂದು ವೇಳೆ ದೇವೇಗೌಡರು ಸ್ಪರ್ಧೆಯಿಂದ ಹಿಂದೆ ಸರಿದಲ್ಲಿ ಆಗ ಕ್ಷೇತ್ರವನ್ನು ಮುದ್ದಹನುಮೇಗೌಡ ಅವರಿಗೆ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ದೂರ ಇಡಲು ಮೈತ್ರಿ:
'ಕೇಂದ್ರ ಸರಕಾರ ರೈತರಿಗೆ ಯಾವುದೇ ದೊಡ್ಡ ಯೋಜನೆ, ಕಾರ್ಯಕ್ರಮ ಅನುಷ್ಟಾನ ಮಾಡಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಗೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡ ದೊಡ್ಡ ಉದ್ದಿಮೆದಾರರು ಮೋಸ ಮಾಡಿದಾಗ ಅವರನ್ನು ಕಾನೂನಿನ ಚೌಕಟ್ಟಿನೊಳಗೆ ತಂದು ಕ್ರಮ ಕೈಗೊಳ್ಳಲಿಲ್ಲ.'

ತುಮಕೂರಿನಲ್ಲಿ ಮೋದಿ v/s ದೇವೇಗೌಡ: ಸುರೇಶ್ ಗೌಡ ಭವಿಷ್ಯ

'ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಇಡೀ ದೇಶವೇ ಹೇಳಿದರೂ ಸತ್ಯಾಸತ್ಯತೆ ತಿಳಿಯಲು ಜೆಪಿಸಿ ರಚನೆ ಮಾಡಲಿಲ್ಲ.
ಇಂತಹ ಅನೇಕ ವಿಚಾರದಲ್ಲಿ ಬಿಜೆಪಿ ವಿಫಲವಾಗಿದೆ. ಹೀಗಾಗಿ ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡಬಾರದೆಂದು ನಾವು ಮೈತ್ರಿ ಜೊತೆಗೆ ಚುನಾವಣೆಗೆ ಹೊರಟಿದ್ದೇವೆ.'

'ಜೆಡಿಎಸ್ ಗೆ ಬಿಟ್ಟು ಕೊಟ್ಟಿರುವ 8 ಕ್ಷೇತ್ರದಲ್ಲಿ ತುಮಕೂರು ಒಂದು. ಇಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂದು ನಮಗೆ ಮೊದಲು ಗೊತ್ತಿರಲಿಲ್ಲ. ಬಳಿಕ ಹಿರಿಯರಾದ ದೇವೇಗೌಡ ಅವರೇ ಸ್ಪರ್ಧಿಸುವುದಾಗಿ ಹೇಳಿದರು. ಆ ಬಳಿಕ ಮುದ್ದಹನುಮೇಗೌಡ ಅವರ ಸ್ಪರ್ಧೆಯನ್ನು ಪರಿಗಣಿಸಲು ನಮಗೆ ಸಾಧ್ಯವಾಗಲಿಲ್ಲ.

ಪಕ್ಷ ಹಾಗೂ ದೇಶದ ದೃಷ್ಟಿಯಿಂದ ಬಿಜೆಪಿಯನ್ನು ಸೋಲಿಸಲು ಮುದ್ದಹನುಮೇಗೌಡ ಅವರ ಸಹಕಾರ ಅಗತ್ಯ. ನಮಗೆ ಕಾಂಗ್ರೆಸ್ ಪಕ್ಷದಲ್ಲಿ ದೇವೇಗೌಡ ಅವರನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸಿ ಕಳಿಸುವಂತೆ ಜವಾಬ್ದಾರಿ ವಹಿಸಿದ್ದಾರೆ. ಮಾ.25 ರಂದು ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಆ ನಂತರ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು' ಎಂದರು.

ಮುದ್ದಹನುಮೇಗೌಡ ಅವರ ಕ್ರಿಯಾಶೀಲತೆಗೆ ಮುಂದೆ ಸೂಕ್ತ ಅವಕಾಶ ಪಕ್ಷದಿಂದ ನೀಡುವ ವಿಶ್ವಾಸವಿದೆ. ಅವರನ್ನು ಭೇಟಿ ಮಾಡಿ ಬಿಜೆಪಿ ವಿರುದ್ಧದ ಹೋರಾಟಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಡಿಸಿಎಂ ಸಭೆಯಿಂದ ಹೊರನಡೆದ ರಾಯಸಂದ್ರ ರವಿಕುಮಾರ್:
ತುಮಕೂರಿನಿಂದ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಡಿಸಿಎಂ ಪರಮೇಶ್ವರ್‌ ಪ್ರಕಟಣೆ ಹಿನ್ನೆಲೆಯಲ್ಲಿ,
ಪಕ್ಷದ ನಾಯಕರ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಮೇಶ್ವರ್‌ ನಿವಾಸದಲ್ಲಿ ಇಂದು ನಡೆದ ಸಭೆಯಲ್ಲಿ ದೇವೇಗೌಡರನ್ನು ಬೆಂಬಲಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ರವಿಕುಮಾರ್‌, ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಸಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.

ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ರವಿಕುಮಾರ್, ಕಣ್ಣೀರು ಹಾಕುತ್ತಲೇ ಸಭೆಯಿಂದ ಹೊರನಡೆದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದ ರಾಯಸಂದ್ರ ರವಿಕುಮಾರ್, ವರಿಷ್ಠರ ನಡೆಯನ್ನು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌