ಆ್ಯಪ್ನಗರ

ನಿಯತ್ತಿದ್ರೆ ನಿಖಿಲ್‌ಗೆ ವೋಟ್‌ ಮಾಡಿ, ಇಲ್ಲ ದೇವ್ರು ಒಳ್ಳೆದ ಮಾಡಲ್ಲ: ತಮ್ಮಣ್ಣ

ಎಳನೀರು ಮಾರುಕಟ್ಟೆ ಅಭಿವೃದ್ಧಿಗೆ ಕೋಟ್ಯಂತರ ರೂ. ಹಣ ತಂದಿದ್ದೇನೆ. ಅಭಿವೃದ್ಧಿ ಬಗ್ಗೆ ಟೀಕೆ ಮಾಡುವ ಮಗ ಯಾವನೂ ಇಲ್ಲ, ಅಪ್ಪನಿಗೆ ಹುಟ್ಟಿದ್ರೆ ಟೀಕೆ ಮಾಡ್ರೀ,'' ಎಂದು ಸವಾಲು ಹಾಕಿದರು.

Vijaya Karnataka 31 Mar 2019, 7:43 am
ಮಂಡ್ಯ: ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ದೇವೇಗೌಡ, ಕುಮಾರಸ್ವಾಮಿ ಮತ್ತು ನಾನು ಬಹಳಷ್ಟು ಪ್ರಯತ್ನ ಪಟ್ಟಿದ್ದೀವಿ. ನಿಮಗೆ ನೀತಿ, ನಿಯತ್ತು ಇದ್ರೆ ನಿಖಿಲ್‌ಗೆ ವೋಟ್‌ ಮಾಡಿ, ಇಲ್ಲಾಂದ್ರೆ ದೇವರು ನಿಮಗೆ ಒಳ್ಳೆಯದು ಮಾಡಲ್ಲ,'' ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ನೀಡಿದ್ದಾರೆ.
Vijaya Karnataka Web nikhil kumaraswamy


ಮದ್ದೂರು ಎಳನೀರು ಮಾರುಕಟ್ಟೆ ಬಳಿ ಶನಿವಾರ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ನಡೆಸಿದ ಅವರು ''ಎಳನೀರು ಮಾರುಕಟ್ಟೆ ಅಭಿವೃದ್ಧಿಗೆ ಕೋಟ್ಯಂತರ ರೂ. ಹಣ ತಂದಿದ್ದೇನೆ. ಅಭಿವೃದ್ಧಿ ಬಗ್ಗೆ ಟೀಕೆ ಮಾಡುವ ಮಗ ಯಾವನೂ ಇಲ್ಲ, ಅಪ್ಪನಿಗೆ ಹುಟ್ಟಿದ್ರೆ ಟೀಕೆ ಮಾಡ್ರೀ,'' ಎಂದು ಸವಾಲು ಹಾಕಿದರು.

''ಎಳನೀರು ಮಾರುಕಟ್ಟೆ ಚರಿತ್ರೆ ನನಗೆ ಗೊತ್ತು. ಹಣ, ಮಜಾ ಮಾಡ್ಕೊಂಡು ಟೀಕೆ ಮಾಡ್ತಿರೇನ್ರೀ. ಅಂತಹವರು ಯಾರಾರು ಇದ್ರೆ ಮುಂದೆ ಬನ್ನಿ,'' ಎಂದು ಪಂಥಾಹ್ವಾನ ನೀಡಿದರು.

''ಕೋಟ್ಯಂತರ ರೂಪಾಯಿ ತಂದು ಅಭಿವೃದ್ಧಿ ಮಾಡಿದ್ದೀನಿ. ಇಲ್ಲಿ ಯಾರಾರ‍ಯರೋ ಬಂದು ಮಾತನಾಡುತ್ತಿದ್ದಾರೆ. ಅಂಥವರಿಗೆಲ್ಲ ವೋಟು ಕೊಡಬೇಡಿ, ನಿಜವಾದ ಅಭಿವೃದ್ಧಿ ಮಾಡುವವರಿಗೆ ವೋಟ್‌ ಕೊಡಿ,''ಎಂದರು.

ಕ್ಷಮೆಯಾಚನೆ

ನಂತರ ಮದ್ದೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ತಮ್ಮಣ್ಣ, ತಮ್ಮ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸಿದರು. ಆವೇಶದಲ್ಲಿ ಆರೀತಿ ಹೇಳಿಕೆ ನೀಡಿದ್ದೇನೆ, ಯಾರಿಗಾದರೂ ನೋವಾದರೆ ಕ್ಷಮೆ ಇರಲಿ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ