ಆ್ಯಪ್ನಗರ

ಮೈಸೂರು ಅಲ್ಲ, ನಾನೀಗ ಬಾದಾಮಿಯವನು: ಸಿದ್ದರಾಮಯ್ಯ

ಪ್ರತಿ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಿದ್ದು ನಾವು. ಯಡಿಯೂರಪ್ಪ ಮಾಡಲಿಲ್ಲ. ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ, ಹೇಮರೆಡ್ಡಿ, ಟಿಪ್ಪು ಜಯಂತಿ ಮಾಡಿದ್ದು ನಾನು. ನಾನು ಹೇಗೆ ಜಾತಿವಿರೋಧಿ ಆಗ್ತೀನಿ ಎಂದು ಪ್ರಶ್ನಿಸಿದರು.

Vijaya Karnataka Web 3 Apr 2019, 10:29 pm
ಬಾದಾಮಿ: ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ಇಂತಹ ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ ಸಮಾನತೆ ಸಾರಿದ್ರು. ಇವತ್ತಿನ ಪಾರ್ಲಿಮೆಂಟ್ ಬಸವಣ್ಣನವರ ಅನುಭವ ಮಂಟಪ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Vijaya Karnataka Web ಸಿದ್ದರಾಮಯ್ಯ
ಸಿದ್ದರಾಮಯ್ಯ


ಬಾದಾಮಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡಿದರು.

ಪ್ರತಿ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಿದ್ದು ನಾವು. ಯಡಿಯೂರಪ್ಪ ಮಾಡಲಿಲ್ಲ. ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ, ಹೇಮರೆಡ್ಡಿ, ಟಿಪ್ಪು ಜಯಂತಿ ಮಾಡಿದ್ದು ನಾನು. ನಾನು ಹೇಗೆ ಜಾತಿವಿರೋಧಿ ಆಗ್ತೀನಿ ಎಂದು ಪ್ರಶ್ನಿಸಿದರು.

ಬಸವಣ್ಣನವರನ್ನು ಒಪ್ಪಿಕೊಳ್ಳೋದಾದ್ರೆ ನನ್ನನ್ನು ಒಪ್ಪಿಕೊಳ್ಳಿ. ಬಸವಣ್ಣನವರು ಹೇಳಿದಂತೆ ನಡೆದಿದ್ದೇನೆ. ಬಸವಣ್ಣನವರು, ಕನಕದಾಸರ ತತ್ವಗಳಲ್ಲಿ ನಂಬಿಕೆಯಿಟ್ಟುಕೊಂಡವನು ಇದನ್ನು ವಿರೋಧಿಸಿವರು ಬಿಜೆಪಿಯವರು ಎಂದು ಸಿದ್ದರಾಮಯ್ಯ ತಿಳಿಸಿದರು.

ಐದು ವರ್ಷಗಳಲ್ಲಿ ಮೋದಿಯವರು ಏನಾದ್ರೂ ಮಾಡಿದ್ರಾ.? ಗದ್ದಿಗೌಡರ್ ಮೋದಿ ಮುಖ ನೋಡಿ ವೋಟ್ ಹಾಕಿ ಅಂತಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿನಿ ಅಂದಿದ್ರು ಮೋದಿ. ಅಚ್ಛೆ ದಿನ್ ಆಯೇಗಾ ಎಂದಿದ್ರು. ಕಬ್ ಆಯೇಗಾ. ಈಗ ಮೋದಿ ಚೌಕಿದಾರ ಎನ್ನುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿರುವವರೆಲ್ಲರೂ ಜೈಲಿಗೆ ಹೋಗಿ ಬಂದವರೇ ಎಂದು ಕಿಚಾಯಿಸಿದರು.

ಬಿಜೆಪಿಯವರಿಗೆ ನಾಚಿಕೆಯಿಲ್ಲ, ಮಾನ ಮರ್ಯಾದೆ ಇಲ್ಲ. 56 ಇಂಚಿನ ಎದೆಯೊಳಗೆ ಸಿದ್ದರಾಮಯ್ಯ ರೀತಿಯ ಅಂತ:ಕರಣವಿರಬೇಕು. ರೈತರ ಸಾಲಮನ್ನಾ ಮಾಡಿ ಎಂದ್ರೆ ಮೋದಿ ಮಾಡಲಿಲ್ಲ. 2009 ಡಿಸೆಂಬರ್ ನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಯಡಿಯೂರಪ್ಪಗೆ ಸಾಲಮನ್ನಾ ಮಾಡಿ ಎಂದಿದ್ದೆ. ನಮ್ಮ ಬಳಿ ನೋಟ್ ಪ್ರಿಂಟ್ ಹಾಕುವ ಮಶೀನ್ ಇಲ್ಲ ಎಂದಿದ್ರು. ಬಿಜೆಪಿಯವರು ರೈತ ದ್ರೋಹಿಗಳೆಂದು ಕರೆಯಬೇಕು ಎಂದರು.

ಮೈಸೂರು ಅಲ್ಲ, ನಾನೀಗ ಬಾದಾಮಿಯವನು.

ಮೈಸೂರಲ್ಲಿ ನಾನು ಹುಟ್ಟಿ ಬೆಳೆದಿರಬಹುದು, ಬಾಗಲಕೋಟೆ ಲೋಕಸಭಾ ಗೆಲ್ಲಲೇಬೇಕು. ಬಾದಾಮಿಯಿಂದ 50 ಸಾವಿರ ಲೀಡ್ ಕೊಡಬೇಕು. ಅಂದಾಗ ನನಗೂ ಮರ್ಯಾದೆ, ನಿಮಗೂ ಮರ್ಯಾದೆ. ಕೈ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರನ್ನು ಗೆಲ್ಲಿಸಬೇಕೆಂದು ಸಿದ್ದರಾಮಯ್ಯ ಕರೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌