ಆ್ಯಪ್ನಗರ

ಬೈ ಎಲೆಕ್ಷನ್ ಎರಡು ಕ್ಷೇತ್ರದಲ್ಲಿ ಗೆದ್ರೆ ಸರಕಾರ ರಚನೆ ಮಾಡಿಯೆ ಸಿದ್ದ: ಯಡಿಯೂರಪ್ಪ

ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರಕ್ಕೆ ಬಂದ ಅವರು, ಪ್ರಚಾರ ಮಗಿಸಿ‌ ಚಿಂಚೋಳಿ ಕ್ಷೇತ್ರಕ್ಕೆ ಹೋಗಿ ಮೇ 16-17 ದಿನಾಂಕ ರಂದು ಮತ್ತೇ ಕ್ಷೇತ್ರಕ್ಕೆ ಬೇಟಿ ಕೊಡುತ್ತೆನೆ ಎಂದು ಹೇಳಿದರು.

Vijaya Karnataka Web 12 May 2019, 1:53 pm
ಹುಬ್ಬಳ್ಳಿ: ಕುಂದಗೋಳ ಹಾಗೂ ಚಿಂಚೋಳಿ ಕ್ಷೆತ್ರಗಳಲ್ಲಿ ನಾವು ಗೆದ್ದರೆ, ಸರಕಾರ ರಚನೆ ಮಾಡಿಯೇ ಸಿದ್ದ ಎಂದು ಬಿಜೆಪ ರಾಜ್ಯದ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ


ಸುದ್ದಿಗಾರರೊಂದಿಗೆ ಯಡಿಯೂರಪ್ಪ ಮಾತನಾಡಿದರು.

ಕುಂದಗೋಳ ಕ್ಷೇತ್ರದ ಜಿಜೆಪಿ ಆಕಾಂಕ್ಷಿ ಎಸ್ ಐ ಚಿಕ್ಕನಗೌಡ್ರು 25 ಸಾವಿರ ಅಂತರದಿಂದ ಗೆಲ್ತಾರೆ, ಸುಲಭವಾಗಿ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ ಯಾವುದೇ ಗ್ರಾಮದಲ್ಲಿ ನಮಗೆ ಹಿನ್ನಡೆಯಾಗಿಲ್ಲಾ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದರು.

ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರಕ್ಕೆ ಬಂದ ಅವರು, ಪ್ರಚಾರ ಮಗಿಸಿ‌ ಚಿಂಚೋಳಿ ಕ್ಷೇತ್ರಕ್ಕೆ ಹೋಗಿ ಮೇ 16-17 ದಿನಾಂಕ ರಂದು ಮತ್ತೇ ಕ್ಷೇತ್ರಕ್ಕೆ ಬೇಟಿ ಕೊಡುತ್ತೆನೆ ಎಂದು ಹೇಳಿದರು.

ಡಿ ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದ ಅವರು, ನಮ್ಮ ಪಕ್ಷದವರಿಗೆ ಎಷ್ಟೇ ಆಮಿಷ ಒಡ್ಡಿದ್ರು ನಮ್ಮ ಪಕ್ಷದವರು ಯಾರು ಕಾಂಗ್ರೆಸ್ ಪಕ್ಷಕ್ಕೆ ಹೊಗಲ್ಲ,ಡಿ ಕೆ ಶಿವಕುಮಾರ್ ಸೇರಿದಂತೆ ಎಷ್ಟೇ ಹಿರಿಯ ನಾಯಕರ ಪ್ರಯತ್ನ ಮಾಡಿದ್ರು ಬಿಜೆಪಿ ಬಿಟ್ಟು ಹೋಗಲು ಸಾದ್ಯವಿಲ್ಲ ಎಂದು ಬಿಎಸ್‌ವೈ ವಿಶ್ವಾಸ ವ್ಯಕ್ತ ಪಡಿಸಿದರು.

ಸಮ್ಮಿಶ್ರ ಸರಕಾರ ಅಸ್ಥಿರ ಗೊಳಿಸುವ ಪ್ರಶ್ನೆ ಇಲ್ಲ. ಅವರೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಅವರು ಹೊಡೆದಾಡಿಕೆಂಡರೆ, ಅದಕ್ಕೆ ನಾವು ಹೊಣೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಯಡಿಯೂರಪ್ಪ ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌