ಆ್ಯಪ್ನಗರ

ಬೆಳಗಾವಿ: ಪಕ್ಷೇತರರ ನಾಮಪತ್ರ ಹಿಂತೆಗೆತ, ಬಿಜೆಪಿಗೆ ಬೆಂಬಲ ಘೋಷಣೆ

ಚುನಾವಣೆ ಆಗಬಾರದು ಎಂದು 100 ಜನರನ್ನು ನಿಲ್ಲಿಸಲು ಕಾಂಗ್ರೆಸ್ ಷಡ್ಯಂತ್ರ ಮಾಡಿತ್ತು. ಚುನಾವಣೆ ಮುಂದೂಡಲು ಯತ್ನಿಸಿತ್ತು. ಆದರೆ ಅಷ್ಟೊಂದು ಜನರು ಸಿಕ್ಕಲಿಲ್ಲ. ಕಾಂಗ್ರೆಸ್ ಹಿಂದೆಯೂ ಹೀಗೆ ಮಾಡಿತ್ತು. ಕಾಂಗ್ರೆಸ್ ಈ ರೀತಿಯ ಕುತಂತ್ರಗಳನ್ನು ಬಿಟ್ಟರೆ ಒಳಿತು

Vijaya Karnataka Web 8 Apr 2019, 4:10 pm
ಬೆಳಗಾವಿ: ಚುನಾವಣೆ ಕಣದಲ್ಲಿದ್ದ ಆರು ಪಕ್ಷೇತರರು ನಾಮಪತ್ರ ಹಿಂಪಡೆದು ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುರೇಶ್‌ ಅಂಗಡಿ ಸ್ಪಷ್ಟಪಡಿಸಿದ್ದಾರೆ.
Vijaya Karnataka Web ಪಕ್ಷೇತರರ ನಾಮಪತ್ರ ವಾಪಸ್‌
ಪಕ್ಷೇತರರ ನಾಮಪತ್ರ ವಾಪಸ್‌


ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ನಿವಾಸದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಚುನಾವಣೆ ಆಗಬಾರದು ಎಂದು 100 ಜನರನ್ನು ನಿಲ್ಲಿಸಲು ಕಾಂಗ್ರೆಸ್ ಷಡ್ಯಂತ್ರ ಮಾಡಿತ್ತು. ಚುನಾವಣೆ ಮುಂದೂಡಲು ಯತ್ನಿಸಿತ್ತು. ಆದರೆ ಅಷ್ಟೊಂದು ಜನರು ಸಿಕ್ಕಲಿಲ್ಲ. ಕಾಂಗ್ರೆಸ್ ಹಿಂದೆಯೂ ಹೀಗೆ ಮಾಡಿತ್ತು. ಕಾಂಗ್ರೆಸ್ ಈ ರೀತಿಯ ಕುತಂತ್ರಗಳನ್ನು ಬಿಟ್ಟರೆ ಒಳಿತು ಎಂದರು.

ಬೆಳಗಾವಿ ಕ್ಷೇತ್ರದಲ್ಲಿ ಒಟ್ಟು 64 ಜನರ ಪೈಕಿ 7 ಜನ ಹಿಂಪಡೆದಿದ್ದಾರೆ.
ಕಾಂಗ್ರೆಸ್ ಜಾತಿ, ಭಾಷೆ ಒಡೆಯುವ ಕೆಲಸ ಮಾಡುತ್ತ ಬಂದಿದೆ. ಎಂಇಎಸ್ ಹೆಸರಿನಲ್ಲಿ ಕಾಂಗ್ರೆಸ್ ಇದೆಲ್ಲ ಮಾಡುತ್ತಿದೆ ಎಂದು ಆರೋಪಿಸಿದರು.


ಬಿಜೆಪಿ ವಕ್ತಾರ, ವಕೀಲ ಎಂ.ಬಿ. ಜಿರಲಿ ಮಾತನಾಡಿ, ಭಾರತ ಜಗತ್ತಿನ ಮೂರನೇ ಬಲಿಷ್ಠ ದೇಶ ಮಾಡುವ ರೀತಿಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದರು.

ಸ್ಥಳೀಯ ಮಟ್ಟದ ಹಲವಾರು ಬಿಜೆಪಿ ನಾಯಕರು, ಕಾರ್ಯಕರ್ತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌