ಆ್ಯಪ್ನಗರ

ನನಗೂ ಸಿಎಂ ಆಗುವಾಸೆಯಿದೆ: ಎಂಬಿ ಪಾಟೀಲ್

ಸಿದ್ದರಾಮಯ್ಯ ಅವರಿಗೆ ಇನ್ನೊಮ್ಮೆ ಮುಖ್ಯಮಂತ್ರಿ ಆಗುವ ಅರ್ಹತೆಯಿದೆ. ಸಿದ್ದರಾಮಯ್ಯ ನಂತರದ ಸರದಿ ನನ್ನದೇ. ಅವರ ಬಳಿಕ ನಾನು ಸಿಎಂ ಆಗುತ್ತೇನೆ ಎಂದು ಎಂಬಿಪಿ ಹೇಳಿಕೊಂಡರು.

Vijaya Karnataka Web 21 Apr 2019, 4:02 pm
ವಿಜಯಪುರ: ನನಗೂ ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ ದುರಾಸೆಯಿಲ್ಲ ಎಂದು ಗೃಹ ಸಚಿವ ಎಂ.ಬಿ ಪಾಟೀಲ್‌ ಹೇಳಿದ್ದಾರೆ.
Vijaya Karnataka Web MB Patil


ವಿಜಯಪುರದ ಬಬಲೇಶ್ವರದಲ್ಲಿ ಮಾತನಾಡಿದ ಅವರು, ಸಿಎಂ ಆಗುವ ಆಸೆ ಎಲ್ಲರಿಗೂ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಎಂಬಿ ಪಾಟೀಲ್ ಸಮರ್ಥಿಸಿಕೊಂಡರು.

ಸಿದ್ದರಾಮಯ್ಯ ಅವರಿಗೆ ಇನ್ನೊಮ್ಮೆ ಮುಖ್ಯಮಂತ್ರಿ ಆಗುವ ಅರ್ಹತೆಯಿದೆ. ಸಿದ್ದರಾಮಯ್ಯ ನಂತರದ ಸರದಿ ನನ್ನದೇ. ಅವರ ಬಳಿಕ ನಾನು ಸಿಎಂ ಆಗುತ್ತೇನೆ ಎಂದು ಎಂಬಿಪಿ ಹೇಳಿಕೊಂಡರು.

ಐಟಿ ದಾಳಿಗೆ ಖಂಡನೆ:

'ನನ್ನ ಸಂಬಂಧಿಕರು ಹಾಗೂ ಸ್ನೇಹಿತರ ಮನೆ ಮೇಲೆ ನಾಳೆಯೂ ಐಟಿ ದಾಳಿ ಆಗಬಹುದು. ಅವರ ಮನೆಯಲ್ಲಿ 6 ಲಕ್ಷ ನಗದು ಇರಬಹುದು. ಆಪರೇಷನ್ ಕಮಲ ಮಾಡುವರ ಮನೆಯಲ್ಲೂ ಐಟಿ ದಾಳಿ ಆಗಲಿ. ಕೋಟಿಗಟ್ಟಲೆ ಡೀಲ್ ಮಾಡುವವರ ಮೇಲೆ ದಾಳಿ ಆಗಲಿ' ಎಂದು ಎಂ.ಬಿ ಪಾಟೀಲ್‌ ಹೇಳಿದರು.

ಐಟಿ ಇಲಾಖೆ ಮಹತ್ವ ಕಳೆದುಕೊಂಡಿದೆ. ಐಟಿ ಇಲಾಖೆ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಾರೆ. ಎದುರಾಳಿಗಳ ಮೇಲೆ ಐಟಿ ದಾಳಿ ಸರಿಯಲ್ಲ. ಇದು ಹೀಗೆ ಇರೋದಿಲ್ಲ. ಕಾಲಚಕ್ರ ತಿರುಗುತ್ತಲೇ ಇರುತ್ತದೆ ಎಂದು ಪಾಟೀಲ್‌ ಕಿಡಿ ಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ