ಆ್ಯಪ್ನಗರ

ನಾನು, ಡಿಕೆಶಿ ನಿಜವಾದ ಜೋಡೆತ್ತುಗಳು ಎಂದ ಕುಮಾರಸ್ವಾಮಿ, ಯಶ್‌, ದರ್ಶನ್‌ಗೆ ಟಾಂಗ್‌ ಕೊಟ್ಟ ಎಚ್‌ಡಿಕೆ

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು, ನನ್ನ ಸೋದರ ಸಮಾನರು ಆದ ಡಿಕೆ ಶಿವಕುಮಾರ್‌ ನಿಜವಾದ ಜೋಡೆತ್ತುಗಳು. ಕೆಲವು ಶೋಕಿಗಾಗಿ ಕೃಷಿ ಮಾಡುವ ಖಯಾಲಿ ಬೆಳೆಸಿಕೊಂಡಿದ್ದಾರೆ. ಆದರೆ ನಾವಿಬ್ಬರು ನಿಜವಾದ ರೈತರು ಎಂದು ಕುಮಾರಸ್ವಾಮಿ ತಿಳಿಸಿದರು.

Vijaya Karnataka Web 25 Mar 2019, 6:01 pm
ಮಂಡ್ಯ: ಮಂಡ್ಯದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್‌ ನಾಮಪತ್ರ ಸಲ್ಲಿಕೆಯಾದ ನಂತರ ಚುನಾವಣೆ ಕಣ ಇನ್ನಷ್ಟು ಬಿಸಿಯೇರಿದೆ.
Vijaya Karnataka Web ಎಚ್‌ಡಿ ಕುಮಾರಸ್ವಾಮಿ
ಎಚ್‌ಡಿ ಕುಮಾರಸ್ವಾಮಿ


ನಿಖಿಲ್‌ ನಾಮಮಪತ್ರ ಸಲ್ಲಿಕೆ ನಂತರ ಸಾರ್ವಜನಿಕ ಸಮಾರಂಭದಲ್ಲಿ ಕುಮಾರಸ್ವಾಮಿ ಮಾತನಾಡಿದರು.

ಜೆಡಿಎಸ್‌ನ ಪ್ರಚಾರ ವಾಹನವೇ ವೇದಿಕೆಯಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿನಿ ತಾರೆಯರಾದ ದರ್ಶನ್‌ ಮತ್ತು ಯಶ್‌ಗೆ ಟಾಂಗ್‌ ಕೊಟ್ಟರು.

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು, ನನ್ನ ಸೋದರ ಸಮಾನರು ಆದ ಡಿಕೆ ಶಿವಕುಮಾರ್‌ ನಿಜವಾದ ಜೋಡೆತ್ತುಗಳು. ಕೆಲವು ಶೋಕಿಗಾಗಿ ಕೃಷಿ ಮಾಡುವ ಖಯಾಲಿ ಬೆಳೆಸಿಕೊಂಡಿದ್ದಾರೆ. ಆದರೆ ನಾವಿಬ್ಬರು ನಿಜವಾದ ರೈತರು ಎಂದು ಕುಮಾರಸ್ವಾಮಿ ತಿಳಿಸಿದರು.

ಮಂಡ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್‌ಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ರಾಕಿಂಗ್ ಸ್ಟಾರ್‌ ಯಶ್‌ ಬೆಂಬಲ ನೀಡಿದ್ದಾರೆ. ಅಲ್ಲದೇ ನಾಮಪತ್ರ ಸಲ್ಲಿಕೆ ವೇಳೆ ನಾವು ಜೋಡೆತ್ತುಗಳು ಸುಮಲತಾಮ್ಮ ಅವರ ಪರವಾಗಿ ಬೆಂಬಲ ಮಾಡುತ್ತೇವೆ ಎಂದು ಹೇಳಿದ್ದರು.

ಇದಕ್ಕೆ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಮಂಡ್ಯದಲ್ಲಿ ಪ್ರಚಾರ ಮಾಡಲು ಜೋಡೆತ್ತುಗಳು ಬರುವುದಾಗಿ ಹೇಳಿದ್ದಾರೆ. ಅವರು ಹೊಲದಲ್ಲಿ ಬೆಳೆ ಮೇಯ್ದು ಹೋಗಲು ಬರುತ್ತವೆ. ಇಂಥ ಜೋಡೆತ್ತುಗಳ ಬೇಕಾ ಎಂದರು.

ಅವರು ಆಡಿರುವ ಮಾತುಗಳನ್ನು ಕೇಳಿದರೆ ಮಂಡ್ಯದ ಜನ ಹೊಡೆಯುತ್ತಾರೆ ಎಂದು ದರ್ಶನ್‌ಗೆ ಕುಟುಕಿದರು ಕುಮಾರಸ್ವಾಮಿ.

ರಾಜ್ಯದ ಅಭಿವೃದ್ಧಿ, ಮಂಡ್ಯದ ಅಭಿವೃದ್ಧಿಗೆ ನಾನು, ಡಿಕೆಶಿ ಶ್ರಮ ಪಟ್ಟಿದ್ದೇವೆ. ಮುಂದೆಯೂ ಅಭಿವೃದ್ಧಿ ಪರ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತೇವೆ. ಆದರೆ ಸಿನಿ ತಾರೆಯರ ರೀತಿಯಲ್ಲಿ ಮಂಡ್ಯ ರೈತರ ಮುಗ್ಧತೆ, ಪ್ರಾಮಾಣಿಕತೆಯನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ