ಆ್ಯಪ್ನಗರ

ಚುನಾವಣಾ ಸಿಬ್ಬಂದಿಗೆ ಅಕ್ಷಯಪಾತ್ರೆ ಶುಚಿ-ರುಚಿ ಆಹಾರ ಪೂರೈಕೆ

ಮತದಾನ ಪೂರ್ವದಿನವಾದ ಇಂದು (ಏ.22) ರಾತ್ರಿ ತರಕಾರಿ ಪಲಾವ್, ಮೊಸರನ್ನ, ಖಾರಾ ಬೂಂದಿ; ಮತದಾನ ದಿನವಾದ ಏ.23 ರ ಬೆಳಗ್ಗೆ ಉಪಹಾರಕ್ಕೆ ಶಿರಾ, ಉಪ್ಪಿಟ್ಟು, ಮಧ್ಯಾಹ್ನ ಊಟಕ್ಕೆ ಅನ್ನ, ಸಾಂಬಾರು ಪೂರೈಸಲು ರಾಯಪುರದ ಇಸ್ಕಾನ್ ನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Vijaya Karnataka Web 22 Apr 2019, 4:50 pm
ಹುಬ್ಬಳ್ಳಿ: ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶುಚಿ-ರುಚಿಯಾದ ಆಹಾರ ಪೂರೈಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಇಸ್ಕಾನ್ ಸಹಯೋಗದಲ್ಲಿ ಅಕ್ಷಯಪಾತ್ರೆ ಕಾರ್ಯಕ್ರಮದಡಿ ಕ್ರಮ ಕೈಗೊಳ್ಳಲಾಗಿದೆ.
Vijaya Karnataka Web Akshayapatra


ಮತದಾನ ಪೂರ್ವದಿನವಾದ ಏ.22 ರ ರಾತ್ರಿ ತರಕಾರಿ ಪಲಾವ್, ಮೊಸರನ್ನ, ಖಾರಾ ಬೂಂದಿ; ಮತದಾನ ದಿನವಾದ ಏ.23 ರ ಬೆಳಗ್ಗೆ ಉಪಹಾರಕ್ಕೆ ಶಿರಾ, ಉಪ್ಪಿಟ್ಟು, ಮಧ್ಯಾಹ್ನ ಊಟಕ್ಕೆ ಅನ್ನ, ಸಾಂಬಾರು ಪೂರೈಸಲು ರಾಯಪುರದ ಇಸ್ಕಾನ್ ನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಆಹಾರ ಪೂರೈಕೆಗೆ 48 ಮಾರ್ಗಗಳನ್ನು ಗುರುತಿಸಲಾಗಿದೆ. ಪ್ರತಿ ಮಾರ್ಗದ ಮೂಲಕ 30 ರಿಂದ 40 ಮತಗಟ್ಟೆಗಳಿಗೆ ಆಹಾರ ತಲುಪಿಸಲಾಗುವುದು. ಜಿಲ್ಲೆಯ ಎಲ್ಲ 1634 ಮತಗಟ್ಟೆಗಳಿಗೆ ನಿಯೋಜನೆಗೊಂಡಿರುವ ಸುಮಾರು 10 ಸಾವಿರ ಮತದಾನ ಸಿಬ್ಬಂದಿ, 3 ಸಾವಿರ ಸ್ವಯಂ ಸೇವಕರು, 1500 ಬಿಎಲ್ ಓ, ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು 3 ಸಾವಿರಕ್ಕೂ ಅಧಿಕ ಪೊಲೀಸ್, ಅರೆಸೇನಾ ಪಡೆ ಸಿಬ್ಬಂದಿಗೆ ಶುಚಿ- ರುಚಿಯಾದ ಆಹಾರ ಪೂರೈಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌